ಜಿಎಸ್ಟಿ ಸಭೆಯಲ್ಲಿ ಘೋಷಣೆ

ನವದೆಹಲಿ – ಇನ್ನು ಮುಂದೆ ಕ್ಯಾನ್ಸರ್ ರೋಗದ ಔಷಧಿಗಳ ಮೇಲೆ ಶೇಕಡಾ ೧೨% ಬದಲು ಶೇಖಡಾ ೫% ರಷ್ಟು ಜಿಎಸ್ಟಿ ವಿಧಿಸಲಾಗುವುದು. ಗ್ರಾಹಕರಿಗೆ ಈಗ ಕಡಿಮೆ ಬೆಲೆಯಲ್ಲಿ ಈ ಔಷಧಿಗಳು ಲಭ್ಯವಾಗಲಿವೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಅಧ್ಯಕ್ಷತೆಯಲ್ಲಿ ಸಪ್ಟೆಂಬರ್ ೯ರಂದು ವಸ್ತು ಮತ್ತು ಸೇವಾ ತೆರಿಗೆಯ(ಜಿಎಸ್ಟಿ) ಪರಿಷತ್ತಿನ ೫೪ನೇ ಸಭೆ ನಡೆಯಿತು. ಈ ಸಭೆಯಲ್ಲಿ ಈ ಮಹತ್ವದ ನಿರ್ಣಯವನ್ನು ತೆಗೆದುಕೊಳ್ಳಲಾಗಿದೆ.
ಧಾರ್ಮಿಕ ಯಾತ್ರೆ ಮಾಡುವವರಿಗೆ ನಿರಾಳ
ಈ ಸಭೆಯಲ್ಲಿ ಧಾರ್ಮಿಕ ಯಾತ್ರೆ ಮಾಡುವವರೆಗೂ ಕೂಡ ಆಶ್ವಾಸನೆ ನೀಡಲಾಗಿದೆ. ಧಾರ್ಮಿಕ ಯಾತ್ರೆಗಳಿಗಾಗಿ ಹೆಲಿಕಾಪ್ಟರ್ ಸೇವೆ ಉಪಯೋಗಿಸಿದರೆ ಈಗ ಶೇಕಡಾ ೧೮%ರ ಬದಲು ಶೇಕಡಾ ೫% ರಷ್ಟು ಜಿಎಸ್ಟಿ ನೀಡಬೇಕಾಗುವುದು. ಉತ್ತರಾಖಂಡದ ಹಣಕಾಸು ಸಚಿವ ಪ್ರೇಮಚಂದ ಅಗ್ರವಾಲ್ ಅವರು ಮಾಧ್ಯಮಗಳಿಗೆ ಈ ಮಾಹಿತಿ ನೀಡಿದರು. ಜಿಎಸ್ಟಿ ಸಭೆಯಲ್ಲಿ ನಮ್ಮ ಮನವಿಯನ್ನು ಸ್ವೀಕರಿಸಲಾಗಿದೆ. ಈ ಸೌಲಭ್ಯ ಶೇರಿಂಗ್ ಹೆಲಿಕಾಪ್ಟರ್ ಸೇವೆ (ಅನೇಕ ಪ್ರವಾಸಿಗಳು ಬಳಸುವ ಹೆಲಿಕಾಪ್ಟರ್) ಪಡೆಯುವವರಿಗೆ ಮಾತ್ರ ದೊರೆಯುವುದು. ಚಾರ್ಟರ್ಡ್ ಹೆಲಿಕಾಪ್ಟರ್ ಸೇವೆಯ (ವಿಶೇಷ ಹೆಲಿಕಾಪ್ಟರ್) ಲಾಭ ಪಡೆಯುವವರಿಗೆ ಶೇಕಡಾ ೧೮% ರಷ್ಟು ಜಿಎಸ್ಟಿ ನೀಡಬೇಕಾಗುವುದು ಎಂದವರು ತಿಳಿಸಿದರು.
ಆರೋಗ್ಯ- ಜೀವ ವಿಮಾ ತೆರಿಗೆಯಲ್ಲಿ ಯಾವುದೇ ಬದಲಾವಣೆ ಇಲ್ಲ
ವಸ್ತು ಮತ್ತು ಸೇವಾ ತೆರಿಗೆ ಪರಿಷತ್ತಿನ ಸಭೆಯಲ್ಲಿ ಆರೋಗ್ಯ ವಿಮಾ ಮತ್ತು ಜೀವ ವಿಮಾ ಇವುಗಳ ಕಂತುಗಳಿಗಾಗಿ ನೀಡುವ ತೆರಿಗೆ ಕಡಿಮೆ ಮಾಡುವ ಬಗ್ಗೆ ಚರ್ಚೆ ನಡೆಯಿತು; ಆದರೆ ಆ ಬಗ್ಗೆ ಸದ್ಯ ಯಾವುದೇ ನಿರ್ಣಯ ತೆಗೆದುಕೊಳ್ಳಲು ಸಾಧ್ಯವಾಗಿಲ್ಲ. ಈ ಕುರಿತು ಹೆಚ್ಚಿನ ಅಧ್ಯಯನ ನಡೆಸುವಂತೆ ಕೇಂದ್ರ ಸಚಿವ ಸಂಪುಟಕ್ಕೆ ತಿಳಿಸಲಾಗಿದೆ. ಅಕ್ಟೋಬರ್ ೨೦೨೪ ರಂದು ನಡೆಯುವ ವಸ್ತು ಮತ್ತು ಸೇವಾ ತೆರಿಗೆಯ ಪರಿಷತ್ತಿನ ಸಭೆಯಲ್ಲಿ ಮತ್ತೊಮ್ಮೆ ಚರ್ಚೆ ನಡೆಯಲಿದೆ.
ಜಿಎಸ್ಟಿ ಪರಿಷತ್ತು ಪ್ರಸ್ತುತ ಶೈಕ್ಷಣಿಕ ಸಂಸ್ಥೆಗಳ ಸಂಶೋಧನೆಗಾಗಿ ದೊರೆಯುವ ಅನುದಾನದ ಮೇಲಿನ ತೆರಿಗೆಯ ಅಂಶಗಳನ್ನು ಕೂಡ ಫಿಟಮೆಂಟ್ ಸಮಿತಿಗೆ ಕಳುಹಿಸಿದೆ. ಸಮಿತಿಯ ವರದಿ ಬಂದ ನಂತರ ಪರಿಷತ್ತು ಈ ಕುರಿತು ನಿರ್ಣಯ ತೆಗೆದುಕೊಳ್ಳಲಿದೆ. ಆನ್ಲೈನ್ ಪೇಮೆಂಟ್ ಮೇಲೆ ಜಿಎಸ್ಟಿ ಪಾವತಿಸುವ ವಿಷಯವನ್ನು ಕೂಡ ಇದೇ ಸಮಿತಿಗೆ ಕಳುಹಿಸಲಾಗಿದೆ. ಈ ಸಮಿತಿಯಲ್ಲಿ ಕೇಂದ್ರ ಹಣಕಾಸು ಸಚಿವರ ಜೊತೆಗೆ ಎಲ್ಲ ರಾಜ್ಯಗಳ ಹಣಕಾಸು ಸಚಿವರು ಕೂಡ ಇದ್ದಾರೆ.
ಛತ್ತೀಸ್ಗಢದ ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ವಾರಸ್ದಾರಿಯ ಸಂರಕ್ಷಣೆಗಾಗಿ ರಾಜ್ಯ ಸರಕಾರದಿಂದ ಸನಾತನ ಸಂಸ್ಥೆಗೆ ಬೆಂಬಲ ! ಮುಖ್ಯಮಂತ್ರಿ ವಿಷ್ಣುದೇವ ಸಾಯ
ಕೊಲೆ ಪ್ರಕರಣ ವಿರೋಧಿಸಿದವರ ವಿರುದ್ಧದ ಕೇಸ್ಗೆ ಹೈಕೋರ್ಟ್ ತಡೆ : Karnataka HC Stays Case
‘ನ್ಯಾಯಾಲಯವನ್ನು ಇದರಲ್ಲಿ ಎಳೆಯಬೇಡಿ’, ಎಂದು ಹೇಳುತ್ತ ತಕ್ಷಣದ ವಿಚಾರಣೆಗೆ ನ್ಯಾಯಾಲಯದ ನಿರಾಕರಣೆ
ಪ್ರಧಾನಿ ಮೋದಿ ಅವರ ನಿವಾಸದ ಹೊರಗೆ ಕಾಂಗ್ರೆಸ್ ಆಂದೋಲನ : Delhi Congress Protest
ನಾವಿಕರನ್ನು ಒತ್ತೆಯಾಳಾಗಿರಿಸಿದ್ದ 44 ಸೊಮಾಲಿಯನ್ನರಿಗೆ ಜೀವಾವಧಿ
‘ಕಾಕ್ರೋಚ್ ಜನತಾ ಪಾರ್ಟಿ’ಯ ಪ್ರತಿಭಟನಾಕಾರರು ನಡೆಸಿದ ಕಲ್ಲು ತೂರಾಟದಲ್ಲಿ ಪೊಲೀಸರು ಗಾಯಗೊಂಡಿಲ್ಲವಂತೆ! : Mohammed Zubair AltNews