ಬಾಂಗ್ಲಾದೇಶದಲ್ಲಿ ಶ್ರೀ ದುರ್ಗಾದೇವಿಯ ವಿಗ್ರಹ ಧ್ವಂಸ !

ಢಾಕಾ (ಬಾಂಗ್ಲಾದೇಶ) – ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ದಾಳಿ ಮುಂದುವರಿದಿದೆ. ಶೀಘ್ರದಲ್ಲೇ ನವರಾತ್ರಿ ಉತ್ಸವ ಪ್ರಾರಂಭವಾಗಲಿರುವುದರಿಂದ, ಬಾಂಗ್ಲಾದೇಶದಲ್ಲಿ ಹಿಂದೂಗಳು ಶ್ರೀ ದುರ್ಗಾದೇವಿಯ ಪೂಜೆಯ ಸಿದ್ದತೆಯನ್ನು ಮಾಡುತ್ತಿದ್ದಾರೆ. ಶ್ರೀ ದುರ್ಗಾದೇವಿಯ ವಿಗ್ರಹಗಳನ್ನು ತಯಾರಿಸಲಾಗುತ್ತಿದೆ.

ಅಂತಹ ಒಂದು ಸ್ಥಳದಲ್ಲಿ ಶ್ರೀ ದುರ್ಗಾದೇವಿಯ ವಿಗ್ರಹವನ್ನು ನಿರ್ಮಿಸುತ್ತಿರುವಾಗ ಅದನ್ನು ವಿರೂಪಗೊಳಿಸಲಾಗಿದೆ. ಬೋರ್ಗುನಾ ಜಿಲ್ಲೆಯಲ್ಲಿ ಅಪರಿಚಿತ ವ್ಯಕ್ತಿಗಳು ನವರಾತ್ರಿಯ ಸಮಯದಲ್ಲಿ ಪ್ರತಿಷ್ಠಾಪಿಸಲು ನಿರ್ಮಿಸುತ್ತಿದ್ದ ಶ್ರೀ ದುರ್ಗಾದೇವಿ ಮತ್ತು ಇತರ ದೇವತೆಗಳ ವಿಗ್ರಹಗಳನ್ನು ಧ್ವಂಸಗೊಳಿಸಿದ್ದಾರೆ.

ಈ ಚಿತ್ರ ಪ್ರಕಟಿಸುವುದರ ಹಿಂದೆ ಯಾರ ಧಾರ್ಮಿಕ ಭಾವನೆಗಳಿಗೆ ನೋವನ್ನುಂಟು ಮಾಡುವುದಾಗಿರದೇ ನೈಜ ಸ್ಥಿತಿ ತಿಳಿಸುವುದಾಗಿದೆ ! – ಸಂಪಾದಕರು

 

ಸಂಪಾದಕೀಯ ನಿಲುವು

ಬರುವ ಕೆಲವೇ ವರ್ಷಗಳಲ್ಲಿ ಬಾಂಗ್ಲಾದೇಶದಲ್ಲಿ ಹಿಂದೂಗಳು ನಿರ್ನಾಮವಾಗುತ್ತಾರೆ ಅಥವಾ ಅವರಿಗೆ ದೇಶ ಬಿಟ್ಟು ಓಡಿ ಹೋಗಬೇಕಾಗುವುದು, ಎಂದು ಹೇಳಲು ಜ್ಯೋತಿಷ್ಯದ ಅವಶ್ಯಕತೆ ಇಲ್ಲ, ಇದೇ ಈಗಿನ ಘಟನೆಯನ್ನು ತೋರಿಸುತ್ತಿದೆ !