
‘ಪ್ರಸ್ತುತ ಎಲ್ಲೆಡೆ ಆಧ್ಯಾತ್ಮಿಕ ತೊಂದರೆಯ ತೀವ್ರತೆ ಬಹಳಷ್ಟು ಹೆಚ್ಚಾಗಿದ್ದು ಸಾಧಕರ ವೈಯಕ್ತಿಕ ಮತ್ತು ಕೌಟುಂಬಿಕ ಅಡಚಣೆಗಳೂ ಹೆಚ್ಚಾಗಿವೆ. ಕೆಲವು ಸಾಧಕರ ಮನಸ್ಸಿನಲ್ಲಿ ನಕಾರಾತ್ಮಕ ವಿಚಾರಗಳು ಬರುತ್ತಿದ್ದು ವ್ಯಷ್ಟಿ ಸಾಧನೆಯ ಬಗ್ಗೆ ಉದಾಸೀನತೆಯು ಹೆಚ್ಚಾಗಿದೆ. ಪರಸ್ಪರರ ಬಗ್ಗೆ ಪೂರ್ವಗ್ರಹ, ಸಂದೇಹ, ಮನಸ್ಸಿನ ಸಂವೇದನಾಶೂನ್ಯತೆ ಮತ್ತು ನಕಾರಾತ್ಮಕತೆ ಹೆಚ್ಚಾಗಿರುವುದರಿಂದ ಸಾಧಕರಿಗೆ ನಿರಾಶೆ ಬಂದು ‘ಸಾಧನೆ ಮಾಡುವುದು ಬೇಡ, ವ್ಯವಹಾರದಲ್ಲಿನ ವಿಷಯಗಳಾದ ಶಿಕ್ಷಣ, ನೌಕರಿ, ವ್ಯವಸಾಯವನ್ನು ಮಾಡೋಣ’, ಎಂಬ ತೀವ್ರ ವಿಚಾರಗಳೂ ಬರುತ್ತಿವೆ. ಆದ್ದರಿಂದ ಸಾಧನೆ ಮಾಡುವಾಗ ಸಣ್ಣ ಸಣ್ಣ ತಪ್ಪುಗಳನ್ನು ಸ್ವೀಕರಿಸ ಲಾಗದಿರುವುದು, ತಪ್ಪುಗಳ ಪರಿಣಾಮವು ಮನಸ್ಸಿನಲ್ಲಿ ಹೆಚ್ಚು ಕಾಲ ಉಳಿಯುವುದು ಮತ್ತು ಇವೆಲ್ಲದರಿಂದ ಸಾಧನೆಯ ಮೇಲೆ ಪರಿಣಾಮವಾಗುವುದು, ಇಂತಹ ಸ್ಥಿತಿಯು ಕೆಲವು ಸಾಧಕರಿಗೆ ಆಗುತ್ತಿದೆ. ಆಧ್ಯಾತ್ಮಿಕ ತೊಂದರೆ ಇಲ್ಲದಿರುವ ಕೆಲವು ಸಾಧಕರ ಮನಸ್ಸಿನಲ್ಲಿಯೂ ಇಂತಹ ನಕಾರಾತ್ಮಕ ವಿಚಾರಗಳು ಬರುತ್ತಿವೆ.
ಹಿಂದೂ ರಾಷ್ಟ್ರದ ಸ್ಥಾಪನೆಯ ಕಾಲವು ಸಮೀಪಿಸುತ್ತಿರುವುದರಿಂದ ಅದನ್ನು ವಿರೋಧಿಸಲು ಕೆಟ್ಟ ಶಕ್ತಿಗಳ ಆಕ್ರಮಣಗಳ ಪ್ರಮಾಣ ಹೆಚ್ಚಾಗುವುದು ‘ಪ್ರಸ್ತುತ ಕಾಲವು ಅತ್ಯಂತ ಪ್ರತಿಕೂಲವಾಗಿದೆ. ಆದರೂ ಹಿಂದೂ ರಾಷ್ಟ್ರದ ಸ್ಥಾಪನೆಯ ಕಾಲವು ಸಮೀಪಿಸುತ್ತಿದೆ, ಹಾಗೆಯೇ ಮೇ ತಿಂಗಳಿನಲ್ಲಾಗುವ ‘ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ’Àದಿಂದ ಸನಾತನ ರಾಷ್ಟ್ರದ (ಹಿಂದೂ ರಾಷ್ಟ್ರದ) ಸ್ಥಾಪನೆಯ ಶಂಖನಾದವಾಗಲಿದೆ. ಆದ್ದರಿಂದ ಈ ಕಾರ್ಯವನ್ನು ವಿರೋಧಿಸಲು ಕೆಟ್ಟ ಶಕ್ತಿಗಳಿಂದ ಸೂಕ್ಷ್ಮದಿಂದ ಆಕ್ರಮಣಗಳ ಪ್ರಮಾಣವೂ ಹೆಚ್ಚಾಗಿದೆ.
ಸಾಧಕರಿಗೆ ತೊಂದರೆ ಕೊಡುವ ಕೆಟ್ಟ ಶಕ್ತಿಗಳ ಆಯೋಜನೆಯನ್ನು ಗಮನದಲ್ಲಿಟ್ಟುಕೊಂಡು ಎಲ್ಲ ಸಾಧಕರು ತಮ್ಮ ಸಾಧನೆಯನ್ನು ಹೆಚ್ಚಿಸುವುದು ಆವಶ್ಯಕವಾಗಿದೆ. ಸಾಧಕರು ನಾಮಜಪಾದಿ ಉಪಾಯಗಳನ್ನು ಹೇಳುವ ಸಾಧಕರಿಗೆ ಅಥವಾ ಸಂತರಿಗೆ ಆಯಾ ಸಮಯಕ್ಕೆ ಆಧ್ಯಾತ್ಮಿಕ ಉಪಾಯಗಳನ್ನು ಕೇಳಿಕೊಂಡು ಮಾಡುವುದು, ಜವಾಬ್ದಾರ ಸಾಧಕರಿಂದ ಮಾರ್ಗದರ್ಶನವನ್ನು ಪಡೆಯುತ್ತ ತಮ್ಮ ಬಗ್ಗೆ ಘಟಿಸಿದ ಯಾವುದಾದರೊಂದು ಪ್ರಸಂಗವನ್ನು ಅವರಿಗೆ ಮನಮುಕ್ತತೆಯಿಂದ ಹೇಳುವುದು, ದೇವರಿಗೆ ಆತ್ಮನಿವೇದನೆ ಮಾಡುವುದು ಮುಂತಾದ ಪ್ರಯತ್ನಗಳನ್ನು ಮಾಡಬೇಕು. ಸದ್ಯ ಸಾಧಕರಿಗೆ ಆಗುವ ಹೆಚ್ಚಿನ ತೊಂದರೆಗಳು ಕೆಟ್ಟ ಶಕ್ತಿಗಳ ತೊಂದರೆಗಳಿಂದ ಆಗುತ್ತಿದ್ದರೂ, ಸಾಧಕರು ಸ್ವಭಾವದೋಷ ಮತ್ತು ಅಹಂ ಇವುಗಳ ನಿರ್ಮೂಲನೆ ಪ್ರಕ್ರಿಯೆಯನ್ನು ಪ್ರಾಮಾಣಿಕವಾಗಿ ಸರಿಯಾಗಿ ಮಾಡುವುದು ಆವಶ್ಯಕವಾಗಿದೆ.
ಹಿಂದೂ ರಾಷ್ಟ್ರದ ಸ್ಥಾಪನೆಯಾದ ನಂತರ ಎಲ್ಲರ ತೊಂದರೆ ಕಡಿಮೆ ಆಗುವುದು !
ಈಗಿನ ಆಪತ್ಕಾಲವು ನಮಗೆ ಅತ್ಯಂತ ಕಠಿಣವೆನಿಸುತ್ತದೆ; ಆದರೆ ಈ ಕಾಲವು ಸಂಧಿಕಾಲವಾಗಿದ್ದು ಸಾಧನೆಯ ಅಲ್ಪ ಪ್ರಯತ್ನಗಳಿಂದಲೂ ಫಲ ಹೆಚ್ಚು ಪ್ರಮಾಣದಲ್ಲಿ ಸಿಗುತ್ತದೆ. ಇದು ಈ ಸಂಧಿಕಾಲದ ಮಹತ್ವವಾಗಿದೆ. ಹಿಂದೂ ರಾಷ್ಟ್ರದ ಸ್ಥಾಪನೆಯಾದ ನಂತರ ಎಲ್ಲರ ತೊಂದರೆಯು ಕಡಿಮೆಯಾಗಿ ಎಲ್ಲರೂ ಆನಂದದಿಂದಿರುವರು. ಆಗ ಎಲ್ಲರ ಆಧ್ಯಾತ್ಮಿಕ ಪ್ರಗತಿಯಾಗುವುದು. ಆದ್ದರಿಂದ ಸಾಧಕರು ನಿರಾಶರಾಗದೇ ಸಾಧನೆಯ ಪ್ರಯತ್ನಗಳನ್ನು ತಳಮಳದಿಂದ ಮಾಡುವುದು ಆವಶ್ಯಕವಾಗಿದೆ.’
– ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ