ಜಮ್ಮು- ಕಾಶ್ಮೀರದಲ್ಲಿ 24 ಗಂಟೆಗಳಲ್ಲಿ ಇಬ್ಬರು ಯೋಧರು ಹುತಾತ್ಮ

ಓರ್ವ ಭಯೋತ್ಪಾದಕ ಹತ್ಯೆ

ಕುಪ್ವಾಡಾ (ಜಮ್ಮು-ಕಾಶ್ಮೀರ) – ಜುಲೈ 24 ರಂದು ಬೆಳಿಗ್ಗೆ ಭಾರತೀಯ ಸೈನಿಕರು ಮತ್ತು ಭಯೋತ್ಪಾದಕರ ನಡುವೆ ನಡೆದ ಚಕಮಕಿಯಲ್ಲಿ ಓರ್ವ ಯೋಧ ಹುತಾತ್ಮರಾಗಿದ್ದಾರೆ. ಈ ವೇಳೆ ಒಬ್ಬ ಭಯೋತ್ಪಾದಕನೂ ಹತನಾಗಿದ್ದಾನೆ. ಇಲ್ಲಿ ಭಯೋತ್ಪಾದಕರು ಅಡಗಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾಗ ಈ ಚಕಮಕಿ ನಡೆದಿದೆ.

ಈ ಘಟನೆಯ ಕೆಲವು ಗಂಟೆಗಳ ಮೊದಲು ಲ್ಯಾನ್ಸ್ ನಾಯಕ್ ಸುಭಾಷ್ ಕುಮಾರ್ ಅವರು ಪೂಂಚ್‌ನ ಗಡಿಯ ಬಳಿಯ ಬಟಾಲ್ ಸೆಕ್ಟರ್‌ನಲ್ಲಿ ನಡೆದ ಚಕಮಕಿಯಲ್ಲಿ ಹುತಾತ್ಮರಾಗಿದ್ದರು.

ಸಂಪಾದಕೀಯ ನಿಲುವು

ಕಾಶ್ಮೀರದಲ್ಲಿ ಸೈನಿಕರ ವೀರ ಮರಣವನ್ನು ತಡೆಯಲು ಪಾಕಿಸ್ತಾನವನ್ನು ನಾಶಮಾಡುವ ನಿರ್ಧಾರವನ್ನು ಕೇಂದ್ರ ಸರಕಾರ ಯಾವಾಗ ತೆಗೆದುಕೊಳ್ಳುವುದು ?