ಜಮ್ಮು-ಕಾಶ್ಮೀರ ವಿಧಾನಸಭೆ ಚುನಾವಣೆ ಮೇಲೆ ಭಯೋತ್ಪಾದಕರ ಕರಿನೆರಳು

ಶ್ರೀನಗರ – ಶ್ರೀನಗರ ವಿಧಾನಸಭಾ ಚುನಾವಣೆ ಮೇಲೆ ಉಗ್ರರ ದಾಳಿಯ ಕರಿನೆರಳು ಎದುರಾಗಿದೆ. ಆದ್ದರಿಂದ ಕೇಂದ್ರ ಸರಕಾರವು ಈ ಪ್ರದೇಶಕ್ಕೆ ಹೆಚ್ಚುವರಿ ಸೈನಿಕರ ತುಕಡಿಗಳನ್ನು ಕಳುಹಿಸಿದೆ. ಜಮ್ಮು- ಕಾಶ್ಮೀರದಲ್ಲಿ, ಅನೇಕ ಸ್ಥಳಗಳಲ್ಲಿ ಸೇನೆಯು ಭಯೋತ್ಪಾದಕರ ವಿರುದ್ಧ ಚಕಮಕಿ ನಡೆಸುತ್ತಿದೆ ಹಾಗೂ ಭಯೋತ್ಪಾದಕರ ಪತ್ತೆಗೆ ಕಾರ್ಯಾಚರಣೆ ನಡೆಯುತ್ತಿದೆ. ಡೊಡಾ ಮತ್ತು ಕಿಶ್ತವಾಡ ನಂತಹ ಸೂಕ್ಷ್ಮ ಪ್ರದೇಶಗಳಲ್ಲಿ 5 ರಿಂದ 6 ಸಾವಿರ ಹೆಚ್ಚುವರಿ ಸೈನಿಕರನ್ನು ನಿಯೋಜಿಸಲಾಗಿದೆ.

ಸಂಪಾದಕೀಯ ನಿಲುವು

ಪಾಕಿಸ್ತಾನವನ್ನು ನಿರ್ಮೂಲನೆ ಮಾಡಿದರೆ ಈ ಸಮಸ್ಯೆ ಎಂದಿಗೂ ಉದ್ಭವಿಸುವುದಿಲ್ಲ, ಇದನ್ನು ಭಾರತ ಸರಕಾರ ಅರಿತುಕೊಳ್ಳುತ್ತದೆಯೇ ?