
ಭೋಪಾಲ್ – ನಗರದಿಂದ ೬೫ ಕಿಲೋಮೀಟರ್ ದೂರದಲ್ಲಿರುವ ವಿದೇಶದಲ್ಲಿನ ಐತಿಹಾಸಿಕ ವಿಜಯ ದೇವಸ್ಥಾನ ಇದನ್ನು ಕ್ರೂರಿ ಔರಂಗಜೇಬನು ೧೬೮೨ ರಲ್ಲಿ ಫಿರಂಗಿ ತೋಪ್ ಮೂಲಕ ಧ್ವಂಸ ಮಾಡಿದ್ದನು. ಈಗ ಮಧ್ಯಪ್ರದೇಶ ಸರಕಾರವು ಈ ದೇವಸ್ಥಾನ ಪ್ರವಾಸಿ ತಾಣವೆಂದು ಅಭಿವೃದ್ಧಿಗೊಳಿಸುವ ನಿರ್ಣಯ ತೆಗೆದುಕೊಂಡಿದೆ. ಈ ದೇವಸ್ಥಾನದ ಮೊದಲ ಉಲ್ಲೇಖ ಅಲ್ಲಉದ್ದೀನ್ ಖಿಲಜಿ ಇವನ ಜೊತೆಗೆ ಬಂದಿರುವ ಅವನ ಮಂತ್ರಿ ಅಲ್ಬೇರುನೀ ಇವನು ಬರೆದಿರುವ ದಾಖಲೆಗಳಲ್ಲಿ ಕಂಡು ಬಂದಿದೆ. ಅವನು, ‘ಈ ದೇವಸ್ಥಾನ ೩೧೫ ಅಡಿಯತ್ತರವಾಗಿತ್ತು. ಭಾರತದಲ್ಲಿನ ಎಲ್ಲಾ ಭವ್ಯ ದೇವಸ್ಥಾನಗಳಲ್ಲಿ ಈ ದೇವಸ್ಥಾನದ ಸಮಾವೇಶವಿತ್ತು.’ ಎಂದು ಬರೆದಿದ್ದಾನೆ. ಮಧ್ಯಪ್ರದೇಶದ ಸಾಂಸ್ಕೃತಿಕ ರಾಜ್ಯ ಸಚಿವ ಧರ್ಮೇಂದ್ರ ಸಿಂಹ ಇವರು ಮಾತನಾಡಿ, ”ರಾಜ್ಯದಲ್ಲಿನ ದೇವಸ್ಥಾನಗಳು ಮತ್ತು ಪ್ರಸಿದ್ಧ ಸ್ಥಳಗಳ ಜೀರ್ಣೋದ್ಧಾರದ ತಯಾರಿ ನಡೆಯುತ್ತಿದೆ. ನಾವು ಪುರಾತತ್ವ ಇಲಾಖೆಯೊಂದಿಗೆ ಕೆಲಸ ಮಾಡಿ ಈ ದೇವಸ್ಥಾನಗಳು ಪ್ರವಾಸಿ ತಾಣವೆಂದು ಅಭಿವೃದ್ಧಿಗೊಳಿಸುವೆವು”, ಎಂದು ಹೇಳಿದ್ದಾರೆ.
೧೦ ನೇ ಶತಮಾನದಲ್ಲಿ ದೇವಸ್ಥಾನದ ಸ್ಥಾಪನೆ !

೧೦ ನೇ ಶತಮಾನದಲ್ಲಿ ಚಾಲುಕ್ಯ ರಾಜಮನೆತನದ ರಾಜಾ ಕೃಷ್ಣ ಇವರ ಮಹಾಮಂತ್ರಿ ವಾಚಸ್ಪತಿ ಇವರ ವಿಜಯದ ಪ್ರತಿಕ ಎಂದು ಈ ದೇವಸ್ಥಾನ ಕಟ್ಟಿದ್ದರು. ಚಾಲುಕ್ಯ ಮನೆತನ ಇದು ಸೂರ್ಯವಂಶಿ ಆಗಿರುವುದರಿಂದ ಈ ದೇವಸ್ಥಾನ ಅವರ ಕುಲದೇವ ಶ್ರೀ ಭೇಲ್ಲಿಸ್ವಾಮಿ (ಸೂರ್ಯ)ಗೆ ಅರ್ಪಿಸಿದ್ದರು. ಈ ಹೆಸರಿನಿಂದ ಮುಂದೆ ಈ ಸ್ಥಳ ಭೆಲಸಾನಿ ಮತ್ತು ನಂತರ ಭೇಲಸಾ ಎಂದು ಗುರುತಿಸಲಾಯಿತು. ಕೆಲವು ಶಿಲಾ ಶಾಸನದ ಪ್ರಕಾರ ಈ ದೇವಸ್ಥಾನಕ್ಕೆ ‘ಬೀಜಮಂಡಲ’ ಅಥವಾ ‘ಚರ್ಚಿಕಾ’ ದೇವಸ್ಥಾನ ಎಂದು ಕೂಡ ಗುರುತಿಸುತ್ತಾರೆ.
ಮುಸಲ್ಮಾನ ಆಕ್ರಮಣಕಾರನು ಮೇಲಿಂದ ಮೇಲೆ ನಡೆಸಿರುವ ದಾಳಿ

೧೨೨೪ ರಲ್ಲಿ ಮೊದಲು ಇಲ್ತುತಮಿಷ ಇವನು ಈ ದೇವಸ್ಥಾನದ ಮೇಲೆ ದಾಳಿ ಮಾಡಿದನು. ನಂತರ ೧೨೫೦ ರಲ್ಲಿ ಅದರ ಜೀರ್ಣೋದ್ಧಾರ ಮಾಡಲಾಯಿತು. ಅದರ ನಂತರ ಮತ್ತೆ ೧೨೯೦ ರಲ್ಲಿ ಅಲ್ಲಾಉದ್ದೀನ್ ಖಿಲಜಿ ಇವನ ಮಂತ್ರಿ ಮಲ್ಲಿಕ್ ಕಾಫುರ್ ಇವನು ಈ ದೇವಸ್ಥಾನ ದ್ವಂಸಗೊಳಿಸಿದನು. ೧೬೮೨ ರಲ್ಲಿ ಔರಂಗಜೇಬನು ಈ ದೇವಸ್ಥಾನ ಫಿರಂಗಿ ತೋಫದಿಂದ ನಾಶಗೊಳಿಸಿದನು ಮತ್ತು ದೇವಸ್ಥಾನದ ಅವಶೇಷಗಳನ್ನು ಉಪಯೋಗಿಸಿ ಅಲ್ಲಿ ಮಸೀದಿ ಕಟ್ಟಿದನು. ಅದರ ನಂತರ ೧೭೬೦ ರಲ್ಲಿ ಪೇಶ್ವೆಯವರು ಈ ದೇವಸ್ಥಾನಕ್ಕೆ ನೀಡಿರುವ ಮಸೀದಿಯ ಸ್ವರೂಪ ನಾಶ ಮಾಡಲಾಯಿತು.
ಸಂಪಾದಕೀಯ ನಿಲುವುಮುಸಲ್ಮಾನ ದಾಳಿಕೋರರಿಂದ ನಾಶ ಮಾಡಿರುವ ಭಾರತದಲ್ಲಿನ ಎಲ್ಲಾ ದೇವಸ್ಥಾನಗಳ ಜೀರ್ಣೋದ್ಧಾರ ಮಾಡುವುದು ಆವಶ್ಯಕವಾಗಿದೆ; ಆದರೆ ಅವುಗಳು ಪ್ರವಾಸಿ ತಾಣ ಎಂದು ಅಭಿವೃದ್ಧಿಪಡಿಸದೇ ಧಾರ್ಮಿಕ ಸ್ಥಳವೆಂದು ಅಭಿವೃದ್ಧಿಯಾದರೆ ಭಕ್ತರಿಗೆ ಅದರ ಆಧ್ಯಾತ್ಮಿಕ ಮಟ್ಟದಲ್ಲಿ ಲಾಭವಾಗುವುದು, ಇದನ್ನು ಸರಕಾರ ಗಮನದಲ್ಲಿಟ್ಟುಕೊಳ್ಳಬೇಕು ! |
ನಾರಾಯಣಪುರ: ಕ್ರೈಸ್ತ ಧರ್ಮ ಸ್ವೀಕರಿಸಿದ ಆದಿವಾಸಿಗಳ ಗ್ರಾಮದಿಂದ ಬಹಿಷ್ಕಾರ
ಶ್ರೀರಾಮ ಮಂದಿರದ ದೇಣಿಗೆ (ಕಾಣಿಕೆ) ಹಣ ಕಳ್ಳತನದ ನಂತರ ಮಂದಿರದ ಸರಕಾರೀಕರಣ ಆಗುವ ಸಾಧ್ಯತೆ
ಶ್ರೀರಾಮಲಲ್ಲಾನ ಮೂರ್ತಿಯನ್ನು ಕೆತ್ತಿದ ಶಿಲ್ಪಿ ಅರುಣ ಯೋಗಿರಾಜ ಅವರ ಪ್ರತಿಕ್ರಿಯೆ!
“ದೋಷಿಗಳಿಗೆ ಕಠಿಣ ಶಿಕ್ಷೆಯಾಗಲೇಬೇಕು!” – ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, ಪೇಜಾವರ ಮಠ
‘ಜಗತ್ತಿನಾದ್ಯಂತ ತಂತ್ರಜ್ಞಾನ ಕ್ಷೇತ್ರವು ವೇಗವಾಗಿ ಮುನ್ನಡೆಯುತ್ತಿರುವಾಗ, ಸರಕಾರವು ‘ಐಐಟಿ’ (IIT) ಸಂಸ್ಥೆಗಳನ್ನು ಜ್ಯೋತಿಷ್ಯ, ಪುನರ್ಜನ್ಮ ಮುಂತಾದ ವಿಷಯಗಳ ಸಂಶೋಧನೆಯಲ್ಲಿ ತೊಡಗಿಸುತ್ತಿದೆ!’ (ಅಂತೆ)
ಅನುಕಂಪದ ಆಧಾರದ ಮೇಲೆ ಕೆಲಸ ಪಡೆಯಲು ತಂದೆಯ ಹತ್ಯೆ ಮಾಡಿಸಿದ ಮಗನ ಬಂಧನ