Terrorist Attack: ಕಾಶ್ಮೀರದ ಕುಪ್ವಾರದಲ್ಲಿ ಭಯೋತ್ಪಾದಕ ದಾಳಿಯಲ್ಲಿ ಓರ್ವಯೋಧ ಹುತಾತ್ಮ: ಮೇಜರ್ ಸೇರಿದಂತೆ 4 ಯೋಧರಿಗೆ ಗಾಯ!

ಒಬ್ಬ ಭಯೋತ್ಪಾದಕನ ಹತ್ಯೆ

ಶ್ರೀನಗರ – ಜಮ್ಮು-ಕಾಶ್ಮೀರದ ಕುಪ್ವಾರದಲ್ಲಿ ಜುಲೈ 27 ರ ಬೆಳಗ್ಗೆ ಭದ್ರತಾ ಪಡೆಗಳು ಮತ್ತು ಭಯೋತ್ಪಾದಕರ ನಡುವಿನ ಗುಂಡಿನ ಚಕಮಕಿಯಲ್ಲಿ ಓರ್ವ ಯೋಧ ವೀರ ಮರಣ ಹೊಂದಿದರು. ಈ ದಾಳಿಯಲ್ಲಿ ಮೇಜರ್ ಸೇರಿದಂತೆ 4 ಯೋಧರು ಗಾಯಗೊಂಡಿದ್ದಾರೆ. ಈ ಚಕಮಕಿಯಲ್ಲಿ ಒಬ್ಬ ಪಾಕಿಸ್ತಾನಿ ಭಯೋತ್ಪಾದಕನ ಹತ್ಯೆಯಾಗಿದೆ ಎಂದು ವರದಿಯಾಗಿದೆ. ಆತ ಪಾಕಿಸ್ತಾನಿ ‘ಬಾರ್ಡರ್ ಆಕ್ಷನ್ ಟೀಮ್’ನ ಕಮಾಂಡೋ ಎಂದು ಶಂಕಿಸಲಾಗಿದೆ. ಕುಪ್ವಾರದ ಕಾರ್ಯಕ್ಷೇತ್ರದಲ್ಲಿ ಪಾಕಿಸ್ತಾನಿ ಭಯೋತ್ಪಾದಕರು ಅಡಗಿ ಕುಳಿತಿದ್ದಾರೆ ಎಂಬ ಮಾಹಿತಿ ಭದ್ರತಾ ಪಡೆಗಳಿಗೆ ಸಿಕ್ಕಿತ್ತು. ಆನಂತರ ಭದ್ರತಾ ಪಡೆಗಳು ಶೋಧ ಕಾರ್ಯಾಚರಣೆ ಆರಂಭಿಸಿವೆ. (ಜಮ್ಮು- ಕಾಶ್ಮೀರದಲ್ಲಿ ಭಯೋತ್ಪಾದಕ ದಾಳಿಯಲ್ಲಿ ಭಾರತೀಯ ಸೇನೆಯ ಸೈನಿಕ ಹುತಾತ್ಮರಾಗುತ್ತಿದ್ದಾರೆ. ಆದರೂ ಇಲ್ಲಿನ ಭಯೋತ್ಪಾದನೆಯ ಮೂಲವಾದ ಪಾಕಿಸ್ತಾನದ ವಿರುದ್ಧ ಕ್ರಮ ಕೈಗೊಳ್ಳಲು ಭಾರತ ವಿಳಂಬ ಮಾಡುತ್ತಿದೆ, ಎಂದು ಸಾಮಾನ್ಯ ಭಾರತೀಯರಿಗೆ ಅನ್ನಿಸುತ್ತದೆ ! – ಸಂಪಾದಕರು)