ಭಾಗ್ಯನಗರ (ತೆಲಂಗಾಣ) – ಭಾರತವು ನಿಷೇಧಿಸಿದ ‘ಇಂಡಿಯನ ಮುಜಾಹಿದ್ದೀನ’ ಈ ಜಿಹಾದಿ ಭಯೋತ್ಪಾದಕ ಸಂಘಟನೆಯ 5 ಭಯೋತ್ಪಾದಕರಿಗೆ ಕೆಳ ನ್ಯಾಯಾಲಯವು ವಿಧಿಸಿದ ಗಲ್ಲು ಶಿಕ್ಷೆಯನ್ನು ತೆಲಂಗಾಣ ಉಚ್ಚ ನ್ಯಾಯಾಲಯವು ಎತ್ತಿ ಹಿಡಿದಿದೆ. 2013 ರಲ್ಲಿ ಭಾಗ್ಯನಗರದ ದಿಲಸುಖನಗರದಲ್ಲಿ ನಡೆದ 2 ಬಾಂಬ್ ಸ್ಫೋಟಗಳಲ್ಲಿ ಈ ಭಯೋತ್ಪಾದಕರು ಭಾಗಿಯಾಗಿದ್ದರು. ಈ ಸ್ಫೋಟದಲ್ಲಿ 18 ಜನರು ಮೃತಪಟ್ಟಿದ್ದರು ಮತ್ತು 131 ಜನರು ಗಾಯಗೊಂಡಿದ್ದರು.
🚨 Bhagyanagar (Hyderabad) 2013 blast case: Death sentence upheld for 5 convicted terrorists — including Yaseen Bhatkal, co-founder of the banned Indian Mujahideen (IM), along with Asadullah Akhtar, Rehman, Tahseen Akhtar & Ajaz.
18 killed, 100+ injured — yet justice comes 12… pic.twitter.com/wdpsxRtobX
— Sanatan Prabhat (@SanatanPrabhat) April 8, 2025
ಡಿಸೆಂಬರ 13, 2016 ರಂದು ರಾಷ್ಟ್ರೀಯ ತನಿಖಾ ದಳದ ನ್ಯಾಯಾಲಯವು ಇಂಡಿಯನ ಮುಜಾಹಿದ್ದೀನ ಸಹ-ಸಂಸ್ಥಾಪಕ ಮಹಮ್ಮದ ಅಹ್ಮದ ಸಿದ್ದೀಬಾಪಾ ಉರ್ಫ್ ಯಾಸಿನ ಭಟ್ಕಳ, ಪಾಕಿಸ್ತಾನಿ ಪ್ರಜೆ ಜಿಯಾ-ಉರ್-ರೆಹಮಾನ ಉರ್ಫ್ ವಕಾಸ, ಅಸದುಲ್ಲಾ ಅಖ್ತರ ಉರ್ಫ್ ಹಡ್ಡಿ, ತಹ್ಸಿನ ಅಖ್ತರ ಉರ್ಫ್ ಮೋನು ಮತ್ತು ಎಜಾಜ ಶೇಖ್ ಅವರನ್ನು ದೋಷಿಗಳೆಂದು ತೀರ್ಪು ನೀಡಿತ್ತು.
ಸಂಪಾದಕೀಯ ನಿಲುವು
|