Jama Masjid Meat Issue : ಉತ್ತರ ಪ್ರದೇಶದಲ್ಲಿನ ಶಾಹಿ ಜಾಮಾ ಮಸೀದಿಯಲ್ಲಿ ಮುಸಲ್ಮಾನನಿಂದಲೇ ಇಸ್ಲಾಂಗೆ ನಿಷಿದ್ಧವಾದ ಪ್ರಾಣಿಯ ಮಾಂಸ ಎಸೆತ !

ಆರೋಪಿ ನಜರುದ್ದೀನ ಬಂಧನ, ಆತನ ಇತರ ಸಹಚರರ ಶೋಧ ಕಾರ್ಯ ಮುಂದುವರೆದಿದೆ!

ಆಗ್ರಾ (ಉತ್ತರ ಪ್ರದೇಶ) – ಇಲ್ಲಿನ ಶಾಹಿ ಜಾಮಾ ಮಸೀದಿಯಲ್ಲಿ ಅಪರಿಚಿತರು ಇಸ್ಲಾಂನಲ್ಲಿ ನಿಷಿದ್ಧವಾದ ಪ್ರಾಣಿಯ ಮಾಂಸವನ್ನು ಎಸೆದಿದ್ದರಿಂದ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು. ಮುಸಲ್ಮಾನರು ಶುಕ್ರವಾರದ ನಮಾಜಗಾಗಿ ಮಸೀದಿಗೆ ತಲುಪಿದಾಗ, ಅವರಿಗೆ ವಜೂ (ನಮಾಜಗೆ ಮುಂಚೆ ಕೈಕಾಲು ತೊಳೆಯುವ ಸ್ಥಳ) ಬಳಿ ಪಾಲಿಥಿನ ಚೀಲವೊಂದು ಕಂಡುಬಂದಿತು. ಅದರಲ್ಲಿ ಈ ಮಾಂಸ ಇರುವುದು ಬೆಳಕಿಗೆ ಬಂದಿತು. ನಂತರ ಪೊಲೀಸರಿಗೆ ತಿಳಿಸಲಾಯಿತು. ಪೊಲೀಸರು ಮುಸಲ್ಮಾನರಿಗೆ ಶಾಂತಿ ಕಾಪಾಡುವಂತೆ ಮನವಿ ಮಾಡಿದರು, ಹಾಗೂ ಪೊಲೀಸರು ಕೇವಲ 5 ಗಂಟೆಗಳಲ್ಲಿ ತನಿಖೆ ನಡೆಸಿ ಈ ಪ್ರಕರಣದಲ್ಲಿ ನಜರುದ್ದೀನ ಎಂಬ ಮುಸ್ಲಿಂ ವ್ಯಕ್ತಿಯನ್ನು ಬಂಧಿಸಿದ್ದಾರೆ. ಈ ಅಪರಾಧದಲ್ಲಿ ಆತನೊಂದಿಗೆ ಇನ್ನೂ ಎಷ್ಟು ಜನರು ಭಾಗಿಯಾಗಿದ್ದಾರೆ ಎಂಬ ಬಗ್ಗೆ ವಿಚಾರಣೆ ನಡೆಸಲಾಗುತ್ತಿದೆ.

ಪ್ರಸ್ತುತ ಇಲ್ಲಿ ಬಿಗಿ ಪೊಲೀಸ್ ಬಂದೋಬಸ್ತ ಏರ್ಪಡಿಸಲಾಗಿದೆ. ಮಸೀದಿಯ ಸುತ್ತಲೂ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಅವುಗಳ ಆಧಾರದ ಮೇಲೆ ಪೊಲೀಸರು ಇತರ ಆರೋಪಿಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಇದಕ್ಕಾಗಿ 5 ತಂಡಗಳನ್ನು ರಚಿಸಲಾಗಿದ್ದು, ಈ ಘಟನೆಯನ್ನು ಇಲ್ಲಿನ ಶಾಂತಿಯನ್ನು ಕದಡಲು ಮಾಡಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಸಂಪಾದಕೀಯ ನಿಲುವು

  • ಗಲಭೆಗಳನ್ನು ಸೃಷ್ಟಿಸಿ ಹಿಂದೂಗಳ ಮೇಲೆ ದಾಳಿ ಮಾಡಲು ಮುಸಲ್ಮಾನರು ಸ್ವತಃ ಯಾವ ರೀತಿಯ ಷಡ್ಯಂತ್ರಗಳನ್ನು ರೂಪಿಸುತ್ತಿದ್ದಾರೆ ಎಂಬುದನ್ನು ಗಮನಿಸಿರಿ! ಹಿಂದೂಗಳೇ, ಇಂತಹ ಘಟನೆಗಳ ಸಮಯದಲ್ಲಿ ಪೊಲೀಸರು ರಕ್ಷಿಸುತ್ತಾರೆ ಎಂಬ ಭ್ರಮೆಯಲ್ಲಿರದೇ ಸ್ವ ರಕ್ಷಣೆಗಾಗಿ ತರಬೇತಿ ಪಡೆಯಿರಿ!
  • ಈ ಘಟನೆಯ ಬಗ್ಗೆ ದೇಶದ ಕಾಂಗ್ರೆಸ್, ಸಮಾಜವಾದಿ ಪಕ್ಷ, ಕಮ್ಯುನಿಸ್ಟ್, ತೃಣಮೂಲ ಕಾಂಗ್ರೆಸ್ ಮುಂತಾದ ಮುಸ್ಲಿಂ ಪರ ರಾಜಕೀಯ ಪಕ್ಷಗಳು ಬಾಯಿ ತೆರೆಯುತ್ತಿಲ್ಲ ಎಂಬುದನ್ನು ಗಮನಿಸಬೇಕು!
  • ಮುಂಬಯಿ ಮೇಲಿನ ನವೆಂಬರ್ 26, 2008 ರ ಭಯೋತ್ಪಾದಕ ದಾಳಿಯ ಸಮಯದಲ್ಲಿ ಜಿಹಾದಿ ಭಯೋತ್ಪಾದಕರು ತಾವು ಹಿಂದೂಗಳೆಂದು ತೋರಿಸಿಕೊಳ್ಳಲು ಎಲ್ಲಾ ರೀತಿಯ ಪ್ರಯತ್ನಗಳನ್ನು ಮಾಡಿದ್ದರು, ಅದೇ ರೀತಿ ಈಗಲೂ ನಡೆಯುತ್ತಿದೆ. ಸಾಮಾಜಿಕ ಮಾಧ್ಯಮಗಳ ಮೂಲಕ ಇಸ್ಲಾಂ ಅನ್ನು ಅವಮಾನಿಸಿ ಅದರ ದೋಷವನ್ನು ಹಿಂದೂಗಳ ಮೇಲೆ ಹೊರಿಸುವ ಪ್ರಯತ್ನ ಬಾಂಗ್ಲಾದೇಶದಲ್ಲಿ ಮತ್ತು ಈಗ ಭಾರತದಲ್ಲೂ ನಡೆಯುತ್ತಿದೆ ಎಂಬುದನ್ನು ಗಮನಿಸಬೇಕು!