
ಬಲಿಪಾಡ್ಯದಂದು ಗೋವರ್ಧನ ಪೂಜೆ ಮಾಡುವ ಪದ್ಧತಿಯಿದೆ. ಭಗವಾನ್ ಶ್ರೀ ಕೃಷ್ಣನಿಂದ ಈ ದಿನ ಇಂದ್ರ ಪೂಜೆಯ ಬದಲು ಗೋವರ್ಧನ ಪೂಜೆಯನ್ನು ಆರಂಭಿಸಲಾಯಿತು. ಅದರ ನೆನಪಿಗಾಗಿ ಈ ದಿನದಂದು ಗೋವರ್ಧನ ಪೂಜೆ ಮಾಡುತ್ತಾರೆ. ಪ್ರಾತಃಕಾಲದಲ್ಲಿ ಮನೆಯ ಪ್ರವೇಶದ್ವಾರದ ಎದುರು ಗೋಮಯದಿಂದ (ಹಸುವಿನ ಸಗಣಿ) ಗೋವರ್ಧನ ಪರ್ವತ ಮಾಡಿ ಗರಿಕೆ ಮತ್ತು ಹೂವುಗಳನ್ನು ಅರ್ಪಿಸುತ್ತಾರೆ.
ಧರ್ಮಶಾಸ್ತ್ರದಲ್ಲಿ ಮುಂದಿನಂತೆ ಹೇಳಲಾಗಿದೆ – ಈ ಗೋವರ್ಧನ ಪರ್ವತದ ಶಿಖರ ತಯಾರಿಸಬೇಕು. ವೃಕ್ಷಗಳು ರೆಂಬೆಗಳು ಮತ್ತು ಹೂವುಗಳಿಂದ ಅಲಂಕರಿಸಬೇಕು. ಅದರ ಪಕ್ಕದಲ್ಲಿ ಕೃಷ್ಣ, ಇಂದ್ರ, ಗೋವುಗಳು, ಕರುಗಳು ಇವುಗಳ ಚಿತ್ರಗಳನ್ನು ಅಲಂಕರಿಸಿ ಅವುಗಳ ಪೂಜೆ ಮಾಡುತ್ತಾರೆ ಮತ್ತು ಚಿತ್ರರಥ ಬರೆಯುತ್ತಾರೆ; ಆದರೆ ಅನೇಕ ಸ್ಥಳಗಳಲ್ಲಿ ಇದು ಮನುಷ್ಯನ ರೂಪದಲ್ಲಿ ತಯಾರಿಸುತ್ತಾರೆ ಮತ್ತು ಹೂವುಗಳಿಂದ ಅಲಂಕರಿಸುತ್ತಾರೆ. ಗಂಧ ಹೂವುಗಳಿಂದ ಅದರ ಪೂಜೆ ಮಾಡಿ ಪ್ರಾರ್ಥನೆ ಮಾಡುತ್ತಾರೆ.
ಧರ್ಮಶಾಸ್ತ್ರ ಮತ್ತು ಅಧ್ಯಾತ್ಮಶಾಸ್ತ್ರ
’ಮೈಮೇಲೆ ಹಲ್ಲಿ ಬೀಳುವುದು ಅಥವಾ ಮೈಮೇಲೆ ಓತಿಕ್ಯಾತ ಹತ್ತುವುದು’, ಇವುಗಳ ಫಲ ಮತ್ತು ಅಶುಭ ಫಲವಿದ್ದರೆ ಮಾಡಬೇಕಾದ ಉಪಾಯ !
ಪ್ರದಕ್ಷಿಣೆಯ ಶಾಸ್ತ್ರವನ್ನು ತಿಳಿದುಕೊಂಡು ಪ್ರದಕ್ಷಿಣೆಗಳನ್ನು ಹಾಕಿ ಮತ್ತು ಚೈತನ್ಯ ಪಡೆಯಿರಿ !
ಆಭರಣಗಳನ್ನು ಉಪಯೋಗಿಸುವ ಮಹತ್ವ
ಅಕ್ಷಯ ತದಿಗೆಯ ದಿನ ಪುಣ್ಯವನ್ನು ಹೇಗೆ ಪಡೆಯುವಿರಿ ?
ಅಕ್ಷಯ ತದಿಗೆಯ ಶುಭ ಮುಹೂರ್ತದ ಮಹತ್ವ !