Muslims Throw Stones On Hindu Houses: ಮುಸಲ್ಮಾನರಿಂದ ಹಿಂದೂಗಳ ಮನೆಗಳ ಮೇಲೆ ಕಲ್ಲು ತೂರಾಟ; ಹಿಂದೂಗಳ ಪಲಾಯನ !

  • ಜಾರ್ಖಂಡ್ ಈಗ ಎರಡನೇ ಬಾಂಗ್ಲಾದೇಶ !

  • ಪಾಕೂರ್ ಗ್ರಾಮದಲ್ಲಿ ಘಟನೆ : ಬಾಂಗ್ಲಾದೇಶಿ ನುಸುಳುಕೋರರ ಆತಂಕ ಹೆಚ್ಚಿದೆ !

ರಾಂಚಿ (ಜಾರ್ಖಂಡ್) – ರಾಜ್ಯದ ಪಾಕುರ್‌ನಲ್ಲಿ ಹಿಂದೂಗಳ ಮನೆಗಳ ಮೇಲೆ ಕಲ್ಲು ತೂರಾಟ ನಡೆಸಿದ ಘಟನೆ ಬೆಳಕಿಗೆ ಬಂದಿದೆ. ಸ್ಥಳೀಯ ಮಾಧ್ಯಮಗಳ ಪ್ರಕಾರ, ಕೆಲವು ದಿನಗಳ ಹಿಂದೆ ಪಾಕುರ್‌ನಲ್ಲಿ ಮುಸ್ಲಿಂ ಹುಡುಗನೊಬ್ಬ ಹಿಂದೂ ಹುಡುಗಿಯ ಅಶ್ಲೀಲ ವೀಡಿಯೊವನ್ನು ವೈರಲ್ ಮಾಡಲು ಪ್ರಯತ್ನಿಸಿದನು. ನಂತರ ಹಿಂದೂಗಳು ಘಟನೆಯನ್ನು ಪ್ರತಿಭಟಿಸಿ ಬಾಲಕನಿಗೆ ಥಳಿಸಿದ್ದರು. ಈ ಘಟನೆಯಿಂದ ಆಕ್ರೋಶಗೊಂಡ ಮುಸ್ಲಿಮರು ಹಿಂದೂಗಳ ಮನೆಗಳಿಗೆ ಇಟ್ಟಿಗೆ ಮತ್ತು ಕಲ್ಲುಗಳಿಂದ ದೊಡ್ಡ ಪ್ರಮಾಣದಲ್ಲಿ ಹಲ್ಲೆ ಮಾಡಿದ್ದಾರೆ. ಈ ಘಟನೆಯಲ್ಲಿ ಹಲವು ಹಿಂದೂಗಳು ಗಂಭೀರವಾಗಿ ಗಾಯಗೊಂಡಿದ್ದು, ಹಲವು ಮನೆಗಳಿಗೆ ಹಾನಿಯಾಗಿದೆ. ಈ ವೇಳೆ ಪೊಲೀಸರ ಮೇಲೂ ಹಲ್ಲೆ ನಡೆದಿದೆ. ಇದರಲ್ಲಿ ಮೂವರು ಪೊಲೀಸರು ಗಾಯಗೊಂಡಿದ್ದಾರೆ ಎನ್ನಲಾಗಿದೆ. ಈ ಎಲ್ಲ ಘಟನೆಗಳಿಂದ ಹಿಂದೂಗಳು ಸ್ಥಳವನ್ನು ಬಿಟ್ಟು ಓಡಿಹೋಗುವ ಸ್ಥಿತಿ ಬಂದೊದಗಿದೆ ಎಂದು ಬಿಜೆಪಿ ದಾವೆ ಮಾಡಿದೆ. ಪಾಕೂರು ಗ್ರಾಮ ನಿರ್ಜನವಾಗುತ್ತಿದೆ. ಈ ಪರಿಸ್ಥಿತಿಗೆ ಬಿಜೆಪಿ ನಾಯಕರು ಬಂಗಾಳದಲ್ಲಿರುವ ಬಾಂಗ್ಲಾದೇಶಿ ನುಸುಳುಕೋರರನ್ನು ಹೊಣೆಗಾರರನ್ನಾಗಿ ಮಾಡಿದ್ದಾರೆ. ಈ ವಿಚಾರದಲ್ಲಿ ಹೇಮಂತ್ ಸೊರೇನ್ ಸರಕಾರ ಮೌನ ವಹಿಸಿರುವ ಬಗ್ಗೆಯೂ ಪ್ರಶ್ನೆಗಳು ಎದ್ದಿವೆ.

ಸಂಪಾದಕೀಯ ನಿಲುವು

ಕಾಶ್ಮೀರ, ಬಂಗಾಳ ಮತ್ತು ಕೇರಳದ ನಂತರ ಈಗ ಜಾರ್ಖಂಡ್ ಕೂಡ ಹಿಂದೂಗಳ ಕೈತಪ್ಪುವ ಹಾದಿಯಲ್ಲಿದೆ. ಇದನ್ನು ಸಕಾಲದಲ್ಲಿ ನಿಲ್ಲಿಸದಿದ್ದರೆ, ಭಾರತವನ್ನು ಇಸ್ಲಾಮಿಸ್ತಾನ ಮಾಡುವ 2047 ರ ಗುರಿಯನ್ನು ಸಾಧಿಸಲು ಮತಾಂಧರಿಗೆ ಶಕ್ತಿ ಸಿಗುವುದು !