ಪಾಟಲಿಪುತ್ರ (ಬಿಹಾರ) ಇಲ್ಲಿ ಪ್ರಸಿದ್ಧ ಖಾನ್ ಸರ್ ಅವರ ತರಬೇತಿ ಕೇಂದ್ರದ ಮೇಲೆ ದಾಳಿ

ನೆರೆಯ ತರಬೇತಿ ಕೇಂದ್ರದ ಮುಖ್ಯಸ್ಥರು ಸೇರಿದಂತೆ 3 ಜನರ ಬಂಧನ

ಪಾಟಲಿಪುತ್ರ (ಬಿಹಾರ) – ಇಲ್ಲಿ ಮೇ 2 ರ ರಾತ್ರಿ ಪ್ರಸಿದ್ಧ ಖಾನ್ ಸರ್ ಅವರ ‘ಗ್ಲೋಬಲ್ ಸ್ಟಡೀಸ್ ಕೋಚಿಂಗ್’ ಮೇಲೆ ದಾಳಿ ನಡೆಸಲಾಗಿದೆ. ಈ ಸಂದರ್ಭದಲ್ಲಿ ಭದ್ರತಾ ಸಿಬ್ಬಂದಿಯ ಮೇಲೆ ಹಲ್ಲೆ ನಡೆಸಲಾಗಿದೆ. ಅಲ್ಲದೆ ಕಲ್ಲು ಮತ್ತು ಇಟ್ಟಿಗೆಗಳನ್ನು ತೂರಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ पोलिसांनी ‘ಜ್ಞಾನ ಬಿಂದು ಕೋಚಿಂಗ್’ನ ಮುಖ್ಯಸ್ಥ ರೋಷನ್ ಆನಂದ್ ಸೇರಿದಂತೆ ಅವರ ಇಬ್ಬರು ಸಹೋದ್ಯೋಗಿಗಳಾದ ಅಭಿಷೇಕ್ ಮತ್ತು ಗೌರವ್ ಅವರನ್ನು ಬಂಧಿಸಿದ್ದಾರೆ. ಇಲ್ಲಿ ಗುಂಡಿನ ದಾಳಿ ನಡೆಸಲಾಗಿದೆ ಎಂದೂ ಪ್ರತಿಪಾದಿಸಲಾಗಿತ್ತು; ಆದರೆ ಅದು ಸುಳ್ಳೆಂದು ತಿಳಿದುಬಂದಿದೆ.

ಖಾನ್ ಸರ್ ಅವರ ತರಬೇತಿ ಕೇಂದ್ರದ (ಕೋಚಿಂಗ್) ಪಕ್ಕದಲ್ಲೇ ಜ್ಞಾನ ಬಿಂದು ಕೋಚಿಂಗ್ ಇದೆ. ಜ್ಞಾನ ಬಿಂದು ಕೋಚಿಂಗ್ ನ ಫಲಕದ (ಬೋರ್ಡ್) ಮೇಲೆ ಖಾನ್ ಸರ್ ಅವರ ಭಿತ್ತಿಪತ್ರವನ್ನು (ಪೋಸ್ಟರ್) ಅಂಟಿಸಲಾಗಿತ್ತು. ಇದೇ ವಿಷಯವಾಗಿ ವಿವಾದ ಉಂಟಾಗಿ, ನಂತರ ಪ್ರಕರಣವು ತೀವ್ರರೂಪಕ್ಕೆ ತಿರುಗಿತು.

ಸಂಪಾದಕೀಯ ನಿಲುವು

ತರಬೇತಿ ಕೇಂದ್ರಗಳ ನಡುವಿನ ಸ್ಪರ್ಧೆಯಿಂದ ಉಂಟಾಗಿರುವ ಈ ಅಪರಾಧಿ ಪ್ರವೃತ್ತಿಯು ವಿದ್ಯಾರ್ಥಿಗಳ ಮುಂದೆ ಯಾವ ಆದರ್ಶವನ್ನು ಇಡುತ್ತಿದೆ ?