ಉಂಗುರ : ಉಂಗುರವು ಕೈಗಳ ಬೆರಳುಗಳಲ್ಲಿ ಧರಿಸುವ ಆಭರಣ !

ಉಂಗುರ

೧. ಇತಿಹಾಸ : ಕೈಯ ಒಂದು ಅಥವಾ ಅನೇಕ ಬೆರಳುಗಳಲ್ಲಿ ಉಂಗುರವನ್ನು ಧರಿಸುವ ಪದ್ಧತಿಯು ಪ್ರಾಚೀನ ಕಾಲದಿಂದ ನಡೆದು ಬಂದಿರುವುದು ಕಂಡುಬರುತ್ತದೆ. ಉಂಗುರದ ಮೇಲೆ ತಮ್ಮ ಹೆಸರನ್ನು ಮುದ್ರಿಸಿ ಅದನ್ನು ಮುದ್ರೆಯಾಗಿ ಉಪಯೋಗಿಸುವ ಪದ್ಧತಿಯು ರಾಮಾಯಣದಷ್ಟು ಪ್ರಾಚೀನ (ತ್ರೇತಾಯುಗದಿಂದ ಪ್ರಚಲಿತ) ವಾಗಿದೆ. ಹನುಮಂತನು ಸೀತೆಯನ್ನು ಶೋಧಿಸಲು ಹೊರಟಾಗ ಶ್ರೀರಾಮನು ತನ್ನ ಹೆಸರಿನ ಉಂಗುರವನ್ನು ಸೀತೆಗೆ ನೀಡಲು ಕೊಟ್ಟಿದ್ದನು.

೨. ಉಪಯೋಗ

ಅ. ರಾಜಮುದ್ರೆ : ಹಿಂದಿನ ಕಾಲದಲ್ಲಿ ರಾಜರು ತಮ್ಮ ಗುರುತನ್ನು ಉಂಗುರದ ಮೇಲೆ ಮುದ್ರಿಸಿ ಅದನ್ನು ಅಚ್ಚು ಮತ್ತು ಚಿಹ್ನೆಯೆಂದು (ರಾಜಮುದ್ರೆ) ಉಪಯೋಗಿಸುತ್ತಿದ್ದರು. ಆದುದರಿಂದ ಉಂಗುರಕ್ಕೆ ‘ಮುದ್ರಿಕಾ’ ಎಂದೂ ಹೇಳುತ್ತಾರೆ.

ಆ. ಸಂರಕ್ಷಣೆ : ಉಂಗುರವು ಕೇವಲ ಬೆರಳುಗಳ ಸೌಂದರ್ಯವನ್ನು ಹೆಚ್ಚಿಸುವ ಒಂದು ಆಭರಣ ಮಾತ್ರವಲ್ಲ; ಅದರ ಹಿಂದೆ ರಕ್ಷಣೆಯ ಕಲ್ಪನೆಯೂ ಇದೆ.

೧. ಉಂಗುರವನ್ನು ಮಂತ್ರಿಸಿ ಬೆರಳಿನಲ್ಲಿ ಹಾಕಿಕೊಂಡರೆ ಪಿಶಾಚಿ ಮುಂತಾದವುಗಳ ಬಾಧೆಯಾಗುವುದಿಲ್ಲ.

೨. ಉಂಗುರವು ಬೆರಳುಗಳನ್ನು ಕೆಟ್ಟ ಶಕ್ತಿಗಳ ಹಲ್ಲೆಗಳಿಂದ ರಕ್ಷಿಸುತ್ತದೆ.

– ಈಶ್ವರ (ಕು. ಮಧುರಾ ಭೋಸಲೆಯವರ ಮಾಧ್ಯಮದಿಂದ, ೧೨.೧೧.೨೦೦೭,  ರಾತ್ರಿ ೮.೧೫)

ಇ. ಸಾಧನೆಗೆ ಪೂರಕ

೧. ‘ಉಂಗುರ’ದ ಮಾಧ್ಯಮದಿಂದ ಜೀವವು ಇಚ್ಛಾಶಕ್ತಿಯ (ಇಚ್ಛೆಗೆ) ಅಧೀನವಾಗದೇ ನಿಯಂತ್ರಣದಲ್ಲಿರುತ್ತದೆ. ‘ಉಂಗುರ’ದ ಮಾಧ್ಯಮದಿಂದ ಜೀವಕ್ಕೆ ಪಂಚಜ್ಞಾನೇಂದ್ರಿಯಗಳ ಮೇಲೆ ನಿಯಂತ್ರಣವನ್ನಿಡಲು ಸಾಧ್ಯವಾಗುತ್ತದೆ.

೨. ಉಂಗುರದಲ್ಲಿನ ಚೈತನ್ಯದಿಂದ ಬೆರಳುಗಳ ಮೃದುಭಾಗದ ಮೇಲೆ ಒತ್ತಡವು ನಿರ್ಮಾಣವಾಗಿ ಬಿಂದುಒತ್ತಡ ಪದ್ಧತಿಯ (ಯಾಕ್ಯುಪ್ರೆಶರ್) ಉಪಚಾರವಾಗುತ್ತದೆ ಮತ್ತು ಅಲ್ಲಿನ ಕಪ್ಪು ಶಕ್ತಿಯ ಅಡಚಣೆಯು ದೂರವಾಗಿ ಪ್ರತಿಯೊಂದು ಬೆರಳಿನಲ್ಲಿ ಚೈತನ್ಯವು ತಲುಪುತ್ತದೆ.

– ಈಶ್ವರ (ಕು. ಮಧುರಾ ಭೋಸಲೆಯವರ ಮಾಧ್ಯಮದಿಂದ, ೧೨.೧೧.೨೦೦೭, ರಾತ್ರಿ ೮.೧೫)

(ಆಧಾರ : ಸನಾತನ ನಿರ್ಮಿತ ಗ್ರಂಥ ಸ್ತ್ರೀ-ಪುರುಷರ ಆಭರಣಗಳು)

*ಕೆಟ್ಟ ಶಕ್ತಿ: ವಾತಾವರಣದಲ್ಲಿ ಉತ್ತಮ ಹಾಗೂ ಕೆಟ್ಟ ಎರಡೂ ಶಕ್ತಿಗಳು ಕಾರ್ಯನಿರತವಾಗಿರುತ್ತವೆ. ಒಳ್ಳೆಯ ಶಕ್ತಿ ಒಳ್ಳೆಯ ಕಾರ್ಯಕ್ಕಾಗಿ ಮಾನವನಿಗೆ ಸಹಾಯ ಮಾಡುತ್ತವೆ ಹಾಗೂ ಕೆಟ್ಟ ಶಕ್ತಿಗಳು ಅವನಿಗೆ ತೊಂದರೆ ಕೊಡುತ್ತವೆ. ಹಿಂದಿನ ಕಾಲದಲ್ಲಿ ಋಷಿಮುನಿಗಳ ಯಜ್ಞಗಳಲ್ಲಿ ರಾಕ್ಷಸರು ವಿಘ್ನಗಳನ್ನು ತಂದಿರುವ ಅನೇಕ ಕಥೆಗಳು ವೇದ -ಪುರಾಣಗಳಲ್ಲಿ ಇರುತ್ತವೆ. ‘ಅಥರ್ವವೇದದಲ್ಲಿ ಅನೇಕ ಕಡೆಗಳಲ್ಲಿ ಕೆಟ್ಟ ಶಕ್ತಿ. ಉದಾ. ಅಸುರರು, ರಾಕ್ಷಸರು, ಪಿಶಾಚಿ ಇವರ ಪ್ರತಿಬಂಧದ ಮಂತ್ರಗಳನ್ನು ಹೇಳಲಾಗಿದೆ. ಕೆಟ್ಟ ಶಕ್ತಿಗಳ ತೊಂದರೆಯ ನಿವಾರಣೆಗಾಗಿ ವಿವಿಧ ಆಧ್ಯಾತ್ಮಿಕ ಉಪಾಯಗಳನ್ನು ವೇದ ಮತ್ತು ಧರ್ಮಗ್ರಂಥಗಳಲ್ಲಿ ಹೇಳಲಾಗಿದೆ.