‘ಧರ್ಮಕ್ಕಾಗಿ ಒಂದು ದಿನ’ ಧ್ಯೇಯ ವಾಕ್ಯದಡಿಯಲ್ಲಿ ಬಂಟ್ವಾಳದಲ್ಲಿ ಪ್ರಾಂತೀಯ ಹಿಂದೂ ಅಧಿವೇಶನದ ಯಶಸ್ವಿ ಆಯೋಜನೆ

ಹಿಂದೂ ಜನಜಾಗೃತಿ ಸಮಿತಿಯು ಕಳೆದ ಅನೇಕ ವರ್ಷಗಳಿಂದ ಹಿಂದೂ ಸಂಘಟನೆಗಾಗಿ ಅವಿರತವಾಗಿ ಕಾರ್ಯವನ್ನು ಮಾಡುತ್ತಿದೆ. ಸಮಿತಿಯ ವತಿಯಿಂದ ಹಿಂದೂ ಧರ್ಮದ ರಕ್ಷಣೆಗಾಗಿ ಕಾರ್ಯ ಮಾಡುವ ಸಮಾನ ಮನಸ್ಕ ಹಿಂದೂ ಸಂಘಟನೆ ಗಳನ್ನು ಸಂಘಟಿಸಲು ‘ಹಿಂದೂ ರಾಷ್ಟ್ರ ಅಧಿವೇಶನ’ವನ್ನು ಆಯೋಜನೆ ಮಾಡುತ್ತದೆ. ಇದುವರೆಗೆ ೨೦೦ ಕ್ಕೂ ಹೆಚ್ಚು ಅಧಿವೇಶನಗಳ ಮೂಲಕ ೧೦೦೦ ಕ್ಕೂ ಹೆಚ್ಚು ಹಿಂದೂ ಸಂಘಟನೆಗಳನ್ನು ಸಂಘಟಿಸಿದೆ. ಅದರಂತೆ ೧೬ ಮಾರ್ಚ ೨೦೨೫ ರಂದು ‘ಪ್ರಾಂತೀಯ ಹಿಂದೂ ರಾಷ್ಟ್ರ ಅಧಿವೇಶನ’ವನ್ನು ಬಂಟ್ವಾಳದ ಸ್ಪರ್ಶ ಕಲಾ ಮಂದಿರದಲ್ಲಿ ಆಯೋಜನೆ ಮಾಡಲಾಗಿತ್ತು. ಇದರಲ್ಲಿ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಕಾಸರಗೋಡು ಹಾಗೂ ಕೊಡಗು ಈ ಐದು ಜಿಲ್ಲೆಗಳಿಂದ ೮೦೦ ಹಿಂದೂ ನಾಯಕರು ಭಾಗವಹಿಸಿದ್ದರು. ಇದರ ಅನುಭವಗಳನ್ನು ಲೇಖನದಲ್ಲಿ ಸಂಕ್ಷಿಪ್ತವಾಗಿ ನೀಡುತ್ತಿದ್ದೇವೆ.

(ಎಡದಿಂದ) ಶ್ರೀ. ಎಂ.ಜೆ. ಶೆಟ್ಟಿ, ನ್ಯಾಯವಾದಿ ಕೃಷ್ಣಮೂರ್ತಿ, ಶ್ರೀ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು, ಪೂ. ರಮಾನಂದ ಗೌಡ, ಶ್ರೀ. ಚಕ್ರವರ್ತಿ ಸೂಲಿಬೆಲೆ, ಶ್ರೀ. ಗುರುಪ್ರಸಾದ ಗೌಡ

ಪ್ರಾಂತೀಯ ಹಿಂದೂ ಅಧಿವೇಶನದ ಆಯೋಜನೆಯ ಸಂಕಲ್ಪನೆ 

ಮೇಲ್ಕಂಡ ೫ ಜಿಲ್ಲೆಗಳಲ್ಲಿ ಬಹಳಷ್ಟು ಹಿಂದುತ್ವನಿಷ್ಠರು, ಧರ್ಮಪ್ರೇಮಿಗಳು, ದೇವಸ್ಥಾನ ವಿಶ್ವಸ್ಥರು, ವೈದ್ಯರು, ನ್ಯಾಯವಾದಿ ಗಳು ಮತ್ತು ಉದ್ಯಮಿಗಳು ಧರ್ಮಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಳ್ಳಲು ಉತ್ಸುಕರಾಗಿದ್ದರು. ಅವರೆಲ್ಲರಿಗೂ ಹಿಂದೂ ರಾಷ್ಟ್ರದ ಕಾರ್ಯ ಮಾಡಲು ದಿಶೆ ಸಿಗಬೇಕು, ಗ್ರಾಮ ಸ್ತರದಿಂದ, ಜಿಲ್ಲಾ, ಪ್ರಾಂತೀಯ ಸ್ತರದ ವರೆಗೆ ಎಲ್ಲ ಹಿಂದುತ್ವನಿಷ್ಠರು ಒಟ್ಟಾಗಿ ಹಿಂದೂ ರಾಷ್ಟ್ರಕ್ಕಾಗಿ ಸಂಘಟಿತರಾಗಬೇಕು ಎಂಬ ಮಹಾನ್‌ ಉದ್ದೇಶವನ್ನು ಇಟ್ಟುಕೊಂಡು ‘ಪ್ರಾಂತೀಯ ಹಿಂದೂ ಅಧಿವೇಶನ’ದ ಆಯೋಜನೆಯನ್ನು ಮಾಡಲು ನಿಶ್ಚಯಿಸಲಾಯಿತು.

ಅಧಿವೇಶನದ ಆಯೋಜನೆಯ ಚಿಂತನೆ

ಹಿಂದೂ ಅಧಿವೇಶನಕ್ಕಾಗಿ ಮೊದಲಿಗೆ ಸಮಿತಿಯ ಎಲ್ಲ ಸಾಧಕರು, ಕಾರ್ಯಕರ್ತರು, ಸಮಿತಿಯ ಕಾರ್ಯದಲ್ಲಿ ಜೋಡಣೆ ಯಾದ ಧರ್ಮಪ್ರೇಮಿಗಳು, ಹಿಂದುತ್ವನಿಷ್ಠರು, ವೈದ್ಯರು, ನ್ಯಾಯವಾದಿಗಳು, ಉದ್ಯಮಿಗಳನ್ನು ಸೇರಿಸಿ ಅವರಲ್ಲಿ ಅಧಿವೇಶನದ ಮಹತ್ವವನ್ನು ಹೇಳಿ, ಜಾಗೃತಿ ಮೂಡಿಸಿ, ವಾತಾವರಣವನ್ನು ನಿರ್ಮಾಣ ಮಾಡಲಾಯಿತು. ಅದಕ್ಕಾಗಿ ಜಿಲ್ಲೆ, ತಾಲೂಕು, ಹೋಬಳಿ ಸ್ತರದಲ್ಲಿ ಹಲವು ಪ್ರದೇಶವಾರು ವಿಂಗಡನೆ ಮಾಡಲಾಯಿತು. ಜಿಲ್ಲೆಗಳಲ್ಲಿ ಎಷ್ಟು ಗ್ರಾಮಗಳಿವೆ. ಅದರ ವಿವರ ಪಡೆಯಲಾಯಿತು. ಐದು ಜಿಲ್ಲೆಗಳಲ್ಲಿರುವ ವಿವಿಧ ಸಂಘಟನೆಗಳು, ದೇವಸ್ಥಾನದ ವಿಶ್ವಸ್ಥರು, ವಕೀಲರು, ಉದ್ಯಮಿಗಳು, ವೈದ್ಯರು, ವೈದ್ಯಕೀಯ ಸಂಸ್ಥೆಗಳು, ಶಿಕ್ಷಣ ಸಂಸ್ಥೆಗಳು, ಹೀಗೆ ಎಲ್ಲ ಕ್ಷೇತ್ರದವರನ್ನು ಈ ಅಧಿವೇಶನಕ್ಕೆ ಕರೆಯಲು ಚಿಂತನೆ ಮಾಡಲಾಯಿತು.  ಅದಕ್ಕಾಗಿ ತಾಲೂಕು ಸ್ಥರದಲ್ಲಿ ಸಭೆಗಳನ್ನು ಮಾಡಿ ವಾತಾವರಣ ನಿರ್ಮಾಣ ಮಾಡ ಲಾಯಿತು. ಅದಲ್ಲದೇ ಆನಲೈನ್‌ ಸಭೆಗಳ ಮೂಲಕವೂ ಜಾಗೃತಿ ಮೂಡಿಸಲಾಯಿತು.

ಸಂಪರ್ಕದ ಸಮಯದಲ್ಲಿ ಸ್ಪಂದಿಸಿದ ಸಮಾಜ

ಅನೇಕ ಸಾಧಕರು ತಮ್ಮ ನೌಕರಿಗೆ ರಜೆ ಹಾಕಿ ಅಧಿವೇಶನದ ಸಂಪರ್ಕ ಸೇವೆ ಮಾಡಿದರು. ಹಿಂದುತ್ವನಿಷ್ಠರನ್ನು ಸಂಪರ್ಕಿಸಿದಾಗ, ಅವರು ಸಹ ಅವರ ಪರಿಚಯದ ಅನ್ಯ ಹಿಂದುತ್ವನಿಷ್ಠರ ಸಂಪರ್ಕವನ್ನು ನೀಡುತ್ತಿದ್ದರು ಮತ್ತು ಅವರು ಸಹ ಸಂಪರ್ಕವನ್ನು ಮಾಡುತ್ತಿದ್ದರು. ದೀಪದಿಂದ ದೀಪ ಬೆಳಗಿದಂತೆ ಸಂಪರ್ಕದಿಂದ ಸಂಪರ್ಕ ವೃದ್ದಿಯಾಗುತ್ತಾ ಹೋಯಿತು ಹಾಗೂ ಸಮಾಜದ ಅನೇಕ ಉತ್ತಮ ಗಣ್ಯವ್ಯಕ್ತಿಗಳ ಸಂಪರ್ಕವು ಆಯಿತು. ಅದರಲ್ಲಿ ಬಹಳಷ್ಟು ಜನರು ಧರ್ಮದ ಬಗ್ಗೆ ಕಳಕಳಿಯುಳ್ಳ ಪ್ರಾಮಾಣಿಕ ಹಿಂದುತ್ವನಿಷ್ಠರ ಪರಿಚಯ ವಾಯಿತು. ಹೀಗೆ ವ್ಯಾಪಕವಾಗಿ ಹಿಂದೂ ರಾಷ್ಟ್ರ ಅಧಿವೇಶನ ಸಂಪರ್ಕ ಮಾಡಿದಾಗ ಮತ್ತು ಹಿಂದೂ ರಾಷ್ಟ್ರದ ಮಹತ್ವವನ್ನು ಹೇಳಿದಾಗ ‘ಇಂತಹ ಕಾರ್ಯಕ್ಕಾಗಿ ಎಷ್ಟೋ ದಿನಗಳಿಂದ ಕಾತುರರಾಗಿರುವಂತಹ ಜೀವಗಳ ಬಳಿ ನಮ್ಮನ್ನು ದೇವರೇ ಕಳಿಸಿದ್ದಾರೆ’ ಎಂದು ಅನೇಕ ಸಾಧಕರಿಗೆ ಅನಿಸುತ್ತಿತ್ತು.

ಹಿಂದೂ ರಾಷ್ಟ್ರಕ್ಕಾಗಿ ೨೯೦೦ ಕ್ಕೂ ಹೆಚ್ಚು ಹಿಂದುತ್ವನಿಷ್ಠರ ಸಂಪರ್ಕ ಅಧಿವೇಶನದ ಸಂಪರ್ಕ ಸೇವೆ

ಯನ್ನು ಮಾಡುವಾಗ, ಈ ಸೇವೆಯು ದೈವೀ ನಿಯೋಜನೆ ಯಾಗಿದೆ, ನಾವು ಕೇವಲ ನಿಮಿತ್ತ ಮಾತ್ರ ಹೊಗುತ್ತಿದ್ದೇವೆ. ಹೀಗೆ ಸಾಧಕರಿಗೆ ಅನುಭವವಾಗುತ್ತಿತ್ತು. ಎಲ್ಲಾ ಸಾಧಕರು ಸಂಪರ್ಕಕ್ಕೆ ನಾಲ್ಕು ದಿಕ್ಕುಗಳಿಂದಲೂ ಹೋಗುವಾಗ ಸಮಿತಿಯ ಕಾರ್ಯವು ವಟವೃಕ್ಷದಂತೆ ಎಲ್ಲೆಡೆ ಹರಡುತ್ತಿದೆ. ಈ ನಿಮಿತ್ತ ಪ್ರತಿದಿನ ಸಂಪರ್ಕ ಸೇವೆಯನ್ನು ಮಾಡುವಂತಹ ಸಾಧಕರಿಗೆ ಸಭೆಗಳನ್ನು ಮಾಡಿ ವರದಿಯನ್ನು ತೆಗೆದುಕೊಳ್ಳುವುದು ಹಾಗೂ ಸಾಧಕರಿಗೆ ಮರುದಿನ ಸಂಪರ್ಕದ ನಿಯೋಜನೆಯನ್ನು ಮಾಡಿಕೊಡುವುದು, ಹೀಗೆ ಸಂಕಲ್ಪನೆಯನ್ನು ಮಾಡಿ, ಅದೇ ರೀತಿ ಸಾಧಕರು ಸೇವೆಯನ್ನು ಮಾಡಿದರು. ಇದರಿಂದಾಗಿ ಸಾಧಕರಲ್ಲಿ ಸೇವೆಯ ಉತ್ಸಾಹವು ಹೆಚ್ಚಾಯಿತು ಮತ್ತು ಸೇವೆಯು ಪರಿಪೂರ್ಣವಾಗಿ ಫಲನಿಷ್ಪತ್ತಿಯು ಉತ್ತಮ ರೀತಿಯಲ್ಲಿ ಬರಲು ಸಾಧ್ಯವಾಯಿತು. ಇದರಿಂದಾಗಿ ಸಮಾಜದಲ್ಲಿ ಅಧಿವೇಶನದ ವಾತಾವರಣವು ನಿರ್ಮಾಣವಾಯಿತು. ಒಟ್ಟು ೨೯೦೦ ಕ್ಕೂ ಅಧಿಕ ಹಿಂದುತ್ವನಿಷ್ಠರನ್ನು ಸಂಪರ್ಕಿಸಲಾಯಿತು. ಕೆಲವು ಹಿಂದುತ್ವನಿಷ್ಠರು, ಧರ್ಮಪ್ರೇಮಿಗಳು ಈ ಅಧಿವೇಶನದಲ್ಲಿ ಪ್ರತ್ಯಕ್ಷ ಸಹಭಾಗಿಯಾಗಲು ಅಡಚಣೆ ಬಗ್ಗೆ ಮುಂಚಿತವಾಗಿ ಸ್ವತಃ ದೂರವಾಣಿ ಕರೆ ಮಾಡಿ ತಿಳಿಸಿದರು. ಇದರಿಂದ ಅಧಿವೇಶನದ ವಾತಾವರಣದ ಮಹತ್ವವು ತಿಳಿಯುತ್ತದೆ.

ಕಾರ್ಯಕ್ರಮದಲ್ಲಿ ದೈವೀ ವಾತಾವರಣದ ಅನುಭವ

ಸಾಧಕರು ತುಂಬಾ ಉತ್ಸಾಹದಿಂದ ಅಧಿವೇಶನದ ಸಿದ್ಧತೆ ಮಾಡಿದರು. ಸಭಾಗೃಹವು ತುಂಬಾ ಚೈತನ್ಯಮಯವಾಗಿತ್ತು. ಅಧಿವೇಶನಕ್ಕೆ ಬರುವ ಎಲ್ಲಾ ಹಿಂದುತ್ವನಿಷ್ಠ, ಧರ್ಮಪ್ರೇಮಿಗಳನ್ನು ಸ್ವಾಗತಿಸಲು ಮಾಡಿದ ವ್ಯವಸ್ಥೆಯು ಎಲ್ಲಾ ಹಿಂದುತ್ವನಿಷ್ಠರನ್ನು ಮಂತ್ರಮುಗ್ಧಗೊಳಿಸಿತು. ಆ ದಿನ ಪ್ರತ್ಯಕ್ಷ ಕಾರ್ಯಕ್ರಮದಲ್ಲಿ ಸುಮಾರು ೮೦೦ ಕ್ಕೂ ಹೆಚ್ಚು ಹಿಂದುತ್ವನಿಷ್ಠರು ಸಹಭಾಗಿ ಗಳಾದರು. ಇದರಲ್ಲಿ ಭಾಗವಹಿಸಿದ ಎಲ್ಲರಿಗೂ ಧರ್ಮಕ್ಕಾಗಿ ಏನಾದರೂ ಮಾಡಬೇಕು ಎಂಬ ಉತ್ಸಾಹವು ಮತ್ತು ದೈವಿ ಚೈತನ್ಯದ ಅನುಭವವಾಯಿತು.

ಅಧಿವೇಶನದಲ್ಲಿ ಗಣ್ಯರು ತೆಗೆದುಕೊಂಡ ವಿಷಯಗಳು

ಈ ಅಧಿವೇಶನದ ಉದ್ಘಾಟನೆಗೆ ಮುಖ್ಯ ಅತಿಥಿಗಳಾಗಿ ಯುವ ಬ್ರಿಗೇಡ್‌ ಸಂಸ್ಥಾಪಕ ಶ್ರೀ. ಚಕ್ರವರ್ತಿ ಸೂಲಿಬೆಲೆಯವರು, ಉಡುಪಿ ಅದಮಾರು ಮಠದ ಪೂ. ಈಶಪ್ರಿಯತೀರ್ಥ ಶ್ರೀಪಾದರು, ಸನಾತನ ಸಂಸ್ಥೆಯ ಧರ್ಮಪ್ರಚಾರಕ ಸಂತ ಪೂ. ರಮಾನಂದ ಗೌಡ, ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯವಾದಿಗಳಾದ ಶ್ರೀ. ಕೃಷ್ಣಮೂರ್ತಿ ಇವರು ಮಾರ್ಗದರ್ಶನ ಮಾಡಲು ಆಗಮಿಸಿದ್ದರು. ಅದಲ್ಲದೇ ಧಾರವಾಡ ಉಚ್ಚ ನ್ಯಾಯಾಲಯದ ಹಿರಿಯ ನ್ಯಾಯವಾದಿ ಶ್ರೀ. ನಾರಾಯಣ ಯಾಜಿ, ಮಾಣಿಲದ ಪೂ. ಮೋಹನದಾಸ ಪರಮಹಂಸ ಸ್ವಾಮೀಜಿ,  ಹಿಂದೂ ಜನಜಾಗೃತಿ ಸಮಿತಿಯ ರಾಜ್ಯ ಸಮನ್ವಯಕರಾದ ಶ್ರೀ. ಗುರುಪ್ರಸಾದ ಗೌಡ, ದೇವಸ್ಥಾನ ಮಹಾಸಂಘದ ಧಾರವಾಡ ಜಿಲ್ಲಾ ಸಮನ್ವಯಕರಾದ ಶ್ರೀ. ಮಹಾದೇವ ಸಾಗ್ವೇಕರ ಸೇರಿದಂತೆ ಅನೇಕ ಗಣ್ಯರು ಮಾರ್ಗದರ್ಶನ ಮಾಡಿದರು.

ಈ ಅಧಿವೇಶನದಲ್ಲಿ ಬಹಳ ಮುಖ್ಯವಾಗಿ ಹಿಂದೂ ರಾಷ್ಟ್ರದ ಅವಶ್ಯಕತೆ, ನ್ಯಾಯವಾದಿಗಳು ಹಿಂದೂ ರಾಷ್ಟ್ರಕ್ಕಾಗಿ ಕಾರ್ಯ ಮಾಡುವುದರ ಮಹತ್ವ, ಹಿಂದೂ ಸಮಾಜದ ಮೇಲೆ ವೈಚಾರಿಕ ಆಕ್ರಮಣ, ಹಿಂದೂ ರಾಷ್ಟ್ರದ ಸ್ಥಾಪನೆಗೆ ಆಧ್ಯಾತ್ಮಿಕ ಸ್ತರದಲ್ಲಿ ಕಾರ್ಯ ಮಾಡುವುದರ ಮಹತ್ವ, ಹಿಂದೂ ಧರ್ಮದ ಮೇಲೆ ಆಘಾತ ಮಾಡುವ ಲವ್‌ ಜಿಹಾದ್, ಹಲಾಲ್‌ ಜಿಹಾದ್, ಮಂದಿರಗಳ ರಕ್ಷಣೆ ಮತ್ತು ಮಂದಿರಗಳನ್ನು ಸರಕಾರಿ ನಿಯಂತ್ರಣದಿಂದ ಮುಕ್ತ ಮಾಡುವುದು, ಅಲ್ಪಸಂಖ್ಯಾತರ ಓಲೈಕೆ, ಹಿಂದೂ ರಾಷ್ಟ್ರ ಸ್ಥಾಪನೆಯ ದಿಶೆ ಹೀಗೆ ಮಹತ್ವದ ವಿಷಯಗಳ ಬಗ್ಗೆ ಗಣ್ಯರ ಮಾರ್ಗದರ್ಶನ, ಚರ್ಚೆ, ಚಿಂತನ-ಮಂಥನ ನಡೆಯಿತು. ಈ ಅಧಿವೇಶನದಿಂದ ಎಲ್ಲರಿಗೆ ಹಿಂದೂ ರಾಷ್ಟ್ರಕ್ಕಾಗಿ ಕಾರ್ಯ ಮಾಡಲು ಪ್ರೇರಣೆಯು ಸಿಕ್ಕಿತು.

ಶ್ರೀ. ಮೋಹನ ಗೌಡ, ರಾಜ್ಯ ವಕ್ತಾರರು, ಹಿಂದೂ ಜನಜಾಗೃತಿ ಸಮಿತಿ.

(ಮುಂದುವರಿಯುವುದು)