Threatening Pakistan Defense Expert: ‘ಘಜವಾ-ಎ-ಹಿಂದ್‌ನ ಭೀಕರ ಯುದ್ಧವು ಹಲವು ವರ್ಷಗಳವರೆಗೆ ಮುಂದುವರಿಯುತ್ತದೆಯಂತೆ !’

ಪಾಕಿಸ್ತಾನದ ರಕ್ಷಣಾ ತಜ್ಞ ಝೈದ್ ಹಮೀದ್ ಅವರ ಪ್ರಚೋದನಕಾರಿ ಹೇಳಿಕೆ

(ಗಜ್ವಾ-ಎ-ಹಿಂದ್ ಎಂದರೆ ಭಾರತದ ಇಸ್ಲಾಮೀಕರಣ)

ಪಾಕಿಸ್ತಾನದ ರಕ್ಷಣಾ ತಜ್ಞ ಝೈದ್ ಹಮೀದ್

ಇಸ್ಲಾಮಾಬಾದ್ (ಪಾಕಿಸ್ತಾನ) – ‘ಗಜವಾ-ಎ-ಹಿಂದ್’ ಅನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಿ. ಇದು ಅತ್ಯಂತ ಭಯಾನಕ ಯುದ್ಧವಾಗಿರುತ್ತದೆ. ಇದು ಹಲವು ವರ್ಷಗಳವರೆಗೆ ಮುಂದುವರಿಯುತ್ತದೆ. ಈ ಯುದ್ಧದಲ್ಲಿ ಭಾರತವು ಮುಸ್ಲಿಮರಿಗೆ ಸಿಕ್ಕರೆ, ಅದು ನಮ್ಮಲ್ಲಿಯೇ ಉಳಿಯುತ್ತದೆ ಎಂದು ಪಾಕಿಸ್ತಾನದ ತಥಾಕಥಿತ ರಕ್ಷಣಾತಜ್ಞ ಝೈದ್‌ ಹಮಿದ ಇವರು ಪ್ರಚೋದನಕಾರಿ ಹೇಳಿಕೆ ನೀಡಿದ್ದಾರೆ. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಪ್ರಖರ ಹಿಂದುತ್ವನಿಷ್ಠ ಮಧು ಪೂರ್ಣಿಮಾ ಕಿಶ್ವರ್ ಕೂಡ ಇದನ್ನು ಪ್ರಸಾರ ಮಾಡಿದ್ದಾರೆ. ಈ ವೀಡಿಯೊ ನಿಖರವಾಗಿ ಯಾವಾಗ ಎಂದು ಸ್ಪಷ್ಟವಾಗಿಲ್ಲ.

ಈ ವೀಡಿಯೊದಲ್ಲಿ, ಝೈದ್ ಹಮೀದ್,

1. ಯಾರು ‘ಬುತಪರಸ್ತ’ (ವಿಗ್ರಹಾರಾಧಕರು) ಆಗಿದ್ದವರ ಕೊನೆಯ ತಲೆಮಾರಿನವರು ಈಗ ಭಾರತದಲ್ಲಿ ಮಾತ್ರ ಉಳಿದಿದ್ದಾರೆ. ಇಡೀ ಮುಸ್ಲಿಂ ಜಗತ್ತಿನಲ್ಲಿ ನೀವು ಭಾರತದಲ್ಲಿ ಕಾಣುವ ‘ಮುಶ್ರಿಕ್’ಗಳನ್ನು (ಬಹುದೇವತಾವಾದಿಗಳು) ಬೇರೆ ಎಲ್ಲಿಯೂ ಕಾಣುವುದಿಲ್ಲ.

2. ಕಾಬಾದೊಳಗೆ ವಿಗ್ರಹಗಳನ್ನು ಇರಿಸಿದ್ದು ಇದೇ ಜಾತಿಯವರಾಗಿದ್ದಾರೆ. ಈಗ ಅದೇ ವಿಗ್ರಹ ಮತ್ತು ಅದರಂತಹ ಸಾವಿರಾರು ವಿಗ್ರಹಗಳನ್ನು ಮತ್ತು ದೇವರುಗಳನ್ನು ಭಾರತದಲ್ಲಿ ಇರಿಸಿದ್ದಾರೆ.

3. ಮತ್ತೊಮ್ಮೆ ಈ ಎಲ್ಲಾ ವಿಗ್ರಹಗಳು ಭಗ್ನಗೊಳ್ಳುತ್ತವೆ. ಮಹ್ಮದ್ ಘಝನಿಯು ಸೋಮನಾಥ ಮತ್ತು ಇತರ ದೇವಾಲಯಗಳನ್ನು ಕೆಡವಿದ ರೀತಿಯಲ್ಲಿಯೇ ಎಲ್ಲಾ ದೇವಾಲಯಗಳನ್ನು ಕೆಡವಲಾಗುತ್ತದೆ. ಈಗ ವಿಗ್ರಹಾರಾಧನೆ ಸಂಪೂರ್ಣವಾಗಿ ಕಣ್ಮರೆಯಾಗುತ್ತದೆ. ಸ್ವಾಭಾವಿಕವಾಗಿ, ಈ ಯುದ್ಧವು ಭಯಾನಕವಾಗಿರುತ್ತದೆ. ಇದು ಒಂದು ದಿನ ಆಗುವುದಿಲ್ಲ.

ಝೈದ್ ಹಮೀದ್ ಯಾರು?

ಝೈದ್ ಹಮೀದ್ ತನ್ನನ್ನು ತಾನು ಪಾಕಿಸ್ತಾನದ ವ್ಯೂಹಾತ್ಮಕ ರಕ್ಷಣಾ ತಜ್ಞ ಎಂದು ಹೇಳಿಕೊಳ್ಳುತ್ತಾನೆ. ಈತ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐಗೆ ಆಪ್ತ ಎಂದು ಪರಿಗಣಿಸಲಾಗಿದೆ. ಝೈದ್, ಸೋವಿಯತ್-ಆಫ್ಘಾನ್ ಯುದ್ಧದಲ್ಲಿ ಹೋರಾಡಿದ ಎಂದು ಹೇಳುತ್ತಾನೆ. ಆತ ಪ್ರತಿದಿನ ಭಾರತದ ವಿರುದ್ಧ ಮಾತನಾಡುತ್ತಾನೆ. ಖಲಿಸ್ತಾನ್ ಸೂತ್ರವನ್ನು ಪ್ರಚೋದಿಸುವುದು ಅಥವಾ ಹಿಂದೂಗಳನ್ನು ದುರ್ಬಲ ಎಂದು ಕರೆಯುವುದು, ಆತ ನಿರಂತರವಾಗಿ ಸಾಮಾಜಿಕ ಮಾಧ್ಯಮದಲ್ಲಿ ಈ ವಿಷಯಗಳ ಬಗ್ಗೆ ಮಾತನಾಡುತ್ತಾನೆ. ಆತ ಭಾರತದಲ್ಲಿ ವಾಸಿಸುವ ಮುಸ್ಲಿಮರನ್ನು ದಾರಿತಪ್ಪಿಸಲು ಪ್ರಯತ್ನಿಸುತ್ತಾನೆ.

ಸಂಪಾದಕೀಯ ನಿಲುವು

ಈ ಯುದ್ಧಕ್ಕೆ ಹಿಂದೂಗಳು ಮತ್ತು ಸರಕಾರ ಸಿದ್ಧವಾಗಿದೆಯೇ ?

ಪಾಕಿಸ್ತಾನ ಕೊನೆಗೊಂಡರೂ ಜಿಹಾದ್ ನಿಂತಿಲ್ಲ. ಇದಕ್ಕೆ ವಿರುದ್ಧವಾಗಿ, ಹಿಂದೂಗಳು ಸಾಯುತ್ತಿದ್ದರೂ ಅವರು ಎಚ್ಚರಗೊಳ್ಳುತ್ತಿಲ್ಲ! ಹಿಂದೂಗಳಿಗೆ ನಾಚಿಕೆಗೇಡು !