Amethi Muslims : ಭಾರತದಲ್ಲಿ ಇರಲಿಕ್ಕಿದ್ದರೆ `ಹುಸೇನ‘ ಎನ್ನಲೇ ಬೇಕು ! – ಮುಸಲ್ಮಾನರಿಂದ ಘೋಷಣೆ

ಪೊಲೀಸ ಠಾಣೆಯ ಎದುರಲ್ಲೇ ಮುಸಲ್ಮಾನರಿಂದ ಘೋಷಣೆ !

(ಶಿಯಾ ಮುಸ್ಲಿಮರಿಗೆ ಪ್ರವಾದಿ ಮಹಮ್ಮದ ಅವರ ಮೊಮ್ಮಗ ಇಮಾಮ್ ಹುಸೇನ್ ಆದರ್ಶ)

ಅಮೇಠಿ (ಉತ್ತರಪ್ರದೇಶ) – ಅಮೇಠಿ ಜಿಲ್ಲೆಯ ಮುಸಾಫಿರ್ಖಾನಾ ತಾಲೂಕಿನ ಪಟ್ಟಣದಲ್ಲಿ ಮುಸ್ಲಿಮರು ಜುಲೈ 14 ರ ಸಂಜೆ ಮೊಹರಂ ಮೊದಲು (ಶಿಯಾ ಮುಸ್ಲಿಮರ ಹಬ್ಬ) ಮೆರವಣಿಗೆಯನ್ನು ನಡೆಸಿದ್ದರು. ಈ ಮೆರವಣಿಗೆ ಮುಸಾಫಿರ್ಖಾನಾ ಪೊಲೀಸ್ ಠಾಣೆಯ ಎದುರಿಗೆ ಬಂದಾಗ, ಮೆರವಣಿಗೆಯಲ್ಲಿ ಭಾಗವಹಿಸಿದ ಮುಸ್ಲಿಮರು ‘ಭಾರತದಲ್ಲಿ ಇರಲಿಕ್ಕಿದ್ದರೆ `ಹುಸೇನ‘ ಎನ್ನಲೇ ಬೇಕು’ ಎಂದು ಘೋಷಣೆ ಕೂಗಿದರು. ಈ ಘೋಷಣೆ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ, ಪೊಲೀಸರು ಅಪರಾಧವನ್ನು ದಾಖಲಿಸಿ ತನಿಖೆಯನ್ನು ಪ್ರಾರಂಭಿಸಿದ್ದಾರೆ. (ಪೊಲೀಸ್ ಠಾಣೆಯ ಎದುರಿಗೆ ಇಂತಹ ಘೋಷಣೆ ನೀಡುತ್ತಿರುವಾಗ ಪೊಲೀಸರು ಮಲಗಿದ್ದರೆ ಅಥವಾ ಕಿವುಡರಾಗಿದ್ದರೇ ? ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೊ ವೈರಲ್ ಆಗಗಿದ್ದರೆ, ಪೊಲೀಸರು ಅಪರಾಧವನ್ನು ದಾಖಲಿಸುತ್ತಿರಲಿಲ್ಲ ಮತ್ತು ಮತಾಂಧ ಮುಸಲ್ಮಾನರು ತಮ್ಮ ಉದ್ದೇಶವನ್ನು ಸಾಧ್ಯಗೊಳಿಸಲು ಪ್ರಯತ್ನವನ್ನು ಮುಂದುವರಿಸುತ್ತಿದ್ದರು. ಇಂತಹ ನಿಷ್ಕ್ರಿಯ ಪೊಲೀಸರ ಮೇಲೆ ಯೋಗಿ ಆದಿತ್ಯನಾಥ ಅವರ ಸರಕಾರವು ಕಠಿಣ ಕ್ರಮಗಳನ್ನು ತೆಗೆದುಕೊಳ್ಳಬೇಕು – ಸಂಪಾದಕರು)

1. ಸ್ವಾಮಿ ಪರಮಹಂಸ ಆಶ್ರಮದ ಸಾಗರ ಬಾಬುಗಂಜ ಮುಖ್ಯಸ್ಥ ಮೌನಿಜಿ ಮಹಾರಾಜ್ ಮಾತನಾಡಿ, ಪೊಲೀಸರ ಠಾಣೆಯ ಎದುರಿಗೆ ಇಂತಹ ಆಕ್ಷೇಪಾರ್ಹ ಘೋಷಣೆ ನೀಡಿದ್ದರಿಂದ ಇಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ನಾನು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಮತ್ತು ಜಿಲ್ಲಾಡಳಿತಕ್ಕೆ ಈ ಪ್ರಕರಣದ ಕುರಿತು ತಕ್ಷಣ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸುತ್ತೇನೆ, ಇದರಿಂದ ಇಂತಹ ಘಟಕಗಳನ್ನು ತಡೆಯಬಹುದು. ಇಂತಹ ಘಟಕಗಳ ಬೇರು ಪಾಕಿಸ್ತಾನದ ವರೆಗೆ ತಲುಪಿದೆ. ಈ ಜನರು ಭಾರತದಲ್ಲಿ ಧಾರ್ಮಿಕ ಗಲಭೆಯನ್ನು ಸೃಷ್ಟಿಸಲು ಪ್ರಯತ್ನಿಸುತ್ತಿದ್ದಾರೆ ಮತ್ತು ‘ಗಂಗಾ-ಜಮುನಿ ಸಂಸ್ಕೃತಿ’ (ಗಂಗಾ ಮತ್ತು ಯಮುನಾ ನದಿಗಳ ದಡದಲ್ಲಿ ವಾಸ್ತವ್ಯ ಮಾಡುವ ಹಿಂದೂಗಳು ಮತ್ತು ಮುಸ್ಲಿಮರ ನಡುವಿನ ಐಕ್ಯತೆಯನ್ನು ತೋರಿಸುವ ಸಂಸ್ಕೃತಿ) ನಾಶಮಾಡಲು ಬಯಸುತ್ತಿದ್ದಾರೆ. (ಮೂಲದಲ್ಲಿ ಇದು ಸಂಸ್ಕೃತಿಗೆ ಸಂಬಂಧಿಸಿದ ವಿಷಯವಲ್ಲ. ಕಪಟ ಜಾತ್ಯತೀತವಾದಿಗಳು ಮತ್ತು ಪ್ರಗತಿ(ಅಧೋ)ಪರರು ಹಿಂದೂಗಳ ಆತ್ಮಘಾತ ಮಾಡಲು ರಚಿಸಿರುವ ಸಂಚಾಗಿದೆ ಮತ್ತು ಅದಕ್ಕೆ ಹಿಂದೂಗಳ ಧಾರ್ಮಿಕ ನಾಯಕರೂ ಬಲಿ ಬೀಳುತ್ತಿದ್ದಾರೆ. ಇದು ದುರಾದೃಷ್ಟಕರವೇ ಆಗಿದೆ – ಸಂಪಾದಕರು) ಆದ್ದರಿಂದ ಅಂತಹವರ ವಿರುದ್ಧ ತಕ್ಷಣವೇ ಕ್ರಮ ಕ್ರಮಕೈಗೊಳ್ಳಬೇಕು. ಇದರ ಹಿಂದೆ ರಾಜಕೀಯ ಪಿತೂರಿ ಇರಬಹುದು.

2. ಈ ಸಂದರ್ಭದಲ್ಲಿ ಪೊಲೀಸ್ ವರಿಷ್ಠಾಧಿಕಾರಿ ಅನುಪ್ ಕುಮಾರ್ ಸಿಂಗ್ ಅವರು ಮಾತನಾಡಿ, ವಿಡಿಯೋದಲ್ಲಿ ಕಾಣಿಸುತ್ತಿರುವ ಜನರನ್ನು ವಶಕ್ಕೆ ಪಡೆದು ಅವರ ತನಿಖೆ ನಡೆಸಲಾಗುತ್ತಿದೆ. ಈ ಪ್ರಕರಣದಲ್ಲಿ ನಾವು ಅಪರಾಧವನ್ನು ದಾಖಲಿಸಿದ್ದು, ವೀಡಿಯೊದ ಪರಿಶೀಲನೆ ಮಾಡುತ್ತಿದ್ದೇವೆ. ಈ ಪ್ರಕರಣದಲ್ಲಿ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಹೇಳಿದ್ದಾರೆ.

ಸಂಪಾದಕೀಯ ನಿಲುವು

  • ಧರ್ಮದ ಆಧಾರದಲ್ಲಿ ಭಾರತವನ್ನು ವಿಭಜಿಸಿ ಮುಸ್ಲಿಮರಿಗೆ ಪಾಕಿಸ್ತಾನವನ್ನು ನೀಡಲಾಯಿತು; ಆದರೂ ಭಾರತದಲ್ಲಿರುವವರು ನೇರ ಪೊಲೀಸ ಠಾಣೆಯ ಎದುರಿಗೆ ಭಾರತದ ಹಿಂದೂಗಳಿಗೆ ಬೆದರಿಕೆ ಹಾಕುತ್ತಾರೆಂದರೆ ಅವರ ಮಾನಸಿಕತೆಯ ಯಾವ ರೀತಿಯಿದೆ ಎನ್ನುವುದನ್ನು ಮತ್ತೊಮ್ಮೆ ತೋರಿಸಿಕೊಡುತ್ತಿದ್ದಾರೆ. ಆತ್ಮಘಾತುಕ ಜಾತ್ಯತೀತತೆಯ ಗುಂಗಿನಲ್ಲಿರುವ ಹಿಂದೂಗಳು ಈಗಲಾದರೂ ಎಚ್ಚೆತ್ತುಕೊಳ್ಳುವರೇ ?
  • ಅಮೇಠಿಯಲ್ಲಿ ಕಾಂಗ್ರೆಸ್ ಸಂಸದರು ಆಯ್ಕೆಯಾಗಿದ್ದಾರೆ. ಹಾಗಾಗಿ ಇದರ ವಿರುದ್ಧ ಕಾಂಗ್ರೆಸ್ ಚಕಾರವನ್ನೂ ಎತ್ತಿಲ್ಲ. ಆದ್ದರಿಂದ ಕಾಂಗ್ರೆಸ್ ಯಾರಿಂದ ಚುನಾಯಿತರಾಗುತ್ತಾರೆ ಎನ್ನುವುದು ಗಮನಕ್ಕೆ ಬರುತ್ತದೆ !