
ಪ್ರಯಾಗರಾಜ, ಜನವರಿ 30 (ಸುದ್ದಿ.) – ಸನಾತನ ಸಂಸ್ಥೆಯೊಂದಿಗೆ ನನಗೆ 14-15 ವರ್ಷಗಳಿಂದ ಪರಿಚಯವಿದೆ. ಯಾವಾಗ ದೇಶವಾಸಿಗಳ ಮನಸ್ಸಿನಲ್ಲಿಯೂ ಹಿಂದೂ ರಾಷ್ಟ್ರದ ಬಗ್ಗೆ ಯಾವುದೇ ವಿಚಾರವಿಲ್ಲದಿರುವಾಗ, ಭಾರತದಲ್ಲಿ ಹಿಂದೂ ರಾಷ್ಟ್ರಕ್ಕಾಗಿ ಬೇಡಿಕೆ ಮಂಡಿಸುತ್ತಿರುವವರಲ್ಲಿ ಸನಾತನ ಸಂಸ್ಥೆ ಅಗ್ರಸ್ಥಾನದಲ್ಲಿತ್ತು ಎಂದು ನಾನು ಹೇಳಲು ಬಯಸುತ್ತೇನೆ. ಇಂದು, ಅದೇ ಬೇಡಿಕೆ ಪ್ರತಿಯೊಬ್ಬ ಸನಾತನ ಹಿಂದೂವಿನ ಮುಖದಲ್ಲಿದೆ. ಪ್ರತಿಯೊಬ್ಬ ಜಾಗರೂಕ ಹಿಂದೂವಿಗೆ ‘ಹಿಂದೂ ರಾಷ್ಟ್ರ ಆಗಬೇಕು’ ಎಂದು ಅನಿಸುತ್ತಿದೆ.
ಸಂತರು-ಮಹಂತರು ಕೂಡ ಈಗ ಹಿಂದೂ ರಾಷ್ಟ್ರದ ಬಗ್ಗೆ ಮಾತನಾಡುತ್ತಿದ್ದಾರೆ. ಗೋ ರಕ್ಷಾ ದಳವು ಹಿಂದೂ ರಾಷ್ಟ್ರವಾದ ನಂತರ ದೇಶದಲ್ಲಿ ಗೋಹತ್ಯೆ ಖಂಡಿತವಾಗಿಯೂ ನಿಲ್ಲುತ್ತದೆ ಎಂದು ದೃಢವಾಗಿ ನಂಬುತ್ತದೆ. ಎಲ್ಲಾ ಹಿಂದೂ ಬಾಂಧವರಿಗೆ ನಾನು ಸೆಕ್ಟರ್ 9 ರಲ್ಲಿರುವ ಸನಾತನ ಸಂಸ್ಥೆಯ ಪ್ರದರ್ಶನ ಕಕ್ಷೆಗೆ ಖಂಡಿತವಾಗಿಯೂ ಭೇಟಿ ನೀಡಬೇಕು ಎಂದು ಮನವಿ ಮಾಡಿಕೊಳ್ಳುತ್ತೇನೆ. ಈ ಪ್ರದರ್ಶನವನ್ನು ನೋಡಿದ ನಂತರ ಒಬ್ಬ ಸನಾತನಿ ಹಿಂದೂ ಹೇಗೆ ಜೀವಿಸಬೇಕು? ಎನ್ನುವ ಮಾಹಿತಿ ಎಲ್ಲರಿಗೂ ಸಿಗುತ್ತದೆ ಎಂದು ಗೋ ರಕ್ಷಾ ದಳದ ಶ್ರೀ. ಸತೀಶ ಕುಮಾರ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ಸನಾತನ ಸಂಸ್ಥೆಯ ಪ್ರದರ್ಶನ ಕಕ್ಷೆಗೆ ಅವರು ತಮ್ಮ ಸಹೋದ್ಯೋಗಿಗಳೊಂದಿಗೆ ಭೇಟಿ ನೀಡಿದರು. ಆ ಸಮಯದಲ್ಲಿ ಅವರು ಸನಾತನ ಸಂಸ್ಥೆಯ ಕಾರ್ಯವನ್ನು ಶ್ಲಾಘಿಸಿದರು. ಸನಾತನ ಸಂಸ್ಥೆಯ ವತಿಯಿಂದ ಶ್ರೀ. ಮಹೇಶ ಪಾಠಕ ಅವರು ಶ್ರೀ. ಸತೀಶ ಕುಮಾರ ಮತ್ತು ಅವರ ಸಹೋದ್ಯೋಗಿಗಳಿಗೆ ‘ಸನಾತನ ಪ್ರಭಾತ’ ದಿನಪತ್ರಿಕೆಯನ್ನು ಉಡುಗೊರೆಯಾಗಿ ನೀಡಿದರು.
ಕೇರಳಮ್ದಲ್ಲಿ ‘ಇಸ್ಲಾಂ ಫ್ರೆಂಡ್ಲಿ’ ಜಿಮ್ ಕುರಿತು ವಿವಾದ
ಪುಣೆ ನಗರದಲ್ಲಿ ಮತ್ತೆ ‘ಕಾರ್ಪೊರೇಟ್ ಜಿಹಾದ್’ ಪ್ರಕರಣ
‘ದಾರುಲ್ ಉಲೂಮ್ ದೇವಬಂದ್’ ಭಯೋತ್ಪಾದಕರ ಕೇಂದ್ರವಾಗಿರುವುದರಿಂದ ಅದನ್ನು ನೆಲಸಮ ಮಾಡಿ ! – ಹಿಂದೂ ರಕ್ಷಾ ದಳದ ಬೇಡಿಕೆ
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭಗವಾನ್ ಶಿವನ ರೂಪದಲ್ಲಿ ತೋರಿಸಿದ ‘ವಿಶ್ವವಾಣಿ’ ಪತ್ರಿಕೆ !
‘ಭಂಡಾರ ಎಂದರೆ ಶುದ್ಧ ಅರಿಶಿನ’ ಎಂದು ಘೋಷಿಸುವಂತೆ ಅನ್ನ ಮತ್ತು ಔಷಧ ಆಡಳಿತಕ್ಕೆ (FDA) ಆಗ್ರಹ!
ಪಾನ್ ಮಸಾಲಾ, ಗುಟ್ಕಾ ಮತ್ತು ಕಲಬೆರಕೆ ಆಹಾರ ಪದಾರ್ಥಗಳ ಒಂದೂವರೆ ಕೋಟಿಗೂ ಹೆಚ್ಚು ಮೌಲ್ಯದ ದಾಸ್ತಾನು ವಶ