
‘ಸನಾತನದ ಓರ್ವ ಸಾಧಕನು ಕೆಲವು ವರ್ಷಗಳ ವರೆಗೆ ತಳಮಳದಿಂದ, ಶ್ರಮಪಟ್ಟು ಮತ್ತು ತುಂಬಾ ಸಮಷ್ಟಿ ಸೇವೆಯನ್ನು ಮಾಡುತ್ತಿದ್ದನು. ೨೦೦೬ ರಲ್ಲಿ ಅವನಿಗೆ ಓರ್ವ ಸಂತರು ಗುರುಮಂತ್ರವನ್ನು ನೀಡಿದರು. ಅಂದಿನಿಂದ ಹಿಡಿದು ಜನವರಿ ೨೦೨೫ ರ ವರೆಗೆ ಆ ಸಾಧಕನು ಸಮಷ್ಟಿ ಸೇವೆ ಮಾಡುವುದನ್ನು ನಿಲ್ಲಿಸಿದ್ದನು. ಅವನಿಗೆ, ‘ಸಂತರು ಗುರುಮಂತ್ರವನ್ನು ನೀಡಿದ್ದಾರೆ ಎಂದರೆ ಎಲ್ಲವೂ ಅದರಲ್ಲಿದೆ. ಈಗ ಕೇವಲ ನಾಮಜಪ ಮಾಡಿದರೆ ಸಾಕು. ಸಮಷ್ಟಿ ಸೇವೆ ಮಾಡುವುದು ಅವಶ್ಯಕತೆಯಿಲ್ಲ,’ ಎಂದೆನಿಸಿತು.
ಸಾಧಕನ ಈ ದೃಷ್ಟಿಕೋನವು ತಪ್ಪಾಗಿದೆ; ಏಕೆಂದರೆ ‘ನಾಮಜಪ ಮಾಡುವುದು’, ಇದು ವ್ಯಷ್ಟಿ ಸಾಧನೆಯಾಗಿದೆ. ಈ ಕಲಿಯುಗದಲ್ಲಿ ಅದಕ್ಕೆ ಕೇವಲ ಶೇ. ೩೦ ರಷ್ಟು ಮಹತ್ವವಿದೆ, ಮತ್ತು ಸಮಷ್ಟಿ ಸಾಧನೆಗೆ ಶೇ. ೭೦ ರಷ್ಟು ಮಹತ್ವವಿದೆ !
ಸಂತರು ಗುರುಮಂತ್ರವನ್ನು ಯಾವಾಗ ನೀಡುತ್ತಾರೆ ? ಯಾವಾಗ ಅವರಿಗೆ, ‘ಯಾವುದಾದರೊಬ್ಬ ಸಾಧಕನು ಅಥವಾ ಶಿಷ್ಯನು ಯೋಗ್ಯ ಮಾರ್ಗದಿಂದ ಆಧ್ಯಾತ್ಮಿಕ ಮಾರ್ಗಕ್ರಮಣ ಮಾಡುತ್ತಿದ್ದಾನೆ, ಹಾಗೆಯೇ ಯೋಗ್ಯ ರೀತಿಯಲ್ಲಿ ಸಮಷ್ಟಿ ಸೇವೆಯನ್ನು ತಳಮಳದಿಂದ ಮಾಡುತ್ತಿದ್ದಾನೆ’, ಎಂದು ಎನಿಸುತ್ತದೆಯೋ, ಆಗಲೇ ಅವರು ಅವನ ಆಧ್ಯಾತ್ಮಿಕ ಉನ್ನತಿಯು ಇನ್ನೂ ಶೀಘ್ರಗತಿಯಿಂದಾಗಲು ಅವನಿಗೆ ಗುರುಮಂತ್ರವನ್ನು ನೀಡುತ್ತಾರೆ.
ಸಾಧಕನು ಇದೆಲ್ಲ ವಿರುದ್ಧವಾಗಿ ಮಾಡಿದನು. ಅವನು ಸಮಷ್ಟಿ ಸೇವೆ ಮಾಡುವುದನ್ನು ಬಿಟ್ಟು ಬಿಟ್ಟನು. ಹಾಗೆಯೇ ‘ತಾನು ಮಾಡುತ್ತಿರುವುದು ಸರಿಯಿದೆಯೇ ?’, ಎಂದು ಗುರುಮಂತ್ರವನ್ನು ನೀಡಿದ ಸಂತರಿಗೆ ಕೇಳಲಿಲ್ಲ. ಆದ್ದರಿಂದ ಅವನ ಸಾಧನೆಯಲ್ಲಿನ ೧೯ ವರ್ಷಗಳು ವ್ಯರ್ಥವಾದವು. ಈ ದೃಷ್ಟಿಕೋನವನ್ನು ಸಾಧನೆ ಮಾಡುವವರೆಲ್ಲರೂ ಗಮನದಲ್ಲಿಡಬೇಕು !’
– (ಸದ್ಗುರು) ಡಾ. ಮುಕುಲ ಗಾಡಗೀಳ, ಪಿಎಚ್.ಡಿ., ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಗೋವಾ. (೧೪.೨.೨೦೨೫)
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ದ ಮಾಧ್ಯಮದಿಂದ ಕಲಾವಿದರಿಗೆ ಕಲೆಯ ಕಡೆಗೆ ಸಾಧನೆ ಎಂದು ನೋಡಲು ನೀಡಿದ ಮಾರ್ಗದರ್ಶನ !
ಸಾಧಕರಲ್ಲಿ ಆಂತರಿಕ ಬದಲಾವಣೆಯನ್ನು ತರುವ ಪೂ. ರಮಾನಂದ ಗೌಡ !
‘ತಮ್ಮ ಶಾರೀರಿಕ ಸ್ಥಿತಿಯನ್ನು ಪೂರ್ಣ ಸ್ವೀಕರಿಸುವುದು’, ಭಗವತ್ಪ್ರಾಪ್ತಿಯ ಮೊದಲ ಮೆಟ್ಟಿಲಾಗಿದೆ !
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಹೆಚ್ಚಿದ ನಿದ್ರೆ, ಅಂದರೆ ದೇವರು ಅವರ ನಿರ್ವಿಚಾರ ಸ್ಥಿತಿಯನ್ನು ಹೆಚ್ಚಿಸಲು ಮಾಡಿದ ಉಪಾಯಯೋಜನೆಯಾಗಿದೆ !
ಸಾಧನೆಯಿಂದ ಸಾಧಕರಲ್ಲಿ ಚೈತನ್ಯ ಮತ್ತು ದೈವೀ ಗುಣಗಳು ಹೆಚ್ಚಳವಾಗುವುದು ಹಾಗೂ ಸಮಾಜದ ವ್ಯಕ್ತಿಗಳು ಸಾಧಕರ ಕಡೆಗೆ ಆಕರ್ಷಿತರಾಗುವುದು
ಆಧ್ಯಾತ್ಮಿಕ ಉಪಾಯಗಳ ವಿಷಯದಲ್ಲಿ ಇದನ್ನು ನೆನಪಿನಲ್ಲಿಡಿ !