|

ಸುಳ್ಯ – ಕರ್ನಾಟಕ ಭಾಜಪ ಮುಖಂಡ ಪ್ರವೀಣ್ ನೆಟ್ಟಾರು ಅವರ ಹತ್ಯೆಯ ಸಂಚನ್ನು ಬಳ್ಳಾರೆ ಮೂಲದ ಜಕೆರಿಯಾ ಜುಮಾ ಮಸೀದಿಯಲ್ಲಿ ಅಜರುದ್ದೀನ್ ಮತ್ತು ಜಮಾಲ್ ಎಂಬವರು ರಚಿಸಿದ್ದರು ಎಂಬ ಮಾಹಿತಿಯನ್ನು ಇಬ್ರಾಹಿಂ ಖಲೀಲ್ ಎಂಬ ವ್ಯಕ್ತಿ ತಮ್ಮ ಫೇಸ್ ಬುಕ್ ಮೂಲಕ ತಿಳಿಸಿದ್ದಾರೆ. ಈ ಪೋಸ್ಟ್ ನಂತರ, ಅಜರುದ್ದೀನ್ ಮತ್ತು ಜಮಾಲ್ ಅವರು ಪೊಲೀಸ್ ಠಾಣೆಯಲ್ಲಿ ಖಲೀಲ್ ವಿರುದ್ಧ ದೂರು ದಾಖಲಿಸಿದ್ದಾರೆ. ಪೊಲೀಸರು ಈ ಆರೋಪದ ಕುರಿತು ತನಿಖೆ ನಡೆಸುತ್ತಿದ್ದಾರೆ. ಪ್ರವೀಣ್ ನೆಟ್ಟಾರು ಅವರನ್ನು 2022ರಲ್ಲಿ ಹತ್ಯೆ ಮಾಡಲಾಗಿತ್ತು.
ಇಬ್ರಾಹಿಂ ಖಲೀಲ್ ಅವರು ತಮ್ಮ ಫೇಸ್ಬುಕ್ ಪೋಸ್ಟ್ನಲ್ಲಿ ಪ್ರವೀಣ್ ನೆಟ್ಟಾರು ಅವರನ್ನು ಕೊಲ್ಲಲು ಜಮಾಲ್ ಬೆಳ್ಳಾರೆ ಮತ್ತು ಅಜರುದ್ದೀನ್ ಬೆಳ್ಳಾರೆ ಎಂಬವರು ಮೊದಲು ಬಳ್ಳಾರೆಯ ಜಕೆರಿಯಾ ಮಸೀದಿಯಲ್ಲಿ ಸಂಭಾಷಣೆ ಪ್ರಾರಂಭಿಸಿದ್ದರು. ನಾನು ಇದನ್ನು ಎಲ್ಲಿ ಬೇಕಾದರೂ ಹೇಳಲು ಸಿದ್ಧನಾಗಿದ್ದೇನೆ ಎಂದು ಬರೆದಿದ್ದಾರೆ. ನನ್ನನ್ನು ಟಿವಿ 9 ಮಾಧ್ಯಮದ ಮಂಗಳೂರಿನ ಪತ್ರಕರ್ತರು ಸಂಪರ್ಕಿಸಿದ್ದರು. ಅವರಿಗೆ ನಾನು ನಡೆದ ಸತ್ಯ ಘಟನೆಯನ್ನು ಹೇಳುತ್ತೇನೆ. ಸತ್ಯವನ್ನು ಹೇಳಲು ಹೆದರುವ ಆವಶ್ಯಕತೆಯಿಲ್ಲ. ಇವರಿಬ್ಬರು ಮತ್ತು ಮಸೀದಿಯ ಅಧ್ಯಕ್ಷ ಮಂಗಲಾ ಉರ್ಫ ಇಲಾ ಸುಮಂಗಲಾವಾ ಅಥವಾ ಇನ್ನಿತರೆ ಯಾರೇ ಇರಲಿ, ನಾನು ನ್ಯಾಯಾಲಯಕ್ಕೆ ಹೋಗಿ ಸಾಯುತ್ತೇನೆ. ಬಳ್ಳಾರೆಯ ಕೇಂದ್ರ ಮಸೀದಿಯಲ್ಲಿ ಭಯೋತ್ಪಾದಕತೆಯ ಕೃತ್ಯ ನಡೆಯುತ್ತಿದೆ. ಇದನ್ನು ನಾವು ಬೆಂಬಲಿಸಬಾರದು.
ಈ ಹೇಳಿಕೆ ಬಳಿಕ ಬಳ್ಳಾರೆ ಜಮಾತ್ ಇಬ್ರಾಹಿಂ ಖಲೀಲ್ ವಿರುದ್ಧ ದೂರು ದಾಖಲಿಸಿದೆ. ಹಾಗೆಯೇ ಇಬ್ರಾಹಿಂ ಖಲೀಲ್ ಕೂಡ `ನನಗೆ 2018ರಿಂದ ಅಜರುದ್ದೀನ್ ಮತ್ತು ಜಮಾಲ್ ನಿಂದ ಬೆದರಿಕೆಗಳು ಬರುತ್ತಿವೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.
ಸಂಪಾದಕೀಯ ನಿಲುವುಹಿಂದೂ ನಾಯಕರ ಹತ್ಯೆಯ ಸಂಚು ಮಸೀದಿಯಲ್ಲಿ ರಚಿಸಲಾಗುತ್ತದೆ ಎಂಬುದು ಇದರಿಂದ ಮತ್ತೊಮ್ಮೆ ಸ್ಪಷ್ಟವಾಗುತ್ತದೆ. ರಾಜ್ಯ ಕಾಂಗ್ರೆಸ್ ಸರಕಾರವು ಈ ಪ್ರಕರಣದ ತನಿಖೆ ನಡೆಸಿ ಜಿಹಾದಿಗಳ ವಿರುದ್ಧ ಕ್ರಮ ಕೈಕೊಳ್ಳುವುದು ಎಂಬ ನಿರೀಕ್ಷೆಯನ್ನಿಟ್ಟುಕೊಳ್ಳಲು ಸಾಧ್ಯವಿಲ್ಲ. ಹಾಗಾಗಿ ಕೇಂದ್ರ ಸರಕಾರ ಹಸ್ತಕ್ಷೇಪ ಮಾಡುವುದು ಆವಶ್ಯಕವಾಗಿದೆ. |
ಮಹಿಳಾ ಸದಸ್ಯರ ಸಮಿತಿಯ ಮೂಲಕ ಲೈಂಗಿಕ ಶೋಷಣೆ ವಿರೋಧಿ ಕಾಯ್ದೆಗಳ ಮರುಪರಿಶೀಲನೆ ನಡೆಸಬೇಕು!
ಯುರೋಪಿಯನ್ ದೇಶಗಳಂತೆ ಭಾರತದ ಮಕ್ಕಳಲ್ಲೂ ಸ್ಥೂಲಕಾಯದ ಅಪಾಯ ಹೆಚ್ಚುತ್ತಿದೆ!
ದೇವಸ್ಥಾನದ ಹಣವನ್ನು ಧಾರ್ಮಿಕ ಕಾರ್ಯಗಳಿಗಾಗಿಯೇ ಖರ್ಚು ಮಾಡುವ ತಮಿಳುನಾಡು ಸರಕಾರದ ನೀತಿಯನ್ನು ಟೀಕಿಸಿದ ಹಿಂದೂದ್ವೇಷಿ ಉದಯನಿಧಿ ಸ್ಟಾಲಿನ್
ಮುಂಬಯಿ ಲೋಕಲ್ ರೈಲಿನಲ್ಲಿ ಕ್ಷುಲ್ಲಕ ಕಾರಣಕ್ಕೆ ಪ್ರಯಾಣಿಕನ ಹತ್ಯೆ; ಆರೋಪಿ ಬಂಧನ
ಮಹಾರಾಷ್ಟ್ರ : ಅಕೋಲಾ ಮಹಾನಗರ ಪಾಲಿಕೆಯ ಸ್ಥಾಯಿ ಸಮಿತಿ ಸಭಾಂಗಣಕ್ಕೆ ನೀಡಲಾದ ‘ಟಿಪ್ಪು ಸುಲ್ತಾನ್’ ಹೆಸರು ಅಕ್ರಮ!
ಮಹಾರಾಷ್ಟ್ರ : ದೇವಸ್ಥಾನ ಭೂಮಿಗೆ ಸಂಬಂಧಿಸಿದಂತೆ ಸರಕಾರಿ ದೇವಸ್ಥಾನ ಸಮಿತಿಯ ಮೊದಲ ಸಭೆ ಮುಕ್ತಾಯ!