ಸನಾತನದ ೧೦೦ ನೇ ಸಂತ ಪೂ. (ಶ್ರೀಮತಿ) ಸೀತಾಬಾಯಿ ಶ್ರೀಧರ ಜೋಶಿ (ವಯಸ್ಸು ೯೯ ವರ್ಷಗಳು) ಮತ್ತು ಅವರ ಕುಟುಂಬದವರ ಪರಾತ್ಪರ ಗುರು ಡಾ. ಆಠವಲೆರೊಂದಿಗಿನ ಸಂವಾದ !

ಹುಬ್ಬಳ್ಳಿಯ ಶ್ರೀಮತಿ ಸೀತಾಬಾಯಿ ಶ್ರೀಧರ ಜೋಶಿ (೨೦೨೫ ರಲ್ಲಿ ವಯಸ್ಸು ೯೯ ವರ್ಷಗಳು) ಇವರು ಗೋವಾದ ರಾಮನಾಥಿಯಲ್ಲಿನ ಸನಾತನದ ಆಶ್ರಮಕ್ಕೆ ಬಂದಿದ್ದರು. ಅವರ ಜೊತೆಗೆ ಅವರ ಮಗಳು ಶ್ರೀಮತಿ ಮೀರಾ ಕರಿ (೨೦೨೪ ರಲ್ಲಿ ಆಧ್ಯಾತ್ಮಿಕ ಮಟ್ಟ ಶೇ. ೬೪ ಮತ್ತು ವಯಸ್ಸು ೬೭ ವರ್ಷಗಳು), ಜೋಶಿ ಅಜ್ಜಿಯವರ ಚಿರಂಜೀವ(ಮಗ) ಮತ್ತು ಅವರ ಸೊಸೆ ಬಂದಿದ್ದರು. ಅವರ ಜೊತೆಗೆ ಜೋಶಿ ಅಜ್ಜಿಯವರ ಮೊಮ್ಮಗಳ ಗಂಡ ಶ್ರೀ. ವಿನಾಯಕ ಶಾನಭಾಗ (೨೦೨೪ ರಲ್ಲಿ ಆಧ್ಯಾತ್ಮಿಕ ಮಟ್ಟ ಶೇ. ೬೮ ಮತ್ತು ವಯಸ್ಸು ೪೨ ವರ್ಷಗಳು) ಮತ್ತು ಮೊಮ್ಮಗಳು ಸೌ. ವಿದ್ಯಾ ಶಾನಭಾಗ ಇವರೂ ಇದ್ದರು. ಇವರೆಲ್ಲರಿಗೂ ಪರಾತ್ಪರ ಗುರು ಡಾ. ಆಠವಲೆಯವರ ಅಮೂಲ್ಯ ಸತ್ಸಂಗ ಲಭಿಸಿತು. ಸತ್ಸಂಗದಲ್ಲಿ ನಡೆದ ಸಂಭಾಷಣೆಯನ್ನು ಮುಂದೆ ಕೊಡಲಾಗಿದೆ. ಇದರ ನಂತರ ಎರಡೇ ದಿನಗಳಲ್ಲಿ ರಾಮನಾಥಿ ಆಶ್ರಮದಲ್ಲಿ ಶ್ರೀಮತಿ ಸೀತಾಬಾಯಿ ಜೋಶಿ ಇವರ ಸನ್ಮಾನ ಮಾಡಲಾಯಿತು ಮತ್ತು ಅವರು ‘ಸನಾತನದ ೧೦೦ ನೇ ಸಂತ’ರೆಂದು ಸಂತಪದವಿಯಲ್ಲಿ ವಿರಾಜಮಾನರಾದ ಬಗ್ಗೆ ಘೋಷಿಸಲಾಯಿತು.

೧. ‘ಭಗವಂತ ಭೇಟಿಯಾಗುವುದು ಸುಲಭವಲ್ಲ’, ಎಂದು ಪೂ. ಸೀತಾಬಾಯಿ ಜೋಶಿ ಇವರು ಹೇಳಿದಾಗ ‘ಸಾಧನೆ ಬಹಳ ಹೆಚ್ಚಾಗಿದ್ದರೆ, ಭಗವಂತನು ಭೇಟಿಯಾಗುತ್ತಾನೆ’, ಎಂದು ಪರಾತ್ಪರ ಗುರು ಡಾಕ್ಟರರು ಹೇಳುವುದು
ಪರಾತ್ಪರ ಗುರು ಡಾ. ಆಠವಲೆ : ನಮಸ್ಕಾರ ಅಜ್ಜಿ !
ಪೂ. ಸೀತಾಬಾಯಿ ಜೋಶಿ : ನಮ್ಮ ಭಾಗ್ಯ ಶ್ರೇಷ್ಠವಿದೆ; ಏಕೆಂದರೆ ನಮಗೆ ನೀವು (ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ), ಅಂದರೆ ಸಾಕ್ಷಾತ್‌ ಭಗವಂತ ಸಿಕ್ಕಿರುವಿರಿ ! ಭಗವಂತನು ಭೇಟಿಯಾಗುವುದು ಸುಲಭವಲ್ಲ. ಅದು ಬಹಳ ಕಠಿಣವಿದೆ. ನಮಗೆ ನೀವು ದೊರಕಿರುವಿರಿ !
ಪರಾತ್ಪರ ಗುರು ಡಾ. ಆಠವಲೆ : ಭಗವಂತನು ಭೇಟಿಯಾಗುವುದು ಕಠಿಣವಿದೆ ; ಆದರೆ ಸಾಧನೆ ಬಹಳ ಹೆಚ್ಚಾಗಿದ್ದರೆ, ಭಗವಂತನು ಭೇಟಿಯಾಗುತ್ತಾನೆ.

೨. ಪೂ. ಸೀತಾಬಾಯಿ ಜೋಶಿ ಇವರು ಮಾಡಿದ ಸಾಧನೆಯ ಬಗ್ಗೆ ಅತ್ಯಂತ ಜಿಜ್ಞಾಸೆಯಿಂದ ತಿಳಿದುಕೊಳ್ಳುವ ಪರಾತ್ಪರ ಗುರು ಡಾ. ಆಠವಲೆ !

೨ ಅ. ಪೂ. ಸೀತಾಬಾಯಿ ಜೋಶಿ ಇವರಿಗೆ ಸಾಧನೆಯ ಬಗ್ಗೆ ಏನೂ ತಿಳಿದಿಲ್ಲದಿದ್ದರೂ ಆಂತರಿಕ ಭಕ್ತಿಯಿಂದ ಅವರು ಸಾಧನೆಯ ಕಡೆಗೆ ತಿರುಗುವುದು
ಪೂ. ಸೀತಾಬಾಯಿ ಜೋಶಿ : ‘ನಾನು ಸಂಸಾರ ಮಾಡಿಲ್ಲ’, ಎಂದೇನಿಲ್ಲ. ನನಗೆ ೬ ಹೆಣ್ಣುಮಕ್ಕಳು ಮತ್ತು ಒಬ್ಬ ಮಗ ಹೀಗೆ ೭ ಮಕ್ಕಳಿದ್ದಾರೆ; ಆದರೆ ಆ ಸಂಸಾರದಲ್ಲಿ ನನ್ನ ಮನಸ್ಸು ತೊಡಗಲಿಲ್ಲ. ನನ್ನ ಮನಸ್ಸು ಯಾವಾಗಲೂ ಭಗವಂತನಲ್ಲಿಯೇ ರಮಿಸುತ್ತಿತ್ತು. ಆದುದರಿಂದ ನನ್ನ ಯಜಮಾನರು ನನಗೆ, ”ನೀನು ನಿನ್ನ ಮಾರ್ಗ ವನ್ನು ಹಿಡಿದು ಮುಂದೆ ಹೋಗು. ನಾನು ನನ್ನ ರೀತಿಯಲ್ಲಿ ಇರುತ್ತೇನೆ”, ಎಂದು ಹೇಳಿದರು. ನಂತರ ಎಷ್ಟೇ ಅಡಚಣೆಗಳು ಬಂದರೂ ನಾನು ಕೀರ್ತನೆ ಮತ್ತು ಪ್ರವಚನಗಳನ್ನು ಕೇಳಲು ಹೋಗುತ್ತಿದ್ದೆ.
ಪರಾತ್ಪರ ಗುರು ಡಾ. ಆಠವಲೆ : ಹೌದು; ಆದರೆ ಈ ಸಾಧನೆಯನ್ನು ನಿಮಗೆ ಯಾರು ಕಲಿಸಿದರು ? ಬೇರೆಯವರಿಗೆ ಎಲ್ಲವನ್ನೂ ಕಲಿಸ ಬೇಕಾಗುತ್ತದೆ. ‘ಸಾಧನೆ ಎಂದರೇನು ? ಭಕ್ತಿ ಎಂದರೇನು ?’, ಇದೆಲ್ಲವನ್ನು ಹೇಳಬೇಕಾಗುತ್ತದೆ ಮತ್ತು ‘ಸಾಧನೆ ಮತ್ತು ಭಕ್ತಿ ಮಾಡಿ’, ಎಂದು ಬೆಂಬತ್ತಬೇಕಾಗುತ್ತದೆ. ನೀವು ಸ್ವತಃ ಇದೆಲ್ಲವನ್ನೂ ಹೇಗೆ ಮಾಡಿದಿರಿ ?
ಪೂ. ಸೀತಾಬಾಯಿ ಜೋಶಿ : ಒಳಗಿನಿಂದಲೇ ನನ್ನ ಭಕ್ತಿ ತಾನಾಗಿಯೇ ಜಾಗೃವಾಗುತ್ತಿತ್ತು.

೨ ಆ. ಹೋಮಿಯೋಪಥಿ ಚಿಕಿತ್ಸೆಯೊಂದಿಗೆ ಅಧ್ಯಾತ್ಮದ ಬಗ್ಗೆ ಮಾರ್ಗದರ್ಶನ ಮಾಡುವ ಹೋಮಿಯೋಪಥಿ ಡಾಕ್ಟರ್‌ ಶಿವಾ ಶಿಂದಗಿ ಪೂ. ಅಜ್ಜಿಯವರ ಜೀವನದಲ್ಲಿ ಬರುವುದು : ಸೌ. ಪುಷ್ಪಾ ಜೋಶಿ (ಪೂ. ಅಜ್ಜಿಯವರ ಸೊಸೆ) : ಅಜ್ಜಿಯವರಿಗೆ ಯಾವಾಗಲೂ ಏನಾದರೊಂದು ಅನಾರೋಗ್ಯವಿರುತ್ತಿತ್ತು. ಆದುದರಿಂದ ಅವರು ಹುಬ್ಬಳ್ಳಿಯ ಹೋಮಿಯೋಪಥಿ ಡಾಕ್ಟರ್‌ ಶಿವಾ ಶಿಂದಗಿ ಇವರ ಬಳಿ ವೈದ್ಯಕೀಯ ಚಿಕಿತ್ಸೆಗಾಗಿ ಹೋಗುತ್ತಿದ್ದರು. ಡಾ. ಶಿಂದಗಿ ಇವರು ಕೇವಲ ಡಾಕ್ಟರ್‌ ಆಗಿರಲಿಲ್ಲ, ಆದರೆ ಬಹಳ ಒಳ್ಳೆಯ ಸಾಧಕರೂ ಆಗಿದ್ದರು. ರೋಗಿಗಳನ್ನು ಪರೀಕ್ಷಿಸಿದ ನಂತರ ಯಾರಾದರೂ ಜಿಜ್ಞಾಸುಗಳು ಬಂದರೆ ಅವರು ಅವರಿಗೆ ಅಧ್ಯಾತ್ಮವನ್ನು ಕಲಿಸುತ್ತಿದ್ದರು. ಅವರು ಆದಿ ಶಂಕರಾಚಾರ್ಯರು ಹೇಳಿದ ತತ್ತ್ವಜ್ಞಾನ, ಹಾಗೆಯೇ ಸಾಂಸಾರಿಕ ಬಂಧನಗಳ ಬಗ್ಗೆ ಪ್ರವಚನಗಳನ್ನು ಮಾಡುತ್ತಿದ್ದರು. ಅಜ್ಜಿಯವರು ಅವರ ಬಳಿ ಹೋದಾಗ, ೧-೨ ಗಂಟೆಗಳ ಕಾಲ ಧ್ಯಾನಕ್ಕೆ ಕುಳಿತುಕೊಳ್ಳುತ್ತಿದ್ದರು. ಅವರು ಸುಮಾರು ೮ ವರ್ಷಗಳ ಕಾಲ ಡಾ. ಶಿಂದಗಿ ಇವರ ಬಳಿ ಹೋಗಿದ್ದರು.
ಸೌ. ವಿದ್ಯಾ ಶಾನಭಾಗ (ಪೂ. ಅಜ್ಜಿಯವರ ಮೊಮ್ಮಗಳು) : ಡಾ. ಶಿಂದಗಿ ಇವರು ಬೇರೆ ಬೇರೆ ಪರೀಕ್ಷೆ ತೆಗೆದುಕೊಳ್ಳುತ್ತಿದ್ದರು. ಅದರಲ್ಲಿ ಅಜ್ಜಿಯವರು ಉತ್ತೀರ್ಣರಾಗುತ್ತಾ ಹೋದರು.
ಪೂ. ಸೀತಾಬಾಯಿ ಜೋಶಿ : ಭಕ್ತಿ ಅಥವಾ ಸಾಧನೆ ಮಾಡಲು ನನಗೆ ಯಾರೂ ಹೇಳಿರಲಿಲ್ಲ. ಅದು ನನ್ನ ಅಂತರಂಗದಲ್ಲಿಯೇ ಇತ್ತು. ಡಾ. ಶಿಂದಗಿ ಇವರ ರೂಪದಲ್ಲಿ ನನಗೆ ಒಬ್ಬ ಸತ್ಪುರುಷರು ಲಭಿಸಿದರು. ಅವರಿಗೆ ದತ್ತಗುರುಗಳ ಸಾಕ್ಷಾತ್ಕಾರವಾಗಿತ್ತು. ಅವರು ನನಗೆ ಸಾಧನೆ ಕಲಿಸಿದರು. ಅವರು ನನಗೆ ದತ್ತಗುರುಗಳ ಬಗ್ಗೆ ಜ್ಞಾನವನ್ನು ನೀಡಿದರು. ಅವರು ನನ್ನ ಪರೀಕ್ಷೆ ತೆಗೆದುಕೊಳ್ಳುತ್ತಿದ್ದರು. ಅವರು ನನ್ನ ಕಠಿಣ ಪರೀಕ್ಷೆ ತೆಗೆದುಕೊಂಡರು.

೨ ಇ. ‘ಗುರುಸಾನಿಧ್ಯದಲ್ಲಿರದೇ ಪೂ. ಅಜ್ಜಿ ಆಧ್ಯಾತ್ಮಿಕ ಉನ್ನತಿ ಮಾಡಿಕೊಂಡರು’, ಈ ಬಗ್ಗೆ ಪರಾತ್ಪರ ಗುರು ಡಾಕ್ಟರರು ಆಶ್ಚರ್ಯವ್ಯಕ್ತಪಡಿಸುವುದು ಪರಾತ್ಪರ ಗುರು ಡಾ. ಆಠವಲೆ : ಇತರ ಅನೇಕ ಶಿಷ್ಯರಿರುತ್ತಾರೆ. ಅವರಿಗೆ ಸಾಧನೆ ಮಾಡಲು ಬಹಳ ಸಮಯ ಬೇಕಾಗುತ್ತದೆ. ೩೦ ರಿಂದ ೪೦ ವರ್ಷಗಳ ಸಾಧನೆಯ ನಂತರ ಅವರು ಸಾಧನೆಯಲ್ಲಿ ಮುಂದೆ ಹೋಗುತ್ತಾರೆ. ಅವರು ಗುರುಗಳ ಸಾನ್ನಿಧ್ಯದಲ್ಲಿ ಇರುತ್ತಾರೆ. ಆದುದರಿಂದ ಅವರಿಗೆ ಗುರುಗಳ ಮಾರ್ಗದರ್ಶನವೂ ಸಿಗುತ್ತದೆ. ನಿಮಗೆ ಗುರುಗಳ ಸಾನ್ನಿಧ್ಯವೂ ಸಿಕ್ಕಿಲ್ಲ, ಆದರೂ ನೀವು ಕೇವಲ ೭-೮ ವರ್ಷಗಳ ಅಲ್ಪಾವಧಿಯಲ್ಲಿ ಸಾಧನೆ ಮಾಡಿ ಇಷ್ಟು ಆಧ್ಯಾತ್ಮಿಕ ಉನ್ನತಿಯನ್ನು ಹೇಗೆ ಸಾಧಿಸಿಕೊಂಡಿರಿ ?

ಪೂ. ಸೀತಾಬಾಯಿ ಜೋಶಿ : ನನಗೆ ಸಾಧನೆಯ ಬಗ್ಗೆ ಪೂರ್ತಿ ಮಾರ್ಗದರ್ಶನ ಸಿಗಲಿಲ್ಲ. ನಂತರ ನಾನು ಹೆಬ್ಬಳ್ಳಿ (ಧಾರವಾಡ ಜಿಲ್ಲೆ) ಗೆ ಹೋದೆನು. ಅಲ್ಲಿನ ದತ್ತಾವಧೂತ ಗುರುಗಳು ಗೋಂದವಲೇಕರ ಮಹಾರಾಜರ ಶಿಷ್ಯರಾಗಿದ್ದಾರೆ. ಒಂದು ವರ್ಷದವರೆಗೆ ನಾನು ಅವರ ಬಳಿ ಹೋಗಿದ್ದೆನು. ಅವರಿಂದ ನನಗೆ ಸಾಧನೆ ಕಲಿಯಲು ಸಿಕ್ಕಿತು.
ಶ್ರೀಮತಿ ಮೀರಾ ಕರಿ (ಪೂ. ಅಜ್ಜಿಯವರ ಮಗಳು) : ಪೂ. ಅಜ್ಜಿ ಯಾವಾಗಲೂ ವರದಹಳ್ಳಿಯಲ್ಲಿರುವ (ಶಿವಮೊಗ್ಗ ಜಿಲ್ಲೆ) ಶ್ರೀ ಶ್ರೀಧರಸ್ವಾಮಿ ಮಠಕ್ಕೆ ಹೋಗುತ್ತಿದ್ದರು. ಅಲ್ಲಿಗೆ ಅವರು ೯ ವರ್ಷಗಳ ಕಾಲ ಹೋದರು.
ಪರಾತ್ಪರ ಗುರು ಡಾ. ಆಠವಲೆ : ಇಂತಹ ಲಕ್ಷಾಂತರ ಭಕ್ತರು ಇರುತ್ತಾರೆ. ಕೆಲವರು ಜೀವನಪೂರ್ತಿ ಸಂತರ ಕಡೆಗೆ ಅಥವಾ ದೇವಸ್ಥಾನಕ್ಕೆ ಹೋಗುತ್ತಾರೆ, ಆದರೆ ಅವರಲ್ಲಿ ಎಷ್ಟು ಜನ ಸಾಧನೆಯಲ್ಲಿ ಮುಂದೆ ಹೋಗುತ್ತಾರೆ !

೨ ಈ. ಪೂ. ಅಜ್ಜಿಯವರು ಸನ್ಯಾಸವನ್ನು ಸ್ವೀಕರಿಸಿದ ತಮ್ಮ ಸೋದರಳಿಯನೊಂದಿಗೆ ‘ದೊಡ್ಡೇರಿ’ಯಲ್ಲಿರುವ ದತ್ತಾಶ್ರಮಕ್ಕೆ ಹೋಗುವುದು ಮತ್ತು ಇತರ ಸಾಧಕರನ್ನು ಗಮನಿಸಿ ಸಾಧನೆಯ ಪ್ರಯತ್ನ ಮಾಡುವುದು
ಸೌ. ಪುಷ್ಪಾ ಜೋಶಿ : ಪೂ. ಅಜ್ಜಿಯವರಿಗೆ ಒಬ್ಬ ಚಿಕ್ಕಮ್ಮನ ಮಗನಿದ್ದನು. ಅವನ ಮಗನಿಗೆ ಚಿಕ್ಕಂದಿನಿಂದಲೇ ಅಧ್ಯಾತ್ಮದ ಬಗ್ಗೆ ಒಲವಿತ್ತು. ಅವನು ಯಾವಾಗಲೂ ಅಜ್ಜಿಯೊಂದಿಗೆ ಅಧ್ಯಾತ್ಮ ಮತ್ತು ಧರ್ಮದ ಬಗ್ಗೆ ಚರ್ಚಿಸುತ್ತಿದ್ದನು. ಅವರಿಬ್ಬರೂ ಧ್ಯಾನಕ್ಕೆ ಕುಳಿತುಕೊಳ್ಳುತ್ತಿದ್ದರು. ಭಜನೆಯನ್ನೂ ಮಾಡುತ್ತಿದ್ದರು. ನಂತರ ಅವರ ಸೋದರಳಿಯ ಸನ್ಯಾಸ ಸ್ವೀಕರಿಸಿದ. ಪೂ. ಅಜ್ಜಿಯವರ ಯಜಮಾನರು ತೀರಿಕೊಂಡಾಗ ಅವರ ಸೋದರಳಿಯ ಭೇಟಿಯಾಗಲು ಬಂದಿದ್ದರು. ಹಿಂದಿರುಗಿ ಹೋಗುವಾಗ ಅವರು ಪೂ. ಅಜ್ಜಿಯವರನ್ನು ತನ್ನೊಂದಿಗೆ ಕರೆದೊಯ್ದರು. ಚಿತ್ರದುರ್ಗದ ಬಳಿ ‘ದೊಡ್ಡೇರಿ’ ಎಂಬ ಒಂದು ಕ್ಷೇತ್ರವಿದೆ. ಅಲ್ಲಿ ದತ್ತಾಶ್ರಮವಿದೆ. ಆಶ್ರಮದಲ್ಲಿ ವಾಸಿಸುತ್ತಾ ಅವರು ಸಾಧನೆ ಮಾಡುತ್ತಾರೆ. ಈಗ ಅವರು ಪೂ. ಅಜ್ಜಿಯವರ ಗುರುಬಂಧು ಆಗಿದ್ದಾರೆ.
ಪರಾತ್ಪರ ಗುರು ಡಾ. ಆಠವಲೆ : ಶಿಷ್ಯರು ಗುರುಗಳ ಜೊತೆಗೆ ಇರುತ್ತಾರೆ, ಆದರೂ ಅವರ ಪ್ರಗತಿಯಾಗುವುದಿಲ್ಲ; ಆದರೆ ನೀವು ಇಷ್ಟು ಪ್ರಗತಿಯನ್ನು ಹೇಗೆ ಮಾಡಿಕೊಂಡಿರಿ ? ಭಗವಂತನ ಭಕ್ತಿಯನ್ನು ಹೇಗೆ ಮಾಡಿದಿರಿ ?
ಪೂ. ಸೀತಾಬಾಯಿ ಜೋಶಿಅಜ್ಜಿ : ಆಶ್ರಮದಲ್ಲಿ ಗುರುಜಿಯವರು ಎಲ್ಲ ಭಕ್ತರಿಗೆ, ‘ಇವರಲ್ಲಿ (ಪೂ. ಅಜ್ಜಿಯವರಲ್ಲಿ) ಬಹಳ ಭಕ್ತಿ ಇದೆ’ ಎಂದು ಹೇಳುತ್ತಿದ್ದರು. ಇತರ ಎಲ್ಲ ಸಾಧಕರನ್ನು ಗಮನಿಸಿ ನಾನು ಅದಕ್ಕನುಸಾರ ಪ್ರಯತ್ನಿಸತೊಡಗಿದೆ.

೨ ಉ. ಸಾಂಸಾರಿಕ ಬಂಧನಗಳಿಂದ ಮುಕ್ತರಾಗಲು ಪೂ. ಅಜ್ಜಿಯವರಲ್ಲಿದ್ದ ತಳಮಳ ಮತ್ತು ದೇವರ ಬಗ್ಗೆ ಇದ್ದ ಅವರ ಶರಣಾಗತಭಾವ !

ಪರಾತ್ಪರ ಗುರು ಡಾ. ಆಠವಲೆ : ಅಂದರೆ ಪೂ. ಅಜ್ಜಿಯವರು ದೈವೀ ಬಾಲಕಿಯಾಗಿದ್ದರೇ ? ಚಿಕ್ಕ ವಯಸ್ಸಿನಲ್ಲಿ ಆಶ್ರಮದವರೆಗೆ ತಲುಪಲು ಹೇಗೆ ಸಾಧ್ಯವಾಯಿತು ?

ಶ್ರೀಮತಿ ಮೀರಾ ಕರಿ : ಪೂ. ಅಜ್ಜಿಯವರ ಸಾಂಸಾರಿಕ ಜೀವನದಲ್ಲಿ ಬಹಳ ಕಷ್ಟವಿತ್ತು. ಆ ಸಮಯದಲ್ಲಿ ಅವರು ದೇವರ ಚರಣಗಳನ್ನು ಗಟ್ಟಿ ಹಿಡಿದು ಸಂಸಾರದಿಂದ ಹೊರಗೆ ತೆಗೆಯಲು ದೇವರ ಬಳಿ ಅಳುತ್ತಿದ್ದರು. ದೇವರಿಗೆ ಶರಣಾಗಿ ಅವರು ಆರ್ತತೆಯಿಂದ ಬೇಡಿಕೊಳ್ಳುತ್ತಿದ್ದರು. ಅವರು ‘ಸತ್ಸಂಗಕ್ಕೆ ಹೋಗುವುದು, ಸಂತರ ಬಳಿಗೆ ಹೋಗುವುದು, ಅವರ ಮಾರ್ಗದರ್ಶನ ಕೇಳುವುದು’, ಹೀಗೆ ಎಲ್ಲವನ್ನೂ ಭಾವಪೂರ್ಣವಾಗಿ ಮಾಡುತ್ತಿದ್ದರು. ಸಂತರನ್ನು ಮನೆಗೆ ಆಮಂತ್ರಿಸಿ ಅವರ ಪಾದಪೂಜೆ ಮಾಡುವುದು ಮತ್ತು ಅನ್ನದಾನ ಮಾಡುವುದು, ಈ ರೀತಿ ಮಾಡುತ್ತಿದ್ದರು. ಅವರಿಗೆ ಮನೆಯಲ್ಲಿ ಸಿಗದ ಆನಂದವು ಪ್ರವಚನ ಮತ್ತು ಕೀರ್ತನೆಗಳನ್ನು ಕೇಳುವುದರಿಂದ, ಸತ್ಸಂಗಕ್ಕೆ ಹೋಗುವುದರಿಂದ ಹಾಗೆಯೇ ಸಂತರಿಂದ ಸಿಗಲು ಪ್ರಾರಂಭವಾಯಿತು. ಅವರು ಬಹಳ ಏಕಾಗ್ರತೆಯಿಂದ ನಾಮಜಪವನ್ನು ಮಾಡುತ್ತಿದ್ದರು. ಅವರು ಎಲ್ಲ ವ್ರತವೈಕಲ್ಯಗಳನ್ನು ಅತ್ಯಂತ ಧಾರ್ಮಿಕತೆಯಿಂದ ಮತ್ತು ದೃಢ ಶ್ರದ್ಧೆಯಿಂದ ಮಾಡುತ್ತಿದ್ದರು. ಈ ಎಲ್ಲವುಗಳಿಂದ ಅವರ ಸಾಧನೆಯಾಗುತ್ತಾ ಹೋಯಿತು. ಅವರು ಮಾಡುತ್ತಿದ್ದ ಧಾರ್ಮಿಕ ಕುಲಾಚಾರಗಳೆಲ್ಲವೂ ನಮಗೆ ಧಾರ್ಮಿಕ ಪರಂಪರೆಯಾಗಿ ಅವರಿಂದ ಸಿಕ್ಕಿವೆ.

( ಮುಂದುವರೆಯುವುದು )