UP Illegal Mazar Demolition : ಉತ್ತರ ಪ್ರದೇಶದ ಬರೇಲಿಯಲ್ಲಿ ಮಜಾರ್ ಮೇಲೆ ಅಕ್ರಮ ಕಟ್ಟಡ ನಿರ್ಮಾಣ: 100 ಮುಸ್ಲಿಮರ ವಿರುದ್ಧ ದೂರು !

(ಮಜಾರ್ ಎಂದರೆ ಮುಸ್ಲಿಂ ಗೋರಿ)

ಬರೇಲಿ (ಉತ್ತರ ಪ್ರದೇಶ) – ಬರೇಲಿಯ ಗಣೇಶಪುರ ಗ್ರಾಮದಲ್ಲಿರುವ ಮಜಾರ್ ಮೇಲೆ ಅಕ್ರಮ ಶಾಶ್ವತ ಕಟ್ಟಡ ನಿರ್ಮಾಣ ಮಾಡಲಾಗಿದೆ. ಇಲ್ಲಿ ರಾತ್ರಿ ವೇಳೆ ಸಿಮೆಂಟ್ ಕಂಬಗಳನ್ನು ಇರಿಸಿ 20 ಅಡಿ ಎತ್ತರದ ಕಟ್ಟಡ ನಿರ್ಮಿಸಲಾಗಿದೆ. ಈ ಪ್ರಕರಣದಲ್ಲಿ ಬರೇಲಿಯ ಭಾಜಪ ಸಂಸದರು ದೂರು ದಾಖಲಿಸಿದ್ದಾರೆ. ಈ ದೂರಿನ ಆಧಾರದ ಮೇಲೆ, ಆಡಳಿತವು ತನಿಖೆ ನಡೆಸಿ ಆರೋಪಿ ಮುಸ್ಲಿಮರಿಗೆ ನೋಟಿಸ್ ಕಳುಹಿಸಿತು.

1. ಒಂದು ವರದಿಯ ಪ್ರಕಾರ, ಗಣೇಶಪುರ ಗ್ರಾಮದ ಕಬ್ರಸ್ತಾನದಲ್ಲಿ 30 ರಿಂದ 40 ವರ್ಷ ಹಳೆಯ ಗೋರಿಗಳು ಇದ್ದವು. ಜನವರಿ 2025 ರಲ್ಲಿ, ರಾತ್ರಿ ವೇಳೆ ಅಕ್ರಮ ನಿರ್ಮಾಣ ಕಾರ್ಯ ನಡೆಸಿ ಅದರ ಮೇಲೆ ಛಾವಣಿ ಹಾಕಲಾಯಿತು. ಈ ನಿರ್ಮಾಣಕ್ಕೆ ಆಡಳಿತದಿಂದ ಯಾವುದೇ ಅನುಮತಿಯನ್ನು ಪಡೆದಿಲ್ಲ ಅಥವಾ ಅವರಿಗೆ ತಿಳಿಸಲಾಗಿಲ್ಲ. ಬರೇಲಿಯ ಭಾಜಪ ಸಂಸದ ಛತ್ರಪಾಲ ಸಿಂಗ ಗಂಗ್ವಾರ್ ಇವರು ಈ ಹಳ್ಳಿಯ ಮೂಲಕ ಹಾದು ಹೋಗುತ್ತಿದ್ದಾಗ ಇಡೀ ಪ್ರಕರಣ ಬೆಳಕಿಗೆ ಬಂದಿತು. ಅವರು ಈ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದರು.

2. ಈ ವಿಷಯದ ಬಗ್ಗೆ ತನಿಖೆಗೆ ಉಪ ಜಿಲ್ಲಾ ಮ್ಯಾಜಿಸ್ಟ್ರೇಟ್ ಆದೇಶಿಸಿದರು. ಆಡಳಿತವು ತನಿಖೆ ನಡೆಸಿದಾಗ, ನಿರ್ಮಾಣವು ಅಕ್ರಮವಾಗಿದೆ ಎಂದು ಕಂಡುಬಂದಿದೆ. ಇದಾದ ನಂತರ, ಈ ಕಟ್ಟಡವನ್ನು ತಕ್ಷಣವೇ ಕೆಡವಲು ಆದೇಶ ನೀಡಲಾಯಿತು.

3. ಈ ಪ್ರಕರಣದಲ್ಲಿ ಕ್ರಮ ಕೈಗೊಂಡಿರುವ ಪೊಲೀಸರು, ಗ್ರಾಮದ 100 ಮುಸ್ಲಿಮರ ವಿರುದ್ಧ ಶಾಂತಿ ಭಂಗ ಮಾಡುವ ಕಾನೂನಿನ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಸಂಪಾದಕೀಯ ನಿಲುವು

  • ಇಷ್ಟು ದೊಡ್ಡ ಪ್ರಮಾಣದಲ್ಲಿ ಅಕ್ರಮ ನಿರ್ಮಾಣ ನಡೆಯುತ್ತಿರುವಾಗ ಆಡಳಿತ ನಿದ್ರಿಸುತ್ತಿತ್ತೇ ? ಆಡಳಿತದ ಈ ಆಡಳಿತದ ಈ ನಿದ್ರಿಸ್ತ ವೃತ್ತಿಯಿಂದಾಗಿ ಮತಾಂಧ ಮುಸ್ಲಿಮರು ಕೊಬ್ಬಿದ್ದಾರೆ ಮತ್ತು ಲ್ಯಾಂಡ್ ಜಿಹಾದ್ ಮಾಡಲು ಧೈರ್ಯ ಮಾಡುತ್ತಾರೆ !
  • ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ಅವರ ಹಿಂದುತ್ವನಿಷ್ಠ ಸರಕಾರವಿದ್ದರೂ, ಅಲ್ಲಿನ ಮತಾಂಧರು ಹೇಗೆ ದುರಹಂಕಾರಿಗಳಾಗಿದ್ದಾರೆ ಎಂಬುದನ್ನು ತೋರಿಸುತ್ತದೆ. ಅವರನ್ನು ಹದ್ದುಬಸ್ತಿನಲ್ಲಿಡಲು ಕಠಿಣ ಕಾನೂನು ಕ್ರಮ ಅಗತ್ಯ !