ಬಾಂಗ್ಲಾದೇಶದಲ್ಲಿ ಪೈಗಂಬರ್ ನನ್ನು ತಥಾ ಕಥಿತ ಅವಮಾನ ಮಾಡಿದ ಹಿಂದೂ ಯುವಕನ ಬಂಧನ

ಮುಸಲ್ಮಾನರ ಗುಂಪಿನಿಂದ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿ ಹಿಂದೂ ಯುವಕನನ್ನು ವಶಕ್ಕೆ ನೀಡುಲು ಆಗ್ರಹ !

ಚಿತಗಾವ (ಬಾಂಗ್ಲಾದೇಶ) – ಮಹಮ್ಮದ್ ಪೈಗಂಬರನ ಕುರಿತು ಫೇಸ್ಬುಕ್ ನಲ್ಲಿ ತಥಾ ಕಥಿತ ಅವಮಾನ ಮಾಡಿರುವುದರಿಂದ ಇಲ್ಲಿಯ ಪಟಿಯ ಪೊಲೀಸರು ೨೨ ವರ್ಷದ ಪಾರ್ಥ ಬಿಸ್ವಾಸ್ ನನ್ನು ವಶಕ್ಕೆ ಪಡೆದಿದ್ದರು. ಮತಾಂಧ ಮುಸಲ್ಮಾನರು ಪೊಲೀಸ ಠಾಣೆಗೆ ಮುತ್ತಿಗೆ ಹಾಕಿ ಪ್ರಾರ್ಥನನ್ನು ತಮ್ಮ ವಶಕ್ಕೆ ನೀಡಬೇಕೆಂದು ಆಗ್ರಹಿಸಿದರು. ಈ ಮುಸಲ್ಮಾನರಲ್ಲಿ ಸ್ಥಳೀಯ ಮದರಸಾದಲ್ಲಿನ ವಿದ್ಯಾರ್ಥಿಗಳೂ ಇದ್ದರು. ಅವರು ಆ ಸಮಯದಲ್ಲಿ ಅಲ್ಲಿಯ ಸೈನ್ಯದ ೨ ವಾಹನಗಳ ಮೇಲೆ ದಾಳಿ ನಡೆಸಿದರು. ಈ ವಾಹನದಲ್ಲಿ ಪಾರ್ಥ ಇರುವುದೆಂದು ತಿಳಿದು ಅವರು ದಾಳಿ ನಡೆಸಿದರು. ಇದರಲ್ಲಿ ಸೇನಾಧಿಕಾರಿ ಗಾಯಗೊಂಡಿದ್ದಾರೆ. ಈ ಘಟನೆಯ ನಂತರ ತಕ್ಷಣ ಯಾವುದೇ ಅನುಚಿತ ಘಟನೆ ಘಟಿಸದಂತೆ ಪೊಲೀಸ ಮತ್ತು ಸೈನ್ಯದ ತುಕಡಿ ಈ ಪರಿಸರದಲ್ಲಿ ನೇಮಿಸಲಾಯಿತು. ಈ ಘಟನೆ ಸಪ್ಟೆಂಬರ್ ೩೦ ರಂದು ನಡೆದಿದೆ. ಕೆಲವು ವಾರಗಳ ಹಿಂದೆ ಉತ್ಸವ ಮಂಡಲ ಈ ಹಿಂದೂ ಯುವಕನನ್ನು ಕೂಡ ಇದೇ ರೀತಿ ಮತಾಂದ ಮುಸಲ್ಮಾನರು ಪೊಲೀಸ ಠಾಣೆಗೆ ನುಗ್ಗಿ ಹೊಡೆದಿದ್ದರು. ಇದರಲ್ಲಿ ಉತ್ಸವ ಗಂಭೀರವಾಗಿ ಗಾಯಗೊಂಡಿದ್ದನು.

ಸಂಪಾದಕೀಯ ನಿಲುವು

ಬಾಂಗ್ಲಾದೇಶದಲ್ಲಿನ ಹಿಂದೂಗಳನ್ನು ನಾಶ ಮಾಡಲು ಅಲ್ಲಿಯ ಮುಸಲ್ಮಾನರು ಹಿಂದುಗಳ ಮೇಲೆ ಧರ್ಮನಿಂದನೆಯ ಅಪವಾದ ಹೊರಿಸಿ ಹತ್ಯೆ ಮಾಡುತ್ತಾರೆ. ಇಂತಹ ಅನೇಕ ಪ್ರಕರಣಗಳು ಘಟಿಸುತ್ತಿದ್ದರೂ ಕೇಂದ್ರ ಸರಕಾರ ಅಲ್ಲಿಯ ಹಿಂದುಗಳ ರಕ್ಷಣೆಗಾಗಿ ಮುಂದೆ ಬರುತ್ತಿಲ್ಲ ಇದು ತಿಳಿಯದ ಒಗಟಾಗಿದೆ !