ಶಿರಾಡಿ ಘಾಟ್ ನಲ್ಲಿ ಮತ್ತೆ ಪುನಃ ಭೂಕುಸಿತ; ಮಂಗಳೂರು-ಬೆಂಗಳೂರು ಪ್ರಯಾಣಕ್ಕೆ ಅಡ್ಡಿ

ಮಂಗಳೂರು – ಬೆಂಗಳೂರು-ಮಂಗಳೂರಿನ ನಡುವೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ 75ರ ಶಿರಾಡಿ ಘಾಟ್‌ನಲ್ಲಿ ಪುನಃ ಭೂಕುಸಿತ ಸಂಭವಿಸಿದೆದೆ. ಕೇವಲ 2 ವಾರಗಳಲ್ಲಿ ಈ ಘಾಟ್ ನಲ್ಲಿ 2ನೇ ಬಾರಿಗೆ ಸಂಚಾರ ಸ್ಥಗಿತಗೊಳಿಸಲಾಗಿದೆ. ಸದ್ಯ ಸಂಪಾಜೆ ಘಾಟ್ ರಸ್ತೆಯಿಂದ ಮಾತ್ರ ಮಂಗಳೂರನ್ನು ತಲುಪುವ ರಸ್ತೆಯಾಗಿದೆ. ಶಿರಾಡಿ ಘಾಟಿಯ ಮೇಲ್ಬಾಗದಲ್ಲಿ ದೊಡ್ಡ ಪ್ರಮಾಣದಲ್ಲಿ ಭೂ ಕುಸಿತವಾಗಿದೆ. ಭೂಕುಸಿತದಿಂದ ಲಾರಿ ಬಿದ್ದಿದ್ದು ಲಾರಿಯ ಸಮೀಪ ಎರಡು ಕಾರುಗಳು ಮತ್ತು ಟ್ಯಾಂಕರ್ ಸಿಲುಕಿವೆ. ರಾಷ್ಟ್ರೀಯ ಹೆದ್ದಾರಿ 75ರಲ್ಲಿ ರಕ್ಷಣಾ ಕಾರ್ಯಚರಣೆ ಚುರುಕುಗೊಳಿಸಲಾಗಿದೆ.