|

ಕೋಲಕತಾ (ಬಂಗಾಲ) – ಕೋಲಕತಾ ಮಹಾನಗರ ಪಾಲಿಕೆಯು ವಿಶ್ವಕರ್ಮ ಪೂಜೆಯ ರಜೆ ರದ್ದುಪಡಿಸಿ ಈದ್ ಗೆ ಎರಡು ದಿನ ರಜೆಯನ್ನು ಹೆಚ್ಚಿಸಿತ್ತು. ಮಹಾನಗರ ಪಾಲಿಕೆಯಿಂದ ಹಿಂದಿ ಮಾಧ್ಯಮದ ಶಾಲೆಗಳಿಗಾಗಿ ಈ ಆದೇಶ ಜಾರಿಗೊಳಿಸಲಾಗಿತ್ತು. ಈ ನಿರ್ಣಯಕ್ಕೆ ಭಾಜಪ ಹಾಗೂ ಸಮಾಜದಿಂದ ಕೂಡ ವಿರೋಧವಾಯಿತು. ಬಳಿಕ ಕೋಲಕತಾ ಮಹಾನಗರ ಪಾಲಿಕೆಯು ಈ ಆದೇಶ ಹಿಂಪಡೆಯಿತು ಮತ್ತು ಅನಿರೀಕ್ಷಿತವಾಗಿ ನಡೆದಿರುವ ತಪ್ಪೆಂದು ಹೇಳಿತು. ಹಾಗೂ ಈ ಆದೇಶ ನೀಡುವ ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಕಾರಣ ನೀಡಿ ನೋಟಿಸ್ ಕೂಡ ವಿಧಿಸಲಾಗಿದೆ. ಜವಾಬ್ದಾರ ಅಧಿಕಾರಿಗಳ ಅನುಮತಿ ಇಲ್ಲದೆ ಈ ಆದೇಶ ಪ್ರಸಾರ ಮಾಡಲಾಗಿದೆ ಎಂದು ಮಹಾನಗರ ಪಾಲಿಕೆಯ ಆಯುಕ್ತರು ಹೇಳಿದ್ದಾರೆ.

ಆದೇಶದ ಹಿಂದೆ ಕೋಲಕತಾದ ಮಹಾಪೌರ ಮತ್ತು ತೃಣಮೂಲ ಕಾಂಗ್ರೆಸ್ಸಿನ ನಾಯಕ ಫಿರಹಾದ್ ಹಕಿಮ್ ಇವರ ಕೈವಾಡ ! – ಭಾಜಪದ ಆರೋಪ
ಈ ಆದೇಶ ಫೆಬ್ರುವರಿ ೨೫ ರಂದು ಪ್ರಸಾರ ಮಾಡಲಾಯಿತು. ಅದರ ಬಗ್ಗೆ ಕೋಲಕತಾ ಮಹಾನಗರ ಪಾಲಿಕೆಯ ಶಿಕ್ಷಣ ಇಲಾಖೆಯ ಮುಖ್ಯ ವ್ಯವಸ್ಥಾಪಕರ ಹೆಸರಿನಲ್ಲಿ ಸಹಿ ಮಾಡಲಾಗಿತ್ತು. ಅದರ ನಂತರ ಭಾಜಪದ ನಾಯಕ ಜಗನ್ನಾಥ ಚಟ್ಟೋಪಾಧ್ಯಾಯ ಇವರು, ಶಿಕ್ಷಣ ಇಲಾಖೆಯ ಮುಖ್ಯ ವ್ಯವಸ್ಥಾಪಕರಿಗೆ ಈ ರೀತಿ ನೋಟಿಸ್ ನೀಡುವ ಆದೇಶ ಯಾರು ನೀಡಿದ್ದಾರೆ? ಬಂಗಾಲದ ಯಾವುದೇ ಅಧಿಕಾರಿ ತಾವಾಗಿಯೇ ಈ ಆದೇಶ ನೀಡಲು ಸಾಧ್ಯವಿಲ್ಲ, ಕೋಲಕತಾ ಮಹಾನಗರ ಪಾಲಿಕೆಯ ಆಡಳಿತ ಕೋಲಕತಾ ಮಹಾಪೌರ ಮತ್ತು ತೃಣಮೂಲ ಕಾಂಗ್ರೆಸ್ಸಿನ ನಾಯಕ ಫಿರಹಾದ ಹಕೀಮ ಇವರ ಕೈಯಲ್ಲಿ ಇರುವುದರಿಂದ ಈ ರೀತಿ ನಡೆದಿದೆ, ಎಂದು ಹೇಳಿದರು.
ಸಂಪಾದಕೀಯ ನಿಲುವುಕೋಲಕತಾ ಮಹಾನಗರ ಪಾಲಿಕೆಯಲ್ಲಿ ಹಿಂದೂದ್ರೋಹಿ ತೃಣಮೂಲ ಕಾಂಗ್ರೆಸ್ಸಿನ ಸರಕಾರ ಇರುವುದರಿಂದ ಈ ಆದೇಶ ನೀಡಲಾಗಿತ್ತು, ಇದು ಪ್ರತ್ಯೇಕವಾಗಿ ಹೇಳುವ ಅಗತ್ಯವಿಲ್ಲ ! |
ಇಬ್ಬರು ಸ್ವಂತ ಹಿಂದೂ ಸಹೋದರಿಯರಿಗೆ ಕಿರುಕುಳ ನೀಡಿ ತಲೆಮರೆಸಿಕೊಂಡಿರುವ ಆರೋಪಿಯ ವಿರುದ್ಧ ಪ್ರಕರಣ ದಾಖಲು !
ಹಿಂದೂಗಳು ಕರೆ ನೀಡಿದ್ದ ‘ಭಟ್ಕಳ ಬಂದ್’ಗೆ ಉತ್ತಮ ಪ್ರತಿಕ್ರಿಯೆ: ಪ್ರತಿಭಟನಾ ಮೆರವಣಿಗೆಯಲ್ಲಿ ಸಾವಿರಾರು ಹಿಂದೂಗಳ ಭಾಗಿ!
ಯಾವುದೇ ಕಾರಣಕ್ಕೂ ನನಗೆ ನನ್ನ (ಹಿಂದೂ) ಧರ್ಮವನ್ನು ಬಿಡಲು ಸಾಧ್ಯವಿಲ್ಲ!
‘ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ’ ವಿರುದ್ಧ ಆರೋಪ ನಿರ್ಧರಿಸಲು ನ್ಯಾಯಾಲಯದ ಆದೇಶ
ಭಾರತದ ಗಡಿಯಲ್ಲಿ ಚೀನಾ ನಿರ್ಮಿತ ಕ್ಯಾಮೆರಾಗಳ ಅಳವಡಿಸಿದ ನೇಪಾಳ!
ಬಾಂಗ್ಲಾದೇಶಿ ವಲಸಿಗರ ಕೇಂದ್ರವಾಗಿರುವ ಮುಂಬಯಿ: ೧,೫೦೦ ಕ್ಕೂ ಹೆಚ್ಚು ಅಕ್ರಮ ವಲಸಿಗರ ಅಡ್ಡೆ!