ಜಹಾಜಪುರ (ರಾಜಸ್ಥಾನ) ಇಲ್ಲಿ ಅಪರಿಚಿತ ವ್ಯಕ್ತಿಗಳಿಂದ ನವಗ್ರಹ ಶನಿ ದೇವಸ್ಥಾನದ ಮೂರ್ತಿಗಳ ಧ್ವಂಸ

ಜಹಾಜಪುರ (ರಾಜಸ್ಥಾನ) – ಇಲ್ಲಿ ಗಣೇಶೋತ್ಸವದ ಮೆರವಣಿಗೆ ಸಮಯದಲ್ಲಿ ನಡೆದ ಕಲ್ಲು ತೂರಾಟದ ನಂತರ, ಇಲ್ಲಿನ ನವಗ್ರಹ ಶನಿ ದೇವಸ್ಥಾನದಲ್ಲಿನ ಮೂರ್ತಿಯನ್ನು ಧ್ವಂಸಗೊಳಿಸಿದ ಘಟನೆ ನಡೆದಿದೆ. ನವಗ್ರಹ ಶನಿ ದೇವಸ್ಥಾನದ ಮೂರ್ತಿ ಧ್ವಂಸಗೊಂಡಿದ್ದರಿಂದ ಪ್ರದೇಶದಲ್ಲಿ ಉದ್ವಿಗ್ನತೆಯ ವಾತಾವರಣ ನಿರ್ಮಾಣವಾಗಿದೆ. ಕೊಟಡಿ ಜಹಾಜಪುರ ರಸ್ತೆಯಲ್ಲಿರುವ ಈ ದೇವಸ್ಥಾನದಲ್ಲಿನ 6 ಮೂರ್ತಿಗಳನ್ನು ಒಡೆದು ಎಸೆದಿದ್ದಾರೆ.

ಮೇಲೆ ಪ್ರಕಟಿಸಿದ ಚಿತ್ರ ಯಾರ ಧಾರ್ಮಿಕ ಭಾವನೆಗಳಿಗೆ ನೋವನ್ನು ತರುವುದಾಗಿರದೇ ನೈಜ ಸ್ಥಿತಿ ತೀಳಿಸುವುದಾಗಿದೆ – ಸಂಪಾದಕರು

ಶಿವನ ಮಂದಿರದಲ್ಲಿ ಮಾಂಸದ ತುಂಡು ಪತ್ತೆ

ಶಿವನ ಮಂದಿರದಲ್ಲಿ ಮಾಂಸದ ತುಂಡು ಪತ್ತೆಯಾಗಿರುವ ಮಾಹಿತಿ ಸಿಗುತ್ತಲೇ ಬೃಹತ್ ಸಂಖ್ಯೆಯಲ್ಲಿ ಹಿಂದೂಗಳು ಜಮಾಯಿಸಿದ್ದರು. ಇದಾದ ಬಳಿಕ ಪೊಲೀಸರು ಘಟನಾ ಸ್ಥಳಕ್ಕೆ ಆಗಮಿಸಿ ಜನರಿಗೆ ಶಾಂತವಾಗಿರುವಂತೆ ಮನವಿ ಮಾಡಿದರು. ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಸಂಪಾದಕೀಯ ನಿಲುವು

ರಾಜಸ್ಥಾನದಲ್ಲಿ ಭಾಜಪ ಸರಕಾರವಿರುವಾಗ ಇಂತಹ ಘಟನೆಗಳು ನಡೆಯಬಾರದು ಎಂದು ಹಿಂದೂಗಳಿಗೆ ಅನಿಸುತ್ತದೆ !