ವೈದ್ಯರನ್ನು ರಕ್ಷಿಸುವ ಕಾನೂನುಗಳಲ್ಲಿ ಸುಧಾರಣೆ ಮಾಡಿ ಅದನ್ನು ಮತ್ತಷ್ಟು ಸುದೃಢಗೊಳಿಸಬೇಕು !

ನವ ದೆಹಲಿ – ವೈದ್ಯರನ್ನು ರಕ್ಷಿಸುವ ಕಾನೂನುಗಳಲ್ಲಿ ಸುಧಾರಣೆ ಮಾಡಿ ಅದನ್ನು ಸದೃಢಗೊಳಿಸಬೇಕು. ಭಾರತೀಯ ನ್ಯಾಯ ಸಂಹಿತೆ ಹೆಚ್ಚು ಶಕ್ತಿಯುತವಾಗಬೇಕು. ಭಾರತದ್ವೇಷಿಗಳ ಪಿತೂರಿಗೆ (‘ಡೀಪ್ ಸ್ಟೇಟ್’) ಬಲಿಯಾಗಬಾರದು, ಎಂದು ‘ಇಂಡಿಯನ್ ಮೆಡಿಕಲ ಅಸೋಸಿಯೇಶನ’ ಅಧ್ಯಕ್ಷ ಆರ್.ವಿ. ಅಶೋಕನ ಇವರು ಹೇಳಿದರು. ಕೋಲಕಾತಾದಲ್ಲಿ 31 ವರ್ಷದ ಮಹಿಳಾ ವೈದ್ಯೆಯ ಸಾಮೂಹಿಕ ಅತ್ಯಾಚಾರ ಮತ್ತು ಹತ್ಯೆಯ ಬಗ್ಗೆ ಅಶೋಕನ ಇವರು ತಮ್ಮ ಭಾವನೆಗಳನ್ನು ವ್ಯಕ್ತಪಡಿಸಿದರು. ಆಗಸ್ಟ್ 9 ರಂದು ರಾತ್ರಿ, ಕೋಲಕಾತಾದ ಹೆಸರಾಂತ ಆರ್.ಜಿ. ವೈದ್ಯಕೀಯ ವಿಶ್ವವಿದ್ಯಾಲಯ ಮತ್ತು ಆಸ್ಪತ್ರೆಯಲ್ಲೇ ಈ ಘಟನೆ ನಡೆದಿತ್ತು. ಈ ಕಾರಣದಿಂದ ಅಶೋಕನ್ ಈ ಬಹಿರಂಗ ಪತ್ರ ಬರೆದಿದ್ದಾರೆ.
National president
dr R V Asokan : pic.twitter.com/3nbDVz87ZQ— Indian Medical Association (@IMAIndiaOrg) August 18, 2024
ಅಶೋಕನ ತಮ್ಮ ಮಾತನ್ನು ಮುಂದುವರಿಸುತ್ತಾ,
1. ಸಂತ್ರಸ್ತೆಯ ಸಾವಿನ ನಂತರ, 10 ಲಕ್ಷ ಮೇಣದಬತ್ತಿಗಳನ್ನು ಬೆಳಗಿಸಲಾಯಿತು. ಯುದ್ಧದ ಸಾವಿರಾರು ಡೋಲು ಬಾರಿಸಲಾಯಿತು. ಪ್ರತಿಯೊಂದು ಭಾರತೀಯ ಕುಟುಂಬವು ತನ್ನ ಮಗಳನ್ನು ಕಳೆದುಕೊಂಡಿದೆ. ತಾಯಂದಿರ ಕೋಪ ತಾರಕ್ಕಕೇರಿತು. ತಂದೆಯಂದಿರು ಮೌನವಾಗಿ ಕಣ್ಣೀರು ಸುರಿಸಿದರು.
2. ಕಿರಿಯ ಸ್ನಾತಕೋತ್ತರ ವೈದ್ಯರು (ರೆಸಿಡೆಂಟ್ ಡಾಕ್ಟರ್) ಎಲ್ಲರಿಗಿಂತ ಮೊದಲು ರಸ್ತೆಗಿಳಿದರು. ಮುಂದಿನ 7 ದಿನ ಅವರು ಮಲಗಲಿಲ್ಲ. ಅವರ ಜಾಗರೂಕತೆ ಮತ್ತು ಅಗ್ನಿಶಕ್ತಿಯೇ ರಾಷ್ಟ್ರದ ಭರವಸೆಯಾಗಿದೆ. ಅವರು ವಾರಕ್ಕೆ 100 ಗಂಟೆಗಳ ಕಾಲ ಕೆಲಸ ಮಾಡುತ್ತಾರೆ. ಅವರು ವಿರೋದಕ್ಕೆ ಬಗ್ಗಲಿಲ್ಲ.
3. ಡಾಕ್ಟರರು ಅನಾಥನಲ್ಲ. ಸ್ವಾತಂತ್ರ್ಯ ಬಂದು 77 ವರ್ಷಗಳು ಕಳೆದಿವೆ. ವೈದ್ಯರನ್ನು ರಕ್ಷಿಸುವ ಕಾನೂನು ರೂಪಿಸಬೇಕು ಎಂದು ಹೇಳಿದರು.
ಛತ್ತೀಸ್ಗಢದ ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ವಾರಸ್ದಾರಿಯ ಸಂರಕ್ಷಣೆಗಾಗಿ ರಾಜ್ಯ ಸರಕಾರದಿಂದ ಸನಾತನ ಸಂಸ್ಥೆಗೆ ಬೆಂಬಲ ! ಮುಖ್ಯಮಂತ್ರಿ ವಿಷ್ಣುದೇವ ಸಾಯ
ಕೊಲೆ ಪ್ರಕರಣ ವಿರೋಧಿಸಿದವರ ವಿರುದ್ಧದ ಕೇಸ್ಗೆ ಹೈಕೋರ್ಟ್ ತಡೆ : Karnataka HC Stays Case
‘ನ್ಯಾಯಾಲಯವನ್ನು ಇದರಲ್ಲಿ ಎಳೆಯಬೇಡಿ’, ಎಂದು ಹೇಳುತ್ತ ತಕ್ಷಣದ ವಿಚಾರಣೆಗೆ ನ್ಯಾಯಾಲಯದ ನಿರಾಕರಣೆ
ಪ್ರಧಾನಿ ಮೋದಿ ಅವರ ನಿವಾಸದ ಹೊರಗೆ ಕಾಂಗ್ರೆಸ್ ಆಂದೋಲನ : Delhi Congress Protest
ನಾವಿಕರನ್ನು ಒತ್ತೆಯಾಳಾಗಿರಿಸಿದ್ದ 44 ಸೊಮಾಲಿಯನ್ನರಿಗೆ ಜೀವಾವಧಿ
‘ಕಾಕ್ರೋಚ್ ಜನತಾ ಪಾರ್ಟಿ’ಯ ಪ್ರತಿಭಟನಾಕಾರರು ನಡೆಸಿದ ಕಲ್ಲು ತೂರಾಟದಲ್ಲಿ ಪೊಲೀಸರು ಗಾಯಗೊಂಡಿಲ್ಲವಂತೆ! : Mohammed Zubair AltNews