|

ನವದೆಹಲಿ – ದೆಹಲಿಯ ಮದ್ಯ ಹಗರಣಕ್ಕೆ ಸಂಬಂಧಿತ ಹಣದ ಅವ್ಯವಹಾರದ ಪ್ರಕರಣದಲ್ಲಿ ಮಾಜಿ ಉಪಮುಖ್ಯಮಂತ್ರಿ ಮನೀಷ ಸಿಸೋದಿಯ ಇವರಿಗೆ ಸರ್ವೋಚ್ಚ ನ್ಯಾಯಾಲಯವು ಜಾಮೀನು ನೀಡಿದೆ. ಸಿಸೋದಿಯ ಇವರನ್ನು ದೀರ್ಘಕಾಲ ಜೈಲಿನಲ್ಲಿ ಇರಿಸುವುದು ಯೋಗ್ಯವಲ್ಲ. ಸ್ಟೇಷನ್ ಮತ್ತು ಉಚ್ಚ ನ್ಯಾಯಾಲಯ ಇವರು ಅರ್ಥ ಮಾಡಿಕೊಳ್ಳುವುದು ಆವಶ್ಯಕವಾಗಿದೆ. ಹಾಗೂ ಜಾಮೀನು ಇದು ನಿಯಮವಾಗಿದೆ ಮತ್ತು ಜೈಲು ಇದು ಅಪವಾದವಾಗಿದೆ, ಎಂದು ಕೂಡ ನ್ಯಾಯಾಲಯವು ಹೇಳಿದೆ. ಈ ಸಮಯದಲ್ಲಿ ನ್ಯಾಯಾಲಯವು ಅವರಿಗೆ ೧೦ ಲಕ್ಷ ರೂಪಾಯ ಬಾಂಡ್ ಜಾಮೀನು ಮಂಜೂರ ಮಾಡಿದೆ. ಇದರ ಸಂದರ್ಭದಲ್ಲಿ ಆಗಸ್ಟ್ ೯ ರಂದು ವಿಚಾರಣೆ ನಡೆಯಿತು.
ಆ ಸಮಯದಲ್ಲಿ ಈಡಿಯ ನ್ಯಾಯವಾದಿ ಸಿಸೋದಿಯ ಇವರಿಗೆ ಜಾಮೀನಿಗಾಗಿ ಸೇಶನ್ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಲು ಹೇಳಬೇಕೆಂದು ಆಗ್ರಹಿಸಿದ್ದರು. ಈ ಬೇಡಿಕೆ ಕೂಡ ನ್ಯಾಯಾಲಯವು ತಳ್ಳಿ ಹಾಕಿದೆ. ‘ಸಿಸೋದಿಯ ಇವರ ಜಾಮೀನಿಗಾಗಿ ಸೆಷನ್ ನ್ಯಾಯಾಲಯಕ್ಕೆ ಕಳುಹಿಸಿ, ಇದು ನ್ಯಾಯದ ಅವಮಾನದಂತೆ ಆಗುವುದು, ಎಂದು ನ್ಯಾಯಾಲಯವು ಹೇಳಿದೆ. ಇಂತಹದರಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಇವರು ಕೂಡ ಮೂರು ತಿಂಗಳಿಂದ ಜೈಲುವಾಸದಲ್ಲಿದ್ದಾರೆ. ಆಗಸ್ಟ್ ೨೦ ವರೆಗೆ ಅವರಿಗೆ ನ್ಯಾಯಾಂಗ ಕಸ್ಟಡಿಗೆ ನೀಡಲಾಗಿದೆ.
ಏನಿದು ಮದ್ಯ ನೀತಿ ಹಗರಣ ?
ದೇಹಲಿಯ ಆಮ ಆದ್ಮಿ ಪಕ್ಷದ ಸರಕಾರವು ಹೊಸ ಉತ್ಪಾದನೆ ಶುಲ್ಕ ನೀತಿ ಜಾರಿಗೊಳಿಸಿದ್ದರು ಈ ನೀತಿಯಿಂದಾಗಿ ಕೋಟ್ಯಾಂತರ ರೂಪಾಯಿಯ ವ್ಯವಹಾರ ನಡೆಯುವುದು ಮತ್ತು ಮದ್ಯ ಮಾಫಿಯಾದ ಮೇಲೆ ಅಂಕುಶ ಇಡಲಾಗುವುದು, ಎಂದು ಮುಖ್ಯಮಂತ್ರಿ ಕೇಜ್ರಿವಾಲ್ ಇವರು ವಿಶ್ವಾಸ ವ್ಯಕ್ತಪಡಿಸಿದ್ದರು. ಇದರಿಂದ ಎಲ್ಲಾ ಸರಕಾರಿ ಮತ್ತು ಖಾಸಗಿ ಸಾರಾಯಿ ಅಂಗಡಿಗಳು ಮುಚ್ಚಿ ಹೊಸ ಟೆಂಡರ್ ನೀಡಲಾಗಿದ್ದವು. ಈ ಹಿಂದೆ ರಾಜ್ಯದಲ್ಲಿ ೭೨೦ ಸಾರಾಯಿ ಅಂಗಡಿಗಳು ಇದ್ದವು. ಇದರಲ್ಲಿ ಕೇವಲ ೨೬೦ ಖಾಸಗಿ ಅಂಗಡಿಗಳು ಇದ್ದವು. ಹೊಸ ನೀತಿಯ ನಂತರ ಎಲ್ಲಾ ಅಂಗಡಿಗಳು ಖಾಸಗಿ ಉದ್ಯೋಗ ಪತಿಗಳ ವಶಕ್ಕೆ ಹೋದವು. ಆದ್ದರಿಂದ ಈ ನೀತಿ ಜಾರಿಗೊಳಿಸುವಾಗ ಭ್ರಷ್ಟಾಚಾರ ನಡೆಸಲಾಗಿದೆ ಎಂದು ಆರೋಪ ಕೇಳಿ ಬಂದಿತು. ಅದರ ನಂತರ ನಡೆದಿರುವ ತನಿಖೆಯಲ್ಲಿ ಉಪಮುಖ್ಯಮಂತ್ರಿ ಸಿಸೋದಿಯ, ಇತರ ಕೆಲವು ನಾಯಕರು ಹಾಗೂ ಮುಖ್ಯಮಂತ್ರಿ ಕೇಜ್ರಿವಾಲ್ ಇವರು ಈ ಹಗರಣದಲ್ಲಿ ತೊಡಗಿರುವುದು ತಿಳಿದ ನಂತರ ಅವರನ್ನು ಬಂಧಿಸಲಾಯಿತು.
ಪ್ರಧಾನಿ ಮೋದಿ ಅವರ ನಿವಾಸದ ಹೊರಗೆ ಕಾಂಗ್ರೆಸ್ ಆಂದೋಲನ : Delhi Congress Protest
ನೌಕೆಯನ್ನು ವಶಕ್ಕೆ ತೆಗೆದುಕೊಂಡು ನಾವಿಕರನ್ನು ಒತ್ತೆಯಾಳಾಗಿರಿಸಿದ್ದ ಸೊಮಾಲಿಯಾದ 44 ನಾಗರಿಕರಿಗೆ ಜೀವಾವಧಿ ಶಿಕ್ಷೆ! : Somalians Get Life Imprisonment
‘ಕಾಕ್ರೋಚ್ ಜನತಾ ಪಾರ್ಟಿ’ಯ ಪ್ರತಿಭಟನಾಕಾರರು ನಡೆಸಿದ ಕಲ್ಲು ತೂರಾಟದಲ್ಲಿ ಪೊಲೀಸರು ಗಾಯಗೊಂಡಿಲ್ಲವಂತೆ! : Mohammed Zubair AltNews
ಬುಲ್ಡೋಜರ್ ಕ್ರಮಕ್ಕೆ ಸಂಬಂಧಿಸಿದಂತೆ ಅಲಹಾಬಾದ್ ಹೈಕೋರ್ಟ್ನ ವಿಭಜಿತ ತೀರ್ಪು! : Allahabad HC
ಬೀದಿ ನಾಯಿಯ ದಾಳಿಯಿಂದ ಗಾಯಗೊಂಡ ಬಾಲಕಿಗೆ ೧ ಲಕ್ಷ ರೂಪಾಯಿ ಪರಿಹಾರ ನೀಡಲು ಆದೇಶ
ಅಂದಿನ ಸಮಾಜವಾದಿ ಮತ್ತು ಕಾಂಗ್ರೆಸ್ ಸರಕಾರಗಳು ಗೋರಿಗಳ ಗೋಡೆಗಳ ಮೇಲೆ ಹಣ ವ್ಯಯ ಮಾಡುವುದನ್ನೇ ‘ಜಾತ್ಯತೀತತೆ’ ಎಂದು ಭಾವಿಸಿದ್ದವು!