ಇಸ್ಲಾಮಾಬಾದ್ (ಪಾಕಿಸ್ತಾನ) – ಭಾರತವು ಸಿಂಧೂ ಜಲ ಒಪ್ಪಂದವನ್ನು ಸ್ಥಗಿತಗೊಳಿಸುವ ನಿರ್ಧಾರ ತೆಗೆದುಕೊಂಡ ನಂತರ ಪಾಕಿಸ್ತಾನವು ನೀರಿಗಾಗಿ ಭಾರತದ ಮುಂದೆ ಭಿಕ್ಷೆ ಬೇಡಬೇಕಾಗುತ್ತದೆ ಎಂದು ಹೇಳಲಾಗುತ್ತಿತ್ತು. ಈಗ ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಝೇಲಂ ನದಿಯ ನೀರಿನ ಮಟ್ಟ ದಿಢೀರ್ ಏರಿಕೆಯಾಗಿದ್ದು, ಅಲ್ಲಿನ ಅನೇಕ ಭಾಗಗಳಲ್ಲಿ ಪ್ರವಾಹ ಉಂಟಾಗಿದೆ. ಸದ್ಯ ಅಲ್ಲಿ ಕಟ್ಟೆಚ್ಚರದ ಎಚ್ಚರಿಕೆ ನೀಡಲಾಗಿದ್ದು, ಸ್ಥಳೀಯ ಜನರನ್ನು ಸುರಕ್ಷಿತ ಸ್ಥಳಗಳಿಗೆ ಹೋಗುವಂತೆ ಸೂಚಿಸಲಾಗಿದೆ. ‘ಭಾರತವು ಉದ್ದೇಶಪೂರ್ವಕವಾಗಿ ನೀರು ಬಿಟ್ಟಿದೆ’ ಎಂದು ಪಾಕಿಸ್ತಾನವು ಆರೋಪಿಸುತ್ತಿದೆ. ಪ್ರವಾಹ ಪರಿಸ್ಥಿತಿಯಿಂದಾಗಿ ಅಲ್ಲಿನ ಸ್ಥಳೀಯ ಸರ್ಕಾರವು ಹತ್ತಿಯನ ಬಾಲ ಪ್ರದೇಶದಲ್ಲಿ ನೀರಿನ ತುರ್ತು ಪರಿಸ್ಥಿತಿಯನ್ನು ಘೋಷಿಸಿದೆ. ಪಿಒಕೆಯಲ್ಲಿನ ಮಸೀದಿಗಳಿಂದ ಎಚ್ಚರಿಕೆ ಸೂಚನೆಗಳನ್ನು ನೀಡಲಾಗುತ್ತಿದೆ.
A sudden surge in the Jhelum River has caused flooding in POK,🌊 prompting Pakistan to falsely accuse India of deliberately releasing the water.
Some in India believe this could be a fitting response and should continue. 🇮🇳 #PakistanBehindPahalgampic.twitter.com/G95keSb7cd
— Sanatan Prabhat (@SanatanPrabhat) April 27, 2025
1. ಪಾಕ್ ಆಕ್ರಮಿತ ಕಾಶ್ಮೀರದ ರಾಜಧಾನಿ ಮುಜಫ್ಫರಾಬಾದ್ ನ ಉಪ ಆಯುಕ್ತ ಮುದಸ್ಸರ್ ಫಾರೂಕ್ ಅವರು, ಝೇಲಂಗೆ ಹೆಚ್ಚುವರಿ ನೀರು ಬಿಡುವುದು ಭಾರತವು ಉದ್ದೇಶಪೂರ್ವಕವಾಗಿ ತೆಗೆದುಕೊಂಡ ಕ್ರಮ ಎಂದು ಆರೋಪಿಸಿದ್ದಾರೆ. ಭಾರತವು ಝೇಲಂ ನದಿಗೆ ಪ್ರಮಾಣಕ್ಕಿಂತ ಹೆಚ್ಚು ನೀರು ಬಿಟ್ಟಿದೆ, ಇದರಿಂದ ಪ್ರವಾಹ ಉಂಟಾಗಿದೆ. ಸದ್ಯಕ್ಕೆ ಆತಂಕಪಡುವಂತಹದ್ದೇನೂ ಇಲ್ಲ. ಆದರೂ ನಾವು ಜನರನ್ನು ನದಿ ಪ್ರದೇಶದಿಂದ ದೂರವಿರಲು ಮತ್ತು ಅಲ್ಲಿಗೆ ಪ್ರಾಣಿಗಳನ್ನು ಕರೆದೊಯ್ಯಬಾರದೆಂದು ಮನವಿ ಮಾಡಿದ್ದೇವೆ ಎಂದರು.
2. ಪಾಕಿಸ್ತಾನಿ ಮಾಧ್ಯಮಗಳ ವರದಿಗಳ ಪ್ರಕಾರ, ಸಿಂಧೂ ಜಲ ಒಪ್ಪಂದದ ಅಡಿಯಲ್ಲಿ ಭಾರತವು ಝೇಲಂ, ಚಿನಾಬ ಮತ್ತು ಸಿಂಧೂ ನದಿಗಳಿಗೆ ನೀರು ಬಿಡುವ ಅಥವಾ ತಡೆಹಿಡಿಯುವ ಬಗ್ಗೆ ಮೊದಲು ಪಾಕಿಸ್ತಾನಕ್ಕೆ ತಿಳಿಸುತ್ತಿತ್ತು; ಆದರೆ ಈ ಬಾರಿ ಭಾರತವು ಈ ಬಗ್ಗೆ ಯಾವುದೇ ಮಾಹಿತಿ ನೀಡಲಿಲ್ಲ.
೩. ಪಾಕಿಸ್ತಾನದ ಈ ಆರೋಪದ ಬಗ್ಗೆ ಭಾರತವು ಇನ್ನೂ ಯಾವುದೇ ಹೇಳಿಕೆ ನೀಡಿಲ್ಲ.
ಸಂಪಾದಕೀಯ ನಿಲುವುಒಂದು ವೇಳೆ ಭಾರತವು ನೀರು ಬಿಟ್ಟಿದ್ದೇ ಆಗಿದ್ದರೆ, ಪಾಕಿಸ್ತಾನಕ್ಕೆ ಇದೇ ತರಹ ಪಾಠ ಕಲಿಸುವುದು ಅವಶ್ಯಕವಾಗಿದೆ. ಭಾರತ ಸರ್ಕಾರವು ಇಂತಹ ಕ್ರಮಗಳನ್ನೇ ಕೈಗೊಳ್ಳಬೇಕೆಂದು ಭಾರತೀಯರಿಗೆ ಅನಿಸುತ್ತದೆ! |