ಕೆನಡಾ ಮತ್ತು ಭಾರತ ಇವರಲ್ಲಿನ ವಿವಾದದಲ್ಲಿ ಅಮೇರಿಕಾದ ಅಧಿಕ ಪ್ರಸಂಗಿತನ

ವಾಷಿಂಗ್ಟನ್ (ಅಮೇರಿಕಾ) – ಕೆನಡಾದಲ್ಲಿ ಹತ್ಯೆಗೀಡಾದ ಖಲಿಸ್ತಾನಿ ಭಯೋತ್ಪಾದಕ ಹರದೀಪ ಸಿಂಹ ನಿಜ್ಜರ್ ಇವನ ಹತ್ಯೆಯ ತನಿಖೆ ಮಾಡುವುದಕ್ಕಾಗಿ ಭಾರತವು ಕೆನಡಾಗೆ ಸಹಕಾರ ನೀಡಬೇಕೆಂದು ಅಮೆರಿಕ ಮತ್ತೊಮ್ಮೆ ಹೇಳಿದೆ.
ಅಮೇರಿಕಾ ಸರಕಾರದ ವಕ್ತಾರ ಮ್ಯಾಥ್ಯು ಮಿಲರ್ ಇವರು ಪತ್ರಕರ್ತರ ಸಭೆಯಲ್ಲಿ, ಭಾರತವು ಕೆನಡಾಗೆ ಸಹಕಾರ ನೀಡಬೇಕು, ಹೀಗೆ ನಮ್ಮ ಅಪೇಕ್ಷೆ ಆಗಿತ್ತು; ಆದರೆ ಕೆನಡಾದಲ್ಲಿನ ಸ್ವತಃ ರಾಯಭಾರಿ ಕಚೇರಿಯಲ್ಲಿನ ಅಧಿಕಾರಿಗಳನ್ನು ವಾಪಸ್ ಕರೆಸಿಕೊಂಡು ಭಾರತವು ಬೇರೆ ಮಾರ್ಗವನ್ನು ಹಿಡಿದಿದೆ ಎಂದು ಕಂಡು ಬರುತ್ತದೆ. ಕೆನಡಾ ಮಾಡಿರುವ ಆರೋಪ ಗಂಭೀರವಾಗಿದೆ ಮತ್ತು ಅದನ್ನು ಗಂಭೀರವಾಗಿದೆ ಪರಿಗಣಿಸಬೇಕು. ಭಾರತ ಮತ್ತು ಕೆನಡಾ ಪರಸ್ಪರ ಸಹಕಾರ ಮಾಡಬೇಕಿತ್ತು; ಆದರೆ ಈ ಮಾರ್ಗ ಅನುಸರಿಸಿರುವುದು ಕಂಡು ಬರುತ್ತಿಲ್ಲ. ಕೆನಡಾದ ಪ್ರಧಾನ ಮಂತ್ರಿ ಹಾಗೂ ಪೊಲೀಸರು ನಿಜ್ಜರ ಇವನ ಹತ್ಯೆಯ ಪ್ರಕರಣದಲ್ಲಿ ಭಾರತವು ಕೆನಡಾದಲ್ಲಿನ ಭಾರತದ ರಾಯಭಾರಿ ಕಚೇರಿಯ ೬ ಅಧಿಕಾರಿಗಳಿಗೆ ದೇಶ ತೊರೆಯುವಂತೆ ಆದೇಶ ನೀಡಿದೆ. ಅದರಿಂದ ಅಮೆರಿಕವು ಮೇಲಿನ ಹೇಳಿಕೆ ನೀಡಿದೆ.
ಸಂಪಾದಕೀಯ ನಿಲುವುಭಾರತವು ಏನು ಮಾಡಬೇಕು ಮತ್ತು ಏನು ಮಾಡಬಾರದು ಇದನ್ನು ಹೇಳುವ ಅಧಿಕಾರ ಅಮೆರಿಕಾಗೆ ಯಾರು ನೀಡಿದ್ದಾರೆ ? ‘ಭಾರತ ಎಂದರೆ ಮಧ್ಯಪೂರ್ವದಲ್ಲಿನ ಇಸ್ಲಾಮಿ ರಾಷ್ಟ್ರ’, ಎಂದು ಅಮೇರಿಕಾಗೆ ಅನಿಸುತ್ತಿದೆಯೇ ? ಅಮೇರಿಕ ಜಗತ್ತಿನಾದ್ಯಂತ ಏನೆಲ್ಲಾ ಕೃತ್ಯ ಮಾಡುತ್ತಿರುತ್ತದೆ, ಅದರ ಬಗ್ಗೆ ಭಾರತವು ಮಾತನಾಡಲು ಆರಂಭಿಸಿದರೆ ಅಮೆರಿಕಾ ಒಪ್ಪುವುದೇ ? |
ಬಾಂಗ್ಲಾದೇಶದಲ್ಲಿ ಕಳೆದ ೫ ತಿಂಗಳಲ್ಲಿ ಹಿಂದೂಗಳ ವಿರುದ್ಧ ೬೪೫ ಅಪರಾಧಗಳು!
೧೦ ಸಾವಿರದಿಂದ ೧ ಲಕ್ಷ ಜನರು ಸಾವನ್ನಪ್ಪಿರುವ ಸಾಧ್ಯತೆ : Venezuela Earthquake
ಪಾಕಿಸ್ತಾನದ ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ಹತ್ಯೆಗೆ ‘ಮೊಸಾದ್’ ಸಂಚು ರೂಪಿಸಿತ್ತು!
ರಸ್ತೆಯಲ್ಲಿ ನಮಾಜ್ ಮತ್ತು ಅಜಾನ್ ನಿಷೇಧಿಸುವ ಚಿಂತನೆಯಲ್ಲಿ ಡೆನ್ಮಾರ್ಕ್ ಸರಕಾರ!
ಪಾಕಿಸ್ತಾನವನ್ನು ಶ್ಲಾಘಿಸಿದ ಅಮೆರಿಕದ ಉಪಾಧ್ಯಕ್ಷರ ವಿರುದ್ಧ ಅವರದ್ದೇ ಪಕ್ಷದ ಸಂಸದರು ಆಕ್ರೋಶ!
ಹುಡುಗಿಯ ಮೃತದೇಹವು ಕೆರೆಯಲ್ಲಿ ತೇಲುತ್ತಿದ್ದ ಸ್ಥಿತಿಯಲ್ಲಿ ಪತ್ತೆ!