
ಉಡುಪಿ – ‘ತಮ್ಮ ೭ ವಯಸ್ಸಿನಿಂದಲೇ ತಂದೆ ಯವರು ಕಲಿಸಿದ ಮಾರುತಿಯ ಉಪಾಸನೆಯಿಂದ ಸಮಾಜದ ಹಾಗೂ ಕುಟುಂಬದ ಉದ್ಧಾರಕ್ಕಾಗಿ ನಿರಂತರವಾಗಿ ಶ್ರಮಿಸಿದ ಉಡುಪಿ ಜಿಲ್ಲೆಯ ಹಿತಚಿಂತಕರಾದ ಶ್ರೀಮತಿ ಸರೋಜಿನಿ ಜಿ. ಉಪಾಧ್ಯಾಯ ಇವರು ಶೇ. ೬೩ ರಷ್ಟು ಆಧ್ಯಾತ್ಮಿಕ ಮಟ್ಟ ತಲುಪಿದ್ದಾರೆ ಎಂದು ಸನಾತನದ ಧರ್ಮಪ್ರಸಾರಕ ಸಂತ ಪೂ. ರಮಾನಂದ ಗೌಡ ಅವರ ಒಂದು ಅನೌಪಚಾರಿಕ ಸತ್ಸಂಗದಲ್ಲಿ ಘೋಷಿಸಿದರು. ಈ ಭಾವಪೂರ್ಣ ವಾತಾವರಣದಲ್ಲಿ ಶ್ರೀಮತಿ ಸರೋಜಿನಿ ಜಿ. ಉಪಾಧ್ಯಾಯ ಇವರ ಮಗ-ಸೊಸೆ, ಮೊಮ್ಮಕ್ಕಳು ಹಾಗೂ ಸನಾತನದ ಸೌ. ಮಂಜುಳಾ ಗೌಡ ಹಾಗೂ ಇತರ ಸಾಧಕರು ಉಪಸ್ಥಿತರಿದ್ದರು. ಇಳಿವಯಸ್ಸಿನಲ್ಲಿಯೂ ಸತತ ಚಟುವಟಿಕೆ, ನಿರಂತರ ಅನುಸಂಧಾನ, ಪರೋಪಕಾರದ ಗುಣ, ಕರ್ತೃತ್ವವನ್ನು ಈಶ್ವರನ ಚರಣಗಳಿಗೆ ಒಪ್ಪಿಸುವುದು, ನಿರ್ಭಯತ್ವ ಮುಂತಾದ ದೈವೀ ಗುಣಗಳು ಶ್ರೀಮತಿ ಸರೋಜಿನಿ ಜಿ. ಉಪಾಧ್ಯಾಯ ಇವರಲ್ಲಿದೆ ಎಂದು ಪೂ. ರಮಾನಂದ ಗೌಡ ಇವರು ಈ ಸಂದರ್ಭದಲ್ಲಿ ತಿಳಿಸಿದರು.
ಅನಂತರ ತಮ್ಮ ಮನೋಗತವನ್ನು ಶ್ರೀಮತಿ ಸರೋಜಿನಿ ಅವರು ವ್ಯಕ್ತಪಡಿಸಿದರು. ಆಗ ಅವರು, ಎಲ್ಲವನ್ನೂ ದೇವರಿಗೆ ಹೇಳಿಕೊಳ್ಳುವುದರಿಂದ ನನಗೆ ಯಾವುದೇ ಭಯ ಇಲ್ಲ. ಎಲ್ಲ ಸಮಯಗಳಲ್ಲಿ ಅವನೇ ಕಾಪಾಡುತ್ತಾನೆ ಎಂಬ ಶ್ರದ್ಧೆಯಿದೆ. ಇದನ್ನು ನಾನು ಜೀವನದ ಅನೇಕ ಕಠಿಣ ಪ್ರಸಂಗಗಳಲ್ಲಿ ಅವರ ಕೃಪೆಯ ಅನುಭೂತಿಯನ್ನು ಪಡೆದಿದ್ದೇನೆ ಮತ್ತು ಎಲ್ಲವನ್ನೂ ದೇವರಿಗೆ ಹೇಳಿಕೊಳ್ಳುತ್ತೇನೆ ಎಂದು ಹೇಳಿದರು. ಅವರ ಮಗನ ನಮಗೆ ನಮ್ಮ ಅಮ್ಮನವರೇ ಸ್ಫೂರ್ತಿ, ಅವರು ಹೇಳಿಕೊಟ್ಟಂತೆ ನಾವು ನಡೆದುಕೊಳ್ಳಲು ಪ್ರಯತ್ನಿಸುತ್ತಿದ್ದೇವೆ ಎಂದು ಹೇಳಿದರು.
ದೈವಿ ಯುವ ಸಾಧಕಿಯರ ಪ್ರಬುದ್ಧ ವಿಚಾರಗಳಿಗೆ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ನೀಡಿದ ಅಮೂಲ್ಯ ಮಾರ್ಗದರ್ಶನ !
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ದ ಮಾಧ್ಯಮದಿಂದ ಕಲಾವಿದರಿಗೆ ಕಲೆಯ ಕಡೆಗೆ ಸಾಧನೆ ಎಂದು ನೋಡಲು ನೀಡಿದ ಮಾರ್ಗದರ್ಶನ !
ಸಾಧಕರಲ್ಲಿ ಆಂತರಿಕ ಬದಲಾವಣೆಯನ್ನು ತರುವ ಪೂ. ರಮಾನಂದ ಗೌಡ !
‘ತಮ್ಮ ಶಾರೀರಿಕ ಸ್ಥಿತಿಯನ್ನು ಪೂರ್ಣ ಸ್ವೀಕರಿಸುವುದು’, ಭಗವತ್ಪ್ರಾಪ್ತಿಯ ಮೊದಲ ಮೆಟ್ಟಿಲಾಗಿದೆ !
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಹೆಚ್ಚಿದ ನಿದ್ರೆ, ಅಂದರೆ ದೇವರು ಅವರ ನಿರ್ವಿಚಾರ ಸ್ಥಿತಿಯನ್ನು ಹೆಚ್ಚಿಸಲು ಮಾಡಿದ ಉಪಾಯಯೋಜನೆಯಾಗಿದೆ !
ಸಾಧನೆಯಿಂದ ಸಾಧಕರಲ್ಲಿ ಚೈತನ್ಯ ಮತ್ತು ದೈವೀ ಗುಣಗಳು ಹೆಚ್ಚಳವಾಗುವುದು ಹಾಗೂ ಸಮಾಜದ ವ್ಯಕ್ತಿಗಳು ಸಾಧಕರ ಕಡೆಗೆ ಆಕರ್ಷಿತರಾಗುವುದು