
ಹುಬ್ಬಳ್ಳಿಯ ಶ್ರೀಮತಿ ಸೀತಾಬಾಯಿ ಶ್ರೀಧರ ಜೋಶಿ (೨೦೨೫ ರಲ್ಲಿ ವಯಸ್ಸು ೯೯ ವರ್ಷಗಳು) ಇವರು ಗೋವಾದ ರಾಮನಾಥಿಯಲ್ಲಿನ ಸನಾತನದ ಆಶ್ರಮಕ್ಕೆ ಬಂದಿದ್ದರು. ಅವರ ಜೊತೆಗೆ ಅವರ ಮಗಳು ಶ್ರೀಮತಿ ಮೀರಾ ಕರಿ (೨೦೨೪ ರಲ್ಲಿ ಆಧ್ಯಾತ್ಮಿಕ ಮಟ್ಟ ಶೇ. ೬೪ ಮತ್ತು ವಯಸ್ಸು ೬೭ ವರ್ಷಗಳು), ಜೋಶಿ ಅಜ್ಜಿಯವರ ಚಿರಂಜೀವ ಮಗ ಮತ್ತು ಅವರ ಸೊಸೆ ಬಂದಿದ್ದರು. ಅವರ ಜೊತೆಗೆ ಜೋಶಿ ಅಜ್ಜಿಯವರ ಮೊಮ್ಮಗಳ ಗಂಡ ಶ್ರೀ. ವಿನಾಯಕ ಶಾನಭಾಗ (೨೦೨೪ ರಲ್ಲಿ ಆಧ್ಯಾತ್ಮಿಕ ಮಟ್ಟ ಶೇ. ೬೮ ಮತ್ತು ವಯಸ್ಸು ೪೨ ವರ್ಷಗಳು) ಮತ್ತು ಮೊಮ್ಮಗಳು ಸೌ. ವಿದ್ಯಾ ಶಾನಭಾಗ ಇವರೂ ಇದ್ದರು. ಇವರೆಲ್ಲರಿಗೂ ಪರಾತ್ಪರ ಗುರು ಡಾ. ಆಠವಲೆಯವರ ಅಮೂಲ್ಯ ಸತ್ಸಂಗ ಲಭಿಸಿತು. ಸತ್ಸಂಗದಲ್ಲಿ ನಡೆದ ಸಂಭಾಷಣೆಯನ್ನು ಮುಂದೆ ಕೊಡಲಾಗಿದೆ.

ಇದರ ನಂತರ ಎರಡೇ ದಿನಗಳಲ್ಲಿ ರಾಮನಾಥಿ ಆಶ್ರಮದಲ್ಲಿ ಶ್ರೀಮತಿ ಸೀತಾಬಾಯಿ ಜೋಶಿ ಇವರ ಸನ್ಮಾನ ಮಾಡಲಾಯಿತು ಮತ್ತು ಅವರು ‘ಸನಾತನದ ೧೦೦ ನೇ ಸಂತ’ರೆಂದು ಸಂತಪದವಿಯಲ್ಲಿ ವಿರಾಜಮಾನರಾದ ಬಗ್ಗೆ ಘೋಷಿಸಲಾಯಿತು.
೨೬/೩೩ ನೇ ಸಂಚಿಕೆಯಲ್ಲಿ ಸಂವಾದದ ಸ್ವಲ್ಪ ಭಾಗವನ್ನು ನೋಡಿದೆವು. ಇಂದು ಅದರ ಮುಂದಿನ ಸಂವಾದವನ್ನು ಇಲ್ಲಿ ನೀಡಲಾಗಿದೆ.
(ಭಾಗ ೨)


೩. ವರದಹಳ್ಳಿಯಲ್ಲಿ ಪೂ ಸೀತಾಬಾಯಿ ಜೋಶಿ ಇವರು ಮಾಡಿದ ಸಾಧನೆ
ಪರಾತ್ಪರ ಗುರು ಡಾ. ಆಠವಲೆ : ಅಜ್ಜಿಯವರದು ಎಲ್ಲವೂ ಅಸಾಮಾನ್ಯವಾಗಿದೆಯಲ್ಲವೇ ? ಯಾರೂ ಗುರು ಇಲ್ಲ ಮತ್ತು ಕಲಿಸುವವರೂ ಇಲ್ಲ.
ಪೂ. ಸೀತಾಬಾಯಿ ಜೋಶಿ : ನನ್ನ ಕನಸಿನಲ್ಲಿ ಸ್ವಾಮೀಜಿ (ಪ.ಪೂ. ಶ್ರೀಧರಸ್ವಾಮೀಜಿ) ಇವರು ಬರುತ್ತಿದ್ದರು. ಅವರು ಬಹಳ ದೊಡ್ಡ ಮಠವನ್ನು ಕಟ್ಟಿದ್ದಾರೆ. ನಾನು ವರದಹಳ್ಳಿಗೆ ೧೪ ವರ್ಷಗಳ ಕಾಲ ಹೋಗಿ ಬಂದು ಮಾಡುತ್ತಿದ್ದೆನು. ನಾನು ಅಲ್ಲಿ ಕಸ ಗುಡಿಸುವುದು, ರಂಗೋಲಿ ಬಿಡಿಸುವುದು ಇಂತಹ ಸೇವೆಯನ್ನು ಬಹಳ ಮಾಡುತ್ತಿದ್ದೆನು. ಅಲ್ಲಿಗೆ ಬರುವ ಭಕ್ತರಿಗೆ ನಾನು ‘ನೀವು ಯಾವ ಸೇವೆ ಮಾಡುತ್ತೀರಿ ? ನಿಮಗೆ ಸ್ವಾಮೀಜಿಯವರ ದರ್ಶನ ಹೇಗೆ ಲಭಿಸಿತು ?’, ಎಂದು ಕೇಳುತ್ತಿದ್ದೆನು. ಅವರು ನನಗೆ ‘ನಾವು ಮಠದಲ್ಲಿ ಹೇಗಿರಬೇಕು ?’, ಎಂಬ ಬಗ್ಗೆ ಹೇಳುತ್ತಿದ್ದರು. ಅದನ್ನು ಕೇಳಿ ನಾನು ಎಲ್ಲವನ್ನೂ ಕಲಿತೆನು. ನನ್ನಲ್ಲಿ ಭಕ್ತಿಭಾವ ಇತ್ತು. ಅದನ್ನು ಬೆಳೆಸಲು ನನಗೆ ಅಲ್ಲಿನ ಭಕ್ತರ ಸಹಾಯ ದೊರಕಿತು. ಅಲ್ಲಿಗೆ ಹೋದಾಗ ನನಗೆ ಬಹಳ ಆನಂದವಾಗುತ್ತಿತ್ತು. ನೀವು (ಪ.ಪೂ. ಡಾಕ್ಟರ್) ಬಂದರೆ ಭಕ್ತರಿಗೆ (ಸಾಧಕರಿಗೆ) ಯಾವ ರೀತಿ ಆನಂದವಾಗುತ್ತದೆಯೋ, ಅದೇ ರೀತಿಯ ಆನಂದ ಅಲ್ಲಿನ ಭಕ್ತರನ್ನು ನೋಡಿ ನನಗೆ ಆಗುತ್ತಿತ್ತು. ‘ಎಲ್ಲ ಜನರು ನಮ್ಮವರೇ ಆಗಿದ್ದಾರೆ’, ಎಂದು ನನಗೆ ಅನಿಸುತ್ತಿತ್ತು. ಇದೆಲ್ಲ ನೋಡಿ ನನಗೆ ಬಹಳ ಆನಂದವಾಗುತ್ತಿತ್ತು. ಈಗ ನನ್ನ ಮನಸ್ಸಿನಲ್ಲಿ ಎಲ್ಲರ ಬಗ್ಗೆ ಆತ್ಮೀಯತೆ ನಿರ್ಮಾಣವಾಗಿದೆ.
ಪರಾತ್ಪರ ಗುರು ಡಾ. ಆಠವಲೆ : ಅಧ್ಯಾತ್ಮದಲ್ಲಿ ಸಾಧಕರನ್ನು ಗುರುತಿಸಲು ಸಾಧ್ಯವಾಗುವುದು, ಇದು ಬಹಳ ಮಹತ್ವದ್ದಾಗಿದೆ.
೪. ಪೂ. ಅಜ್ಜಿಯವರ ಆನಂದಾವಸ್ಥೆಯನ್ನು ನೋಡಿ ಪರಾತ್ಪರ ಗುರು ಡಾಕ್ಟರರು ಅವರಿಗೆ ಹಾಡಲು ಹೇಳುವುದು
ಪೂ. ಸೀತಾಬಾಯಿ ಜೋಶಿ : ನನ್ನ ಒಳಗಡೆ ಆನಂದ ಉಕ್ಕಿ ಹರಿಯುತ್ತಿದೆ. ನನಗೆ ಕುಣಿಯಬೇಕು, ಹಾಡಬೇಕು ಮತ್ತು ಜಿಗಿಯಬೇಕು’, ಎಂದು ಅನಿಸುತ್ತಿದೆ.
ಪರಾತ್ಪರ ಗುರು ಡಾ. ಆಠವಲೆ : ನೀವು ಹಾಡು ಹಾಡಿದ್ದಿರಲ್ಲವೇ, ಅದನ್ನು ಈಗ ಹಾಡಿ.
ಶ್ರೀ. ವಿನಾಯಕ ಶಾನಭಾಗ (ಪೂ. ಅಜ್ಜಿಯವರ ಮೊಮ್ಮಗಳ ಪತಿ) : ಪೂ. ಅಜ್ಜಿ, ಗುರುದೇವರು ನಿಮ್ಮ ಹಾಡುಗಳನ್ನು ಕೇಳಬಯಸುತ್ತಾರೆ, ನೀವು ಹಾಡು ಹೇಳಬಹುದೇ ?
ಸೌ. ವಿದ್ಯಾ ಶಾನಭಾಗ (ಪೂ. ಅಜ್ಜಿಯವರ ಮೊಮ್ಮಗಳು) : ಅಜ್ಜಿ, ನೀನು ಹಾಡು ಹಾಡಿ ತೋರಿಸಲ್ಲ. ಆ ದೀಪಾವಳಿಯ ಹಾಡು ಹಾಡುವೆಯಲ್ಲ, ಅದನ್ನು ಹೇಳು.
೪ ಅ. ಪೂ. ಅಜ್ಜಿಯವರು ಕನ್ನಡದಲ್ಲಿ ಹಾಡಿದ ‘ಬಾರೋ ಕೃಷ್ಣ ಈ ಹಾಡಿನ ಭಾವಾರ್ಥ ! : ‘ಹೇ ದಯಾಳು ಕೃಷ್ಣಾ, ನಮ್ಮೆಲ್ಲರ ಮೇಲೆ ಕೃಪೆ ಮಾಡು. ಯಾವಾಗ ಇಂದ್ರದೇವನು ಗ್ರಾಮಸ್ಥರ ಮೇಲೆ ಕೋಪಗೊಂಡು ಧಾರಾಕಾರ ಮಳೆ ಸುರಿಸುವನೋ, ಆಗ ಗ್ರಾಮಸ್ಥರು ಶ್ರೀಕೃಷ್ಣನಿಗೆ ಶರಣಾಗುತ್ತಾರೆ. ಶ್ರೀಕೃಷ್ಣನು ಎಲ್ಲರನ್ನೂ ಗೋವರ್ಧನ ಪರ್ವತದ ಬಳಿಗೆ ಕರೆಯುತ್ತಾನೆ ಮತ್ತು ತನ್ನ ಕಿರುಬೆರಳಿನಿಂದ ಆ ಪರ್ವತವನ್ನು ಎತ್ತುತ್ತಾನೆ. ಅದರಿಂದ ಅವನಿಗೆ ಶರಣಾದ ಭಕ್ತರ ರಕ್ಷಣೆಯಾಗುತ್ತದೆ. ಇಂತಹ ಆ ಭಗವಂತನನ್ನು ನಾವು ಸ್ತುತಿಸುತ್ತೇವೆ. ರಾಜಸಭೆಯಲ್ಲಿ ದ್ರೌಪದಿಯ ವಸ್ತ್ರಹರಣ ನಡೆದಿರು ವಾಗ ಶ್ರೀಕೃಷ್ಣನು ಅವಳ ಸಹಾಯಕ್ಕಾಗಿ ಧಾವಿಸಿ ಹೋದನು ಮತ್ತು ಅವನು ದ್ರೌಪದಿಯನ್ನು ರಕ್ಷಿಸಿದನು. ಇಂತಹ ಹೇ ದಯಾಳು ಶ್ರೀಕೃಷ್ಣ, ನಮ್ಮೆಲ್ಲರ ಮೇಲೆ ನೀನು ಕೃಪೆ ಮಾಡು !’
೪ ಆ. ‘ಗುರು ಮಹಿಮೆ’ ಈ ಕನ್ನಡ ಗೀತೆಯ ಭಾವಾರ್ಥ ! : ‘ದೊಡ್ಡೇರಿ’ ಕ್ಷೇತ್ರದಲ್ಲಿರುವ ಗುರುಗಳ ಮಹಿಮೆ ಅಪರಂಪಾರ ವಾಗಿದೆ. ಅವರನ್ನು ವರ್ಣಿಸುವುದು ಅಸಾಧ್ಯವಿದೆ. ಗುರು ಮತ್ತು ಶಿವರಲ್ಲಿ ಯಾವುದೇ ಭೇದವಿಲ್ಲ. ಗುರುಗಳು ಸರ್ವಜ್ಞರಾಗಿದ್ದಾರೆ. ಗುರುಗಳ ಹೊರತು ಜೀವನದಲ್ಲಿ ದಿಶೆ ಇಲ್ಲ. ಗುರುಗಳ ಹೊರತು ನಿಜವಾದ ಸುಖ ಮತ್ತು ಶಾಂತಿ ಇಲ್ಲ. ಗುರುಗಳು ಸಾಮಾನ್ಯ ವ್ಯಕ್ತಿಯಲ್ಲ. ಗುರುದರ್ಶನವೆಂದರೆ ನಿತ್ಯ ಮತ್ತು ಸತ್ಯ ಪ್ರಕಾಶದ ದೀಪೋತ್ಸವವಾಗಿದೆ. ಗುರುಗಳ ಮಹತ್ವ ಅನಂತವಾಗಿದೆ. ನಮ್ಮ ಪ್ರತಿಯೊಂದು ದಿನವನ್ನು ಗುರುಚಿಂತನೆಯಲ್ಲಿ ಕಳೆಯಬೇಕು.
ನಾಮಸ್ಮರಣೆಯ ಮಹತ್ವವನ್ನು ತಿಳಿದುಕೊಳ್ಳಬೇಕು. ದತ್ತಗುರುಗಳ ನಾಮವು ಅತ್ಯಂತ ಮಧುರವಾಗಿದೆ. ಅದು ಮನಸ್ಸಿಗೆ ಶಾಂತಿ ನೀಡುತ್ತದೆ. ದತ್ತಗುರುಗಳೇ ಸಾಯೀನಾಥರಾಗಿದ್ದಾರೆ. ದೀಪಾವಳಿಯ ಸಮಯದಲ್ಲಿ ಓರ್ವ ಬಡ ಭಕ್ತಳ ಮನೆಯಲ್ಲಿ ಎಣ್ಣೆ ಇರಲಿಲ್ಲ. ಆದುದರಿಂದ ಅವಳ ಮನೆಯಲ್ಲಿ ಕತ್ತಲೆ ಕವಿದಿತ್ತು. ಅವಳು ತನ್ನ ಗುರು ಸಾಯೀಬಾಬಾರ ಸ್ಮರಣೆ ಮಾಡಿದಳು. ಆಗ ಅವಳ ಮೊರೆಗೆ ಕೃಪೆದೋರಿ ಸಾಯೀಬಾಬಾ ಎಣ್ಣೆಯ ಬದಲು ನೀರಿನಿಂದ ದೀಪವನ್ನು ಬೆಳಗಿಸಿದರು. ಇದೇ ನಿಜವಾದ ದೀಪೋತ್ಸವವಾಗಿದೆ ! ಶ್ರೀಕೃಷ್ಣನು ದೇವಕಿಯ ಆನಂದಕಂದ(ಪುತ್ರ)ನಾಗಿದ್ದನು. ಅವನು ರಾಧೆಯ ಗೋವಿಂದ ಮತ್ತು ಯಶೋದಾನಂದನನಾಗಿದ್ದನು. ಅವನು ವೃಂದಾವನದಲ್ಲಿ ನರಕಾಸುರನನ್ನು ಕೊಂದನು. ಇದೇ ನಿಜವಾದ ಆನಂದದ ಪ್ರಕಾಶದ ದೀಪಾವಳಿ ! ಇದೇ ನಾಮದ ಮಹಿಮೆಯಾಗಿದೆ.
೪ ಇ. ‘ಆನಂದದ ಸ್ಥಿತಿಯಲ್ಲಿರುವ ಪೂ. ಅಜ್ಜಿಯವರ ಭಾವಸ್ಥಿತಿ !
ಪೂ. ಸೀತಾಬಾಯಿ ಜೋಶಿ : ಈಗ ನನಗೆ ಎಲ್ಲವೂ ಮರೆತು ಹೋಗಿದೆ. ಒಳಗಡೆ ಎಷ್ಟು ಆನಂದ ತುಂಬಿದೆಯೆಂದರೆ, ನಾನು ಎಲ್ಲವನ್ನೂ ಮರೆತು ಬಿಟ್ಟಿದ್ದೇನೆ. ನಾನು ಸಂಗೀತವನ್ನು ಮರೆತು ಬಿಟ್ಟಿದ್ದೇನೆ. ಶಬ್ದಗಳೂ ಮರೆತುಹೋಗಿವೆ. ಈಗ ನನಗೆ ಏನೂ ಹೊಳೆಯುವುದಿಲ್ಲ. ‘ಏನು ಮಾತನಾಡಬೇಕು ?’, ಎಂಬುದೂ ತಿಳಿಯುವುದಿಲ್ಲ. ‘ನಾನು ವೃಂದಾವನದಲ್ಲಿ ಕೃಷ್ಣನಿಗಾಗಿ ನಿಂತಿದ್ದೇನೆ’, ಇಷ್ಟು ಮಾತ್ರ ನನಗೆ ತಿಳಿದಿದೆ. ಭಜನೆ ಮಾಡುವ ಮೊದಲು ನಾನು ದೇವರಿಗೆ ನೀರು ತುಂಬಿಡುತ್ತೇನೆ. ಆಗ ‘ನಿಮಗಾಗಿ (ಭಗವಂತನಿಗಾಗಿ, ಪರಾತ್ಪರ ಗುರು ಡಾಕ್ಟರರಿಗಾಗಿ) ಗಂಗೋದಕವನ್ನು ತಂದು ಇಟ್ಟಿದ್ದೇನೆ’, ಎಂಬ ನನ್ನ ಭಾವ ಇರುತ್ತದೆ. ಭಜನೆಯಾದ ನಂತರ ನಾನು ಆ ನೀರನ್ನು ಭಗವಂತನಿಗೆ ಅರ್ಪಿಸಿ ತೀರ್ಥವೆಂದು ತೆಗೆದುಕೊಳ್ಳುತ್ತೇನೆ. ಆ ಸಮಯದಲ್ಲಿ ನನಗೆ ಸಿಕ್ಕಿದ ಆನಂದದಲ್ಲಿ ನಾನು ನನ್ನ ರೋಗ ಮತ್ತು ಚಿಂತೆ ಎಲ್ಲವನ್ನೂ ಮರೆತು ಬಿಡುತ್ತೇನೆ. ‘ಭಗವಂತನು ಎಲ್ಲರನ್ನೂ ಆನಂದದಿಂದ ಇಡಬೇಕು’, ಎಂದು ನನಗೆ ಅನಿಸುತ್ತದೆ. ಎಲ್ಲರ ಉದ್ಧಾರದಲ್ಲಿಯೇ ನನಗೆ ಆನಂದ ಸಿಗುತ್ತದೆ.
ಈಗ ಜನರು ಟಿ.ವಿ. ನೋಡುವುದರಲ್ಲಿ ಸಮಯ ಕಳೆಯುತ್ತಾರೆ. ಆದುದರಿಂದ ಯಾರೂ ಮಾತನಾಡಲು ಮತ್ತು ಇಂತಹ ವಿಷಯ ಕೇಳಲು ಬರುವುದಿಲ್ಲ. ಕಲಿಯುಗದಲ್ಲಿ ಎಲ್ಲವೂ ಕಠಿಣವಿದೆ. ನೀವು ಅವತಾರಿ ಪುರುಷರಿದ್ದೀರಿ. ನಿಮ್ಮ ಪುಣ್ಯದಿಂದ ಎಲ್ಲವೂ ನಡೆದಿದೆ. ಭಗವಂತಾ, ನಾನು ಪ್ರತ್ಯಕ್ಷ ಕೃಷ್ಣ ಪರಮಾತ್ಮನೆದುರು ಮಾತನಾಡುತ್ತಿದ್ದೇನೆ. ನೀವು ನನ್ನನ್ನು ಉದ್ಧರಿಸಿದ್ದಿರಿ ! ನನಗೆ ಬಹಳ ಆನಂದವಾಗಿದೆ ಮತ್ತು ಆ ಆನಂದದಿಂದಲೇ ನನ್ನ ಹೊಟ್ಟೆ ತುಂಬಿದೆ. ಈಗ ನನ್ನ ಎಲ್ಲ ಇಚ್ಛೆಗಳು ಮುಗಿದು ಹೋಗಿವೆ.
(ಇದೆಲ್ಲವನ್ನು ಹೇಳುವಾಗ ಪೂ ಅಜ್ಜಿಯವರ ಭಾವಜಾಗೃತವಾಯಿತು.)
ಪರಾತ್ಪರ ಗುರು ಡಾ. ಆಠವಲೆ : ಬಹಳ ಸುಂದರ !
ಪೂ. ಸೀತಾಬಾಯಿ ಜೋಶಿ : ನನ್ನ ಎಲ್ಲ ಕೆಟ್ಟ ಪ್ರಾರಬ್ಧವು ಈಗ ಕೊನೆಗೊಂಡಿತು. ಈಗ ಆನಂದದಿಂದ ದಿನ ಕಳೆಯುತ್ತೇನೆ. ಆ ನಮ್ಮ ಭಕ್ತ ಮಂಡಳಿಯು, ನನಗೆ, ‘ಅಜ್ಜಿ ನೀವು ಇಲ್ಲಿಗೆ ಬನ್ನಿ. ನಾವು ನಿಮ್ಮ ಎಲ್ಲ ಸೇವೆಯನ್ನು ಮಾಡುತ್ತೇವೆ’, ಎಂದು ಹೇಳುತ್ತಾರೆ, ನಾನು ಎಲ್ಲೇ ಹೋದರೂ ಅವರು ನನ್ನನ್ನು ಕರೆಯುತ್ತಾರೆ. ನಾನು ಹೋದಲ್ಲಿ ನನಗೆ ಎಲ್ಲರ ಪ್ರೀತಿ ಸಿಗುತ್ತದೆ.
೫. ಪರಾತ್ಪರ ಗುರು ಡಾಕ್ಟರರು ಭೇಟಿಯಾದಾಗ ‘ನನಗೆ ದೇವರು ಸಿಕ್ಕಿದರು’, ಎಂದು ಹೇಳುವ ಪೂ. ಅಜ್ಜಿ ಪರಾತ್ಪರ ಗುರು ಡಾ. ಆಠವಲೆ : ನಾನು ಇಲ್ಲಿಯವರೆಗೆ ನೂರಾರು ಸಂತರನ್ನು ನೋಡಿದ್ದೇನೆ; ಆದರೆ ನಿಮ್ಮಂತಹವರು ಯಾರೂ ಇಲ್ಲ.
ಪೂ. ಜೋಶಿ ಅಜ್ಜಿ : ನೀವು ನನ್ನ ಸಮಾಧಾನಕ್ಕಾಗಿ ಹೀಗೆ ಹೇಳುತ್ತಿರುವಿರಿ. ಇಂದು ನಾನು ಆ ಮಗುವನ್ನು (ಸನಾತನದ ೩೨ ನೆಯ ಸಂತ ಪೂ. ಸೌರಭ ಜೋಶಿ ಇವರನ್ನು ವಯಸ್ಸು ೨೮ ವರ್ಷಗಳು) ನೋಡಿದೆನು. ಅವರ ಕಣ್ಣುಗಳನ್ನು ನೋಡಿದೆನು, ‘ಅವರು ಅಖಂಡ ಜಪವನ್ನು ಮಾಡುತ್ತಿದ್ದಾರೆ’, ಎಂದು ಅನಿಸಿತು, ನಾನು ಅವರ ಚರಣಗಳನ್ನು ಹಿಡಿದಾಗ ನನಗೆ ದೇವರ ಚರಣ ಅಂದರೆ ದತ್ತಗುರುಗಳ ಚರಣಗಳನ್ನು ಹಿಡಿದಂತೆ ಮೃದುವಾಗಿವೆ ಎಂದು ಅನಿಸಿತು. ನಿಜವಾಗಿಯೂ ನೀವು ಎಷ್ಟೆಲ್ಲ ಮಾಡಿತ್ತೀರಿ. ”ನನಗೆ ದೇವರು ಸಿಕ್ಕಿದನು’, ಎಂದಷ್ಟೇ ನಾನು ಹೇಳಬಹುದು.
ಪರಾತ್ಪರ ಗುರು ಡಾ. ಆಠವಲೆ : (ನಿಮ್ಮ ರೂಪದಲ್ಲಿ) ನಮಗೂ ದೇವರು ಸಿಕ್ಕಿದನು !
(ಮುಂದುವರಿಯುವುದು)