ಆಭರಣಗಳ ಶುದ್ಧಿ

ಅ. ಸ್ಥೂಲದಲ್ಲಿನ ಶುದ್ಧಿ – ಚಿನ್ನ ಮತ್ತು ಬೆಳ್ಳಿಯ ಆಭರಣಗಳನ್ನು ಐದು ನಿಮಿಷ ಅಂಟುವಾಳಕಾಯಿಯ ನೀರಿನಲ್ಲಿ ಮುಳುಗಿಸಿಡಬೇಕು. ಅನಂತರ ಕೈಯಿಂದ ಹಗುರವಾಗಿ ತಿಕ್ಕಿದರೆ ಅವುಗಳ ಮೇಲಿನ ಧೂಳು ಮತ್ತು ಹೊಲಸು ದೂರವಾಗಿ ಆಭರಣಗಳು ಸ್ವಚ್ಛವಾಗುತ್ತವೆ.

ಆ. ಸೂಕ್ಷ್ಮದಲ್ಲಿನ ಶುದ್ಧಿ : ಈಗ ಸಾಮಾನ್ಯವಾಗಿ ಎಲ್ಲರಿಗೂ ಹೆಚ್ಜು-ಕಡಿಮೆ ಪ್ರಮಾಣದಲ್ಲಿ ಕೆಟ್ಟ ಶಕ್ತಿಗಳ ತೊಂದರೆಯಿದೆ. ಕೆಟ್ಟ ಶಕ್ತಿಗಳ ತೊಂದರೆಯಿರುವ ವ್ಯಕ್ತಿಗಳು ಧರಿಸಿದ ಆಭರಣಗಳಲ್ಲಿ ಕೆಟ್ಟ ಶಕ್ತಿಗಳು ಕಪ್ಪು ಶಕ್ತಿಯನ್ನು ಸಂಗ್ರಹಿಸಿಡುತ್ತವೆ. ಈ ಕಪ್ಪು ಶಕ್ತಿಯು ಆ ವ್ಯಕ್ತಿಯ ದೇಹದಲ್ಲಿ ಪ್ರಕ್ಷೇಪಿತವಾಗುತ್ತದೆ. ಅಲ್ಲದೇ ಈ ಕಪ್ಪು ಶಕ್ತಿಯಿಂದಾಗಿ ವ್ಯಕ್ತಿಯ ಆಭರಣಗಳನ್ನು ಧರಿಸಿದ ಅವಯವಗಳು ನೋವಾಗಬಹುದು. ಆದುದರಿಂದ ಆಭರಣಗಳನ್ನು ನೋಡುವುದು ಬೇಡವೆನಿಸುತ್ತಿದ್ದರೆ ಅಥವಾ ಆಭರಣ ಧರಿಸಿದಾಗ ತೊಂದರೆಗಳಾಗುತ್ತಿದ್ದರೆ ಆ ಆಭರಣಗಳ ತೊಂದರೆಗಳ ತೀವ್ರತೆಗನುಸಾರ ಮುಂದಿನ ತತ್ತ್ವಗಳಿಂದ ಶುದ್ಧಿಯನ್ನು ಮಾಡಬೇಕು.

೧. ತೇಜತತ್ತ್ವ : ಆಭರಣಗಳಿಗೆ ಎಲ್ಲ ಬದಿಗಳಿಂದ ವಿಭೂತಿ ಹಚ್ಚಬೇಕು.

೨. ವಾಯುತತ್ತ್ವ : ಆಭರಣಗಳ ಮೇಲೆ ವಿಭೂತಿ ಊದಬೇಕು ಅಥವಾ ಸಾತ್ತ್ವಿಕ ಊದುಬತ್ತಿ ಉರಿಸಿ ಅದರ ಧೂಮ ಆಭರಣಗಳ ಮೇಲೆ ಹೋಗುವಂತೆ ಮಾಡಬೇಕು.

೩. ಆಕಾಶತತ್ತ್ವ : ಆಭರಣಗಳನ್ನು ಖಾಲಿ ಪೆಟ್ಟಿಗೆ (ಟಿಪ್ಪಣಿ ೧) ಯಲ್ಲಿಡಬೇಕು – (ಪರಾತ್ಪರ ಗುರು) ಡಾ. ಜಯಂತ ಆಠವಲೆ

ಟಿಪ್ಪಣಿ ೧ – ಖಾಲಿ ಪೆಟ್ಟಿಗೆಯಲ್ಲಿ ಟೊಳ್ಳು ಇರುತ್ತದೆ. ಟೊಳ್ಳು ನಿರ್ಗುಣ ತತ್ತ್ವದ ಪ್ರತೀಕವಾಗಿದೆ. ನಿರ್ಗುಣ ತತ್ತ್ವದಿಂದ ಕಪ್ಪು ಶಕ್ತಿಯು ನಾಶವಾಗುತ್ತದೆ.

(ಸನಾತನ ನಿರ್ಮಿತ ಗ್ರಂಥ ‘ಸ್ತ್ರೀ-ಪುರುಷರ ಆಭರಣಗಳು’)

* ಕೆಟ್ಟ ಶಕ್ತಿ: ವಾತಾವರಣದಲ್ಲಿ ಉತ್ತಮ ಹಾಗೂ ಕೆಟ್ಟ ಎರಡೂ ಶಕ್ತಿಗಳು ಕಾರ್ಯನಿರತವಾಗಿರುತ್ತವೆ. ಒಳ್ಳೆಯ ಶಕ್ತಿ ಒಳ್ಳೆಯ ಕಾರ್ಯಕ್ಕಾಗಿ ಮಾನವನಿಗೆ ಸಹಾಯ ಮಾಡುತ್ತವೆ ಹಾಗೂ ಕೆಟ್ಟ ಶಕ್ತಿಗಳು ಅವನಿಗೆ ತೊಂದರೆ ಕೊಡುತ್ತವೆ. ಹಿಂದಿನ ಕಾಲದಲ್ಲಿ ಋಷಿಮುನಿಗಳ ಯಜ್ಞಗಳಲ್ಲಿ ರಾಕ್ಷಸರು ವಿಘ್ನಗಳನ್ನು ತಂದಿರುವ ಅನೇಕ ಕಥೆಗಳು ವೇದ -ಪುರಾಣಗಳಲ್ಲಿ ಇರುತ್ತವೆ. ‘ಅಥರ್ವವೇದದಲ್ಲಿ ಅನೇಕ ಕಡೆಗಳಲ್ಲಿ ಕೆಟ್ಟ ಶಕ್ತಿ. ಉದಾ. ಅಸುರರು, ರಾಕ್ಷಸರು, ಪಿಶಾಚಿ ಇವರ ಪ್ರತಿಬಂಧದ ಮಂತ್ರಗಳನ್ನು ಹೇಳಲಾಗಿದೆ. ಕೆಟ್ಟ ಶಕ್ತಿಗಳ ತೊಂದರೆಯ ನಿವಾರಣೆಗಾಗಿ ವಿವಿಧ ಆಧ್ಯಾತ್ಮಿಕ ಉಪಾಯಗಳನ್ನು ವೇದ ಮತ್ತು ಧರ್ಮಗ್ರಂಥಗಳಲ್ಲಿ ಹೇಳಲಾಗಿದೆ.