
‘ಸಂತರ ಸಹವಾಸ ಪಡೆಯಲು ತುಂಬಾ ಭಾಗ್ಯ ಬೇಕಾಗುತ್ತದೆ. ಸಾಧಕರು ಸಂತರನ್ನು ಅಂತರ್ಮುಖ ದೃಷ್ಟಿಯಿಂದ ನೋಡಿದಾಗ ಮಾತ್ರ ಅವರಿಗೆ ಸಂತರಲ್ಲಿನ ದೇವತ್ವದ ನಿಜವಾದ ಲಾಭ ಆಗುತ್ತದೆ. ‘ಸಂತರ ಸಹವಾಸ ಪಡೆದ ನಂತರ ಅವರಲ್ಲಿನ ಚೈತನ್ಯದ ಲಾಭವಾಗಲು ಪ್ರಾರ್ಥನೆ ಮಾಡುವುದು, ‘ಸಂತರು ಏನೆಲ್ಲ ಹೇಳುತ್ತಾರೋ ಅದು ನಮ್ಮ ಕಲ್ಯಾಣಕ್ಕಾಗಿಯೆ ಇದೆ’ ಎಂದು ತಿಳಿದುಕೊಳ್ಳುವುದು, ಅವರ ಗುಣಗಳ ಅಭ್ಯಾಸ ಮಾಡಿ ಆ ಗುಣವನ್ನು ನಮ್ಮಲ್ಲಿ ಅಳವಡಿಸಿಕೊಳ್ಳುವುದು, ಅವರಿಂದ ಆಧ್ಯಾತ್ಮಿಕ ಮಟ್ಟದಲ್ಲಿ ಕಲಿಯುವುದು, ಅವರ ಸಹವಾಸದಲ್ಲಿ ಭಾವದ ಸ್ತರದಲ್ಲಿ ಇರುವುದು’, ಇಂತಹ ಪ್ರಯತ್ನ ಮಾಡುವುದು, ಅಂದರೆ ಸಂತರನ್ನು ಆಂತರ್ಮುಖ ದೃಷ್ಟಿಯಿಂದ ನೋಡುವುದು ಎಂದರ್ಥ. ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಅವರು ತಮ್ಮ ಗುರುಗಳ ಮುಂದೆ ಎಂದಿಗೂ ಕುಳಿತುಕೊಳ್ಳುತ್ತಿರಲಿಲ್ಲ, ಯಾವಾಗಲೂ ನಿಂತುಕೊಂಡಿದ್ದು ಗುರುಗಳು ಸಹಜ ಮಾತನಾಡಿದÀ ಪ್ರತಿಯೊಂದು ವಾಕ್ಯದಿಂದ ಕಲಿಯುತ್ತಿದ್ದರು ! ಸಂತರ ಸಹವಾಸದಲ್ಲಿರಲು ಅವಕಾಶ ಸಿಕ್ಕಿರುವ ಸಾಧಕರು ಸಹ ಸಾಧನೆಯ ಪ್ರಯತ್ನ ವೃದ್ಧಿಸಬೇಕು.’
– ಪೂ. ಸಂದೀಪ ಆಳಶಿ
ದೈವಿ ಯುವ ಸಾಧಕಿಯರ ಪ್ರಬುದ್ಧ ವಿಚಾರಗಳಿಗೆ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ನೀಡಿದ ಅಮೂಲ್ಯ ಮಾರ್ಗದರ್ಶನ !
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ದ ಮಾಧ್ಯಮದಿಂದ ಕಲಾವಿದರಿಗೆ ಕಲೆಯ ಕಡೆಗೆ ಸಾಧನೆ ಎಂದು ನೋಡಲು ನೀಡಿದ ಮಾರ್ಗದರ್ಶನ !
ಸಾಧಕರಲ್ಲಿ ಆಂತರಿಕ ಬದಲಾವಣೆಯನ್ನು ತರುವ ಪೂ. ರಮಾನಂದ ಗೌಡ !
‘ತಮ್ಮ ಶಾರೀರಿಕ ಸ್ಥಿತಿಯನ್ನು ಪೂರ್ಣ ಸ್ವೀಕರಿಸುವುದು’, ಭಗವತ್ಪ್ರಾಪ್ತಿಯ ಮೊದಲ ಮೆಟ್ಟಿಲಾಗಿದೆ !
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಹೆಚ್ಚಿದ ನಿದ್ರೆ, ಅಂದರೆ ದೇವರು ಅವರ ನಿರ್ವಿಚಾರ ಸ್ಥಿತಿಯನ್ನು ಹೆಚ್ಚಿಸಲು ಮಾಡಿದ ಉಪಾಯಯೋಜನೆಯಾಗಿದೆ !
ಸಾಧನೆಯಿಂದ ಸಾಧಕರಲ್ಲಿ ಚೈತನ್ಯ ಮತ್ತು ದೈವೀ ಗುಣಗಳು ಹೆಚ್ಚಳವಾಗುವುದು ಹಾಗೂ ಸಮಾಜದ ವ್ಯಕ್ತಿಗಳು ಸಾಧಕರ ಕಡೆಗೆ ಆಕರ್ಷಿತರಾಗುವುದು