ಬಾಂಗ್ಲಾದೇಶದಲ್ಲಿನ ಹಿಂದುಗಳ ಮೇಲೆ ನಡೆಯುತ್ತಿರುವ ದೌರ್ಜನ್ಯ ನೋಡಿದರೆ ದೇವರಿಗೆ ಪ್ರಾರ್ಥನೆ ಮಾಡುವುದೊಂದೇ ನಮಗುಳಿದಿರುವ ದಾರಿ ! – ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮಿ, ಉಡುಪಿ

ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ಸ್ವಾಮೀಜಿ

ಉಡುಪಿ ( ಕರ್ನಾಟಕ) – ಬಾಂಗ್ಲಾದೇಶದಲ್ಲಿನ ಹಿಂದೂಗಳ ಮೇಲೆ ನಡೆಯುತ್ತಿರುವ ಅತ್ಯಾಚಾರಗಳನ್ನು ನೋಡಿ ಬಹಳ ನೋವಾಗಿದೆ. ಸಂಪೂರ್ಣ ಹಿಂದೂ ಸಮಾಜವು ಜಾಗೃತವಾಗಬೇಕು ಮತ್ತು ವಿಶ್ವ ಶಾಂತಿಗಾಗಿ ದೇವರಿಗೆ ಪ್ರಾರ್ಥನೆ ಮಾಡಬೇಕು, ಇದೇ ನಮಗೆ ಉಳಿದಿರುವ ಮಾರ್ಗವಾಗಿದೆ, ಎಂದು ಪೇಜಾವರ ಮಠದ ಸ್ವಾಮಿ ವಿಶ್ವ ಪ್ರಸನ್ನ ತೀರ್ಥರು ಒಂದು ವಿಡಿಯೋ ಮೂಲಕ ಹೇಳಿಕೆ ನೀಡಿದ್ದಾರೆ. ಸ್ವಾಮೀಜಿ ತಮ್ಮ ಮಾತನ್ನ ಮುಂದುವರಿಸಿ, ನಮ್ಮ ದೇಶದಲ್ಲಿನ ಎಲ್ಲಾ ಹಿಂದುಗಳು ಬಹಳ ಆತಂಕ ಪಡುವಂತಹ ಸಮಯ ಬಂದಿದೆ. ಇಂದು ಕೇವಲ ನೆರೆಯ ದೇಶದಲ್ಲಿ ಅಷ್ಟೇ ಅಲ್ಲದೆ, ಸ್ವದೇಶದಲ್ಲಿಯೂ ಕೂಡ ಹಿಂದುಗಳ ಮೇಲಿನ ದಾಳಿಗಳು ಹೆಚ್ಚಾಗಿವೆ. ಅದರ ವಿರುದ್ಧ ಧ್ವನಿ ಎತ್ತುವವರರ ಮೇಲೆ ಒತ್ತಡ ಹೇರಲಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಸಮಾಜದಲ್ಲಿನ ಪ್ರತಿಯೊಬ್ಬರು ಜಾಗೃತವಾಗಿರಬೇಕು. ಸರಕಾರದ ಮೇಲೆ ಅವಲಂಬಿತವಾಗಿರುವ ಪರಿಸ್ಥಿತಿ ಇಲ್ಲ. ದೇವರ ಚರಣಗಳಲ್ಲಿ ಶರಣಾಗಿ, ಸಮಾಜ, ದೇಶ ಮತ್ತು ವಿಶ್ವದಲ್ಲಿ ಶಾಂತಿ ಮತ್ತು ಸಮೃದ್ಧಿ ನೆಲೆಸಲಿ, ಎಂದು ಪ್ರಾರ್ಥನೆ ಮಾಡೋಣ ಎಂದವರು ಕರೆ ನೀಡಿದರು.

ಸಂಪಾದಕೀಯ ನಿಲುವು

ದೇವರಿಗೆ ಪ್ರಾರ್ಥನೆ ಮಾಡುವುದೂ ಕೂಡ ಒಂದು ಪರಿಣಾಮಕಾರಿ ಉಪಾಯವಾಗಿದೆ. ಇದರ ಜೊತೆಗೆ ಸಾಮಾಜಿಕ ಮಟ್ಟದಲ್ಲಿ ಹಿಂದುಗಳು ಸ್ವತದ ಜೊತೆಗೆ ದೇಶದಲ್ಲಿನ ಎಲ್ಲಾ ಹಿಂದುಗಳು ಮತ್ತು ವಿದೇಶದಲ್ಲಿನ ಹಿಂದುಗಳ ರಕ್ಷಣೆಗಾಗಿ ಕಾರ್ಯನಿರತವಾಗುವುದು ಆವಶ್ಯಕವಾಗಿದೆ.