ಸಂಯುಕ್ತ ಪಾಕಿಸ್ತಾನವಾಗಿದ್ದಾಗ ಬಾಂಗ್ಲಾದೇಶದ ಪಾಲಿನ ೩೬ ಸಾವಿರ ಕೋಟಿ ರೂಪಾಯಿಗಳನ್ನೂ ಕೇಳಿದೆ

ಢಾಕಾ (ಬಾಂಗ್ಲಾದೇಶ) – ೧೯೭೧ ರಲ್ಲಿ ಬಾಂಗ್ಲಾದೇಶದ ನಾಗರಿಕರ ಮೇಲೆ ಪಾಕಿಸ್ತಾನ ನಡೆಸಿದ ದೌರ್ಜನ್ಯಗಳಿಗಾಗಿ ಕ್ಷಮೆಯಾಚಿಸಬೇಕೆಂದು ಬಾಂಗ್ಲಾದೇಶವು ಪಾಕಿಸ್ತಾನಕ್ಕೆ ಕರೆ ನೀಡಿದೆ. ಇದರೊಂದಿಗೆ, “ನಮಗೆ ನಮ್ಮ ಪಾಲಿನ ಹಣವನ್ನು ನೀಡಬೇಕು” ಎಂದು ಬಾಂಗ್ಲಾದೇಶವು ಒತ್ತಾಯಿಸಿದೆ.
೧. ೧೫ ವರ್ಷಗಳ ನಂತರ ಏಪ್ರಿಲ್ ೧೭ ರಂದು ಬಾಂಗ್ಲಾದೇಶ ಮತ್ತು ಪಾಕಿಸ್ತಾನಗಳ ನಡುವೆ ಢಾಕಾದಲ್ಲಿ ವಿದೇಶಾಂಗ ಕಾರ್ಯದರ್ಶಿ ಮಟ್ಟದ ಮಾತುಕತೆ ನಡೆಯಿತು. ಈ ಸಂದರ್ಭದಲ್ಲಿ ಬಾಂಗ್ಲಾದೇಶವು, ೧೯೭೧ ರ ಸಂಯುಕ್ತ ಆಸ್ತಿಯಿಂದ ಬಾಂಗ್ಲಾದೇಶಕ್ಕೆ ಅದರ ಪಾಲು, ಅಂದರೆ ೪.೩ ಬಿಲಿಯನ್ ಡಾಲರ್ಗಳು (೩೬ ಸಾವಿರ ಕೋಟಿ ರೂಪಾಯಿಗಳು) ನೀಡಬೇಕು ಎಂದು ಹೇಳಿದೆ. ಇದರೊಂದಿಗೆ ೧೯೭೦ ರಲ್ಲಿ ಬಾಂಗ್ಲಾದೇಶಕ್ಕೆ (तत्कालीन ಪೂರ್ವ ಪಾಕಿಸ್ತಾನ) ಚಂಡಮಾರುತದ ಸಹಾಯಕ್ಕಾಗಿ ಬಂದ ಸುಮಾರು ೨ ಸಾವಿರದ ೪೦೦ ಕೋಟಿ ಟಕಾ (ಬಾಂಗ್ಲಾದೇಶದ ಕರೆನ್ಸಿ) ಕೂಡ ನೀಡಬೇಕಾಗುತ್ತದೆ.
೨. ಈ ಸಂದರ್ಭದಲ್ಲಿ ಬಾಂಗ್ಲಾದೇಶವು ಢಾಕಾದ ಛಾವಣಿಗಳಲ್ಲಿ ವಾಸಿಸುತ್ತಿರುವ ೩ ಲಕ್ಷಕ್ಕೂ ಹೆಚ್ಚು ಪಾಕಿಸ್ತಾನಿ ನಾಗರಿಕರನ್ನು ಮರಳಿ ಕರೆದೊಯ್ಯುವ ವಿಷಯವನ್ನು ಪ್ರಸ್ತಾಪಿಸಿತು. ಬಾಂಗ್ಲಾದೇಶದಲ್ಲಿ ಅವರನ್ನು ‘ಬಿಹಾರಿ’ ಎಂದು ಕರೆಯುತ್ತಾರೆ. ಅವರು ಮೂಲತಃ ಉರ್ದು ಭಾಷೆ ಮಾತನಾಡುವ ಮುಸ್ಲಿಂ ವಲಸಿಗರು, ಅವರು ೧೯೪೭ ರಲ್ಲಿ ಭಾರತದ ವಿಭಜನೆಯ ನಂತರ ಬಿಹಾರ ಮತ್ತು ಉತ್ತರ ಪ್ರದೇಶ ರಾಜ್ಯಗಳಿಂದ ಪೂರ್ವ ಪಾಕಿಸ್ತಾನಕ್ಕೆ (ಬಾಂಗ್ಲಾದೇಶ) ಬಂದು ನೆಲೆಸಿದರು. ೧೯೭೧ ರ ಬಾಂಗ್ಲಾದೇಶ ವಿಮೋಚನಾ ಯುದ್ಧದ ನಂತರ ಈ ಜನರು ಪಶ್ಚಿಮ ಪಾಕಿಸ್ತಾನದೊಂದಿಗೆ ನಿಷ್ಠೆ ತೋರಿಸಿದ್ದರಿಂದ, ಅವರನ್ನು ಬಾಂಗ್ಲಾದೇಶದಲ್ಲಿ ‘ಪಾಕಿಸ್ತಾನ ಬೆಂಬಲಿಗರು’ ಎಂದು ಪರಿಗಣಿಸಲಾಯಿತು. ಅವರ ಆಸ್ತಿಗಳನ್ನು ವಶಪಡಿಸಿಕೊಳ್ಳಲಾಯಿತು ಮತ್ತು ಅವರ ಮೇಲೆ ದೌರ್ಜನ್ಯ ನಡೆಸಲಾಯಿತು. ಬಾಂಗ್ಲಾದೇಶದ ಸ್ವಾತಂತ್ರ್ಯದಿಂದ ಲಕ್ಷಾಂತರ ಮುಸ್ಲಿಮರು ಛಾವಣಿಗಳಲ್ಲಿ ವಾಸಿಸುತ್ತಿದ್ದಾರೆ ಮತ್ತು ಅವರನ್ನು ಪಾಕಿಸ್ತಾನವು ಸ್ವೀಕರಿಸಿಲ್ಲ ಅಥವಾ ಬಾಂಗ್ಲಾದೇಶವು ಅವರಿಗೆ ಪೂರ್ಣ ಪೌರತ್ವ ನೀಡಿಲ್ಲ.
ಅಮೆರಿಕದ ಸಂಸತ್ತಿನಲ್ಲಿ ಇರಾನ್ ವಿರುದ್ಧದ ಯುದ್ಧ ನಿಲ್ಲಿಸುವ ಪ್ರಸ್ತಾವನೆ ಅಂಗೀಕಾರ
ಪಾನ್ ಮಸಾಲಾ, ಗುಟ್ಕಾ ಮತ್ತು ಕಲಬೆರಕೆ ಆಹಾರ ಪದಾರ್ಥಗಳ ಒಂದೂವರೆ ಕೋಟಿಗೂ ಹೆಚ್ಚು ಮೌಲ್ಯದ ದಾಸ್ತಾನು ವಶ
India-Nepal Border Dispute : ನೇಪಾಳದೊಂದಿಗಿನ ಗಡಿ ವಿವಾದದಲ್ಲಿ ಮೂರನೇ ಪಕ್ಷದ ಅಗತ್ಯವಿಲ್ಲ! – ಭಾರತ
Trump Tariff : ಭಾರತ ಸೇರಿದಂತೆ ಹಲವು ದೇಶಗಳ ಮೇಲೆ ಶೇ. ೧೨.೫% ರಷ್ಟು ಹೆಚ್ಚುವರಿ ಆಮದು ಸುಂಕ ವಿಧಿಸಲಿರುವ ಟ್ರಂಪ್
Japan Illegal Mosque : ಜಪಾನ್ : ಪಾಕಿಸ್ತಾನ ನಿರ್ಮಿಸಿದ ಅಕ್ರಮ ಮಸೀದಿ ಧ್ವಂಸ !
ಪಾಟಲಿಪುತ್ರ (ಬಿಹಾರ) ಇಲ್ಲಿ ಪ್ರಸಿದ್ಧ ಖಾನ್ ಸರ್ ಅವರ ತರಬೇತಿ ಕೇಂದ್ರದ ಮೇಲೆ ದಾಳಿ