ವಿವಿಧ ದೇಶಗಳಲ್ಲಿನ ಹಿಂದೂಗಳ ನಾಶಕ್ಕೆ ಪ್ರಯತ್ನ ನಡೆಯುತ್ತಿದೆ ! – ದತ್ತಾತ್ರೇಯ ಹೊಸಬಾಳೆ

ಆರ್‍‌ಎಸ್‌ಎಸ್‌ನ ಸಹಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಇವರ ಹೇಳಿಕೆ

ಬೆಂಗಳೂರು – ವಿವಿಧ ದೇಶಗಳಲ್ಲಿನ ಹಿಂದುಗಳನ್ನು ನಾಶ ಮಾಡುವ ಪ್ರಯತ್ನ ನಡೆಯುತ್ತಿದೆ, ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಹಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಇವರು ಹೇಳಿಕೆ ನೀಡಿದರು. ಅವರು ಇಲ್ಲಿ ಸಂಘದ ಒಂದು ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.

ಹೊಸಬಾಳೆ ಇವರು ಮಾತು ಮುಂದುವರೆಸಿ, ಜಗತ್ತಿನಲ್ಲಿನ ಅನೇಕ ಸ್ಥಳಗಳಲ್ಲಿ ಹಿಂದುಗಳ ಮಾನವ ಹಕ್ಕುಗಳ ಹನನವಾಗುತ್ತಿದೆ. ಈ ಬಗ್ಗೆ ಧ್ವನಿ ಎತ್ತಬೇಕು. ಜಗತ್ತಿನಲ್ಲಿನ ವಿವಿಧ ಪ್ರದೇಶದಲ್ಲಿ ವಾಸಿಸುವ ಹಿಂದುಗಳು ದೇಶದ ವಿಕಾಸದಲ್ಲಿ ಅವರ ಕೊಡುಗೆ ನೀಡುತ್ತಿದ್ದಾರೆ. ಅವರು ನಿಯಮಗಳನ್ನು ಪಾಲಿಸುತ್ತಾರೆ ಮತ್ತು ಶಾಂತಿಯಿಂದ ವಾಸಿಸುತ್ತಾರೆ, ಇದು ಅಭಿಮಾನದ ವಿಷಯವೇ ಆಗಿದೆ. ಈಗಲೂ ಕೂಡ ವಿವಿಧ ದೇಶದಿಂದ ಹಿಂದುಗಳನ್ನು ಮುಗಿಸುವ ಪ್ರಯತ್ನ ನಡೆಯುತ್ತಿದೆ. ಬಾಂಗ್ಲಾದೇಶದಲ್ಲಿ ಏನು ನಡೆಯುತ್ತಿದೆ ಅದನ್ನು ನಾವು ನೋಡುತ್ತಲೇ ಇದ್ದೇವೆ. ಭಾರತ ಸರಕಾರ ಹಿಂದೂಗಳ ರಕ್ಷಣೆಗಾಗಿ ಪ್ರಯತ್ನ ಮಾಡುತ್ತಿದೆ. ಬಾಂಗ್ಲಾದೇಶದಲ್ಲಿನ ಹಿಂದೂ, ಬೌದ್ಧ ಮತ್ತು ಇತರ ಧರ್ಮದ ಅಲ್ಪಸಂಖ್ಯಾತರ ರಕ್ಷಣೆ ಆಗಬೇಕು. ಹಿಂದೂಗಳು ಯಾರ ವಿರೋಧದಲ್ಲಿಯೂ ಇಲ್ಲ, ಬದಲಾಗಿ ಸ್ವಂತದ ರಕ್ಷಣೆಗಾಗಿ ಒಟ್ಟಾಗಿ ಸೇರಿದ್ದಾರೆ ಎಂದು ಹೇಳಿದರು.

ಸಂಪಾದಕೀಯ ನಿಲುವು

ಭಾರತಸಹಿತ ಜಗತ್ತಿನಾದ್ಯಂತ ಇರುವ ಹಿಂದುಗಳ ರಕ್ಷಣೆಗಾಗಿ ಹಿಂದೂ ಮತ್ತು ಅದರ ವಿವಿಧ ಸಂಘಟನೆಗಳು ಸಂಘಟಿತರಾಗಿ ಪ್ರಯತ್ನ ಮಾಡಬೇಕು ಮತ್ತು ಸರಕಾರದ ಮೇಲೆ ಕೂಡ ಇದಕ್ಕಾಗಿ ಒತ್ತಡ ಹೇರಬೇಕು !