|
ಧಾರವಾಡ – ಕರ್ನಾಟಕ ವಿಶ್ವವಿದ್ಯಾಲಯದ 2024-25ನೇ ಶೈಕ್ಷಣಿಕ ವರ್ಷದ ‘ಬಿಎ ಪ್ರಥಮ ವರ್ಷದ’ ಮರಾಠಿ ಪಠ್ಯಕ್ರಮದ ‘ಬೆಳಗು-1’ ಪಠ್ಯಪುಸ್ತಕದಲ್ಲಿ ಭಾರತ ಮಾತೆಯ ಬಗ್ಗೆ ಅವಮಾನಕರ ಅಂಶಗಳನ್ನು ಸೇರಿಸಿರುವುದು ಸಾರ್ವಜನಿಕರಿಂದ ತೀವ್ರ ಪ್ರತಿಕ್ರಿಯೆಗಳನ್ನು ಹುಟ್ಟುಹಾಕಿದೆ.
ಈ ವಿರೋಧದ ಹಿನ್ನೆಲೆಯಲ್ಲಿ, ಕರ್ನಾಟಕ ವಿಶ್ವವಿದ್ಯಾಲಯವು ‘ಬೆಳಗು-1’ ಪುಸ್ತಕದಿಂದ ವಿವಾದಾತ್ಮಕ ಅಧ್ಯಾಯವನ್ನು ಹಿಂಪಡೆಯಲು ತಕ್ಷಣದ ನಿರ್ಧಾರವನ್ನು ತೆಗೆದುಕೊಂಡಿದೆ. (ವಿವಾದಾತ್ಮಕ ಪಾಠವನ್ನು ಹಿಂಪಡೆದರೆ ಸಾಲದು, ವಿದ್ಯಾರ್ಥಿಗಳಲ್ಲಿ ತಪ್ಪಾದ ಸಂಸ್ಕಾರಗಳನ್ನು ತುಂಬುವ ಬರಹವನ್ನು ಬರೆದ ಲೇಖಕರು ಮತ್ತು ಅದನ್ನು ಅನುಮೋದಿಸಿದ ಪಠ್ಯಕ್ರಮ ಸುಧಾರಣಾ ಸಮಿತಿಯ ವಿರುದ್ಧವೂ ಕಠಿಣ ಕ್ರಮ ಕೈಗೊಳ್ಳಬೇಕು ! – ಸಂಪಾದಕರು)
1. ‘ಬೆಳಗು-1’ ಕಾರ್ಯಕ್ರಮದ ನಾಲ್ಕನೇ ಪಾಠದಲ್ಲಿ ‘ರಾಷ್ಟ್ರೀಯತೆಯನ್ನು ಆಚರಿಸುವುದು’ ಕುರಿತು ರಾಮಲಿಂಗಪ್ಪ ಟಿ. ಬೇಗೂರ್ ಬರೆದ ಅಧ್ಯಾಯದಲ್ಲಿ ಕೆಲವು ವಿವಾದಾತ್ಮಕ ಸೂತ್ರಗಳು ಕಂಡುಬಂದಿವೆ. ಈ ಅಂಶಗಳಿಗೆ ಆಕ್ಷೇಪಣೆಗಳನ್ನು ದಾಖಲಿಸಿದ ನಂತರ, ವಿಶ್ವವಿದ್ಯಾಲಯ ಆಡಳಿತವು ಸಭೆ ಕರೆದು ವಿವಾದಾತ್ಮಕ ಪಾಠವನ್ನು ಹಿಂತೆಗೆದುಕೊಳ್ಳಲು ನಿರ್ಧರಿಸಿತು.
2. ಸಂಬಂಧಿತ ಅಧ್ಯಾಯದಲ್ಲಿ, ‘ಭಾರತ ಮಾತೆಯ ಚಿತ್ರವು ಹಿಂದೂ ಧರ್ಮ ಮಾತೆಯ ಚಿತ್ರವಾಗಿದೆ’ ಎಂದು ಹೇಳಲಾಗಿದೆ. ‘ಭಾರತ್ ಮಾತಾ ಕಿ ಜಯ’ ಎಂಬ ಘೋಷಣೆ ನಮಗೆ ಸೋಲನ್ನು ನೆನಪಿಸುತ್ತದೆ, ಎಂದು ಲೇಖಕರು ಬರೆದಿದ್ದಾರೆ.
3. ಇದು ದೇಶ ವಿರೋಧಿ ಮತ್ತು ಧರ್ಮ ವಿರೋಧಿ ವಿಷಯವನ್ನು ಮಾತ್ರವಲ್ಲದೆ, ಚಂದ್ರಯಾನ, ರಾಮ ಮಂದಿರದಂತಹ ವಿಷಯಗಳ ಕುರಿತು ಕೀಳು ಮಟ್ಟದ ಟಿಪ್ಪಣೆಗಳನ್ನು ಸಹ ಒಳಗೊಂಡಿದೆ.
4. ‘ಸೋನಿಯಾ ಗಾಂಧಿ ವಿದೇಶಿಯಾಗಿದ್ದಾರೆ; ಅದಕ್ಕಾಗಿಯೇ ಅವರನ್ನು ಪ್ರಧಾನಿಯಾಗಲು ಬಿಡಲಿಲ್ಲ,’ ‘ಮುಸ್ಲಿಮರು ಗಲಭೆ ಮಾಡಿದಾಗ ಅದನ್ನು ದೇಶದ್ರೋಹ, ಹಿಂದೂಗಳು ಗಲಭೆ ಮಾಡಿದಾಗ ಅದು ಧಾರ್ಮಿಕ ಕರ್ತವ್ಯವೆಂದು ಪರಿಗಣಿಸಲಾಗುತ್ತದೆ.’, ಎಂದು ಲೇಖನದಲ್ಲಿ ಬರೆದಿದ್ದಾರೆ.
5. ಭಾರತ ಮಾತೆಯ ಕಲ್ಪನೆಯು ಒಂದು ನಿರ್ದಿಷ್ಟ ವರ್ಗಕ್ಕೆ ಸೇರಿದ್ದು, ಅದನ್ನು ಇತರರ ಮೇಲೆ ಬಲವಂತವಾಗಿ ಅನಿವಾರ್ಯಗೊಳಿಸಲಾಗುತ್ತಿದೆ.
6. ಶ್ರೀ ರಾಮ ಜನ್ಮಭೂಮಿ-ಬಾಬರಿ ಮಸೀದಿ ವಿವಾದವನ್ನು ಕೆದಕಿ ಇತಿಹಾಸವನ್ನು ಅನ್ವೇಷಿಸುವುದು ಎಷ್ಟು ಸೂಕ್ತ? ಲೇಖಕರು ಇಂತಹ ಒಂದು ಜಟಿಲ ಪ್ರಶ್ನೆಯನ್ನು ಎತ್ತಿದ್ದಾರೆ.