150 Dalit Will Convert To Islam : ಭಾಜಪದ ಶಾಸಕರ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ ೧೫೦ ದಲಿತರರೊಂದಿಗೆ ಇಸ್ಲಾಂ ಸ್ವೀಕರಿಸುವೆ !

  • ಜುನಾಗಡ್ (ಗುಜರಾತ್)ನ ಕಾಂಗ್ರೆಸ್ ಪಕ್ಷದ ದಲಿತ ಮುಖಂಡನ ಬೆದರಿಕೆ !

  • ಶಾಸಕರ ಪುತ್ರನಿಂದ ಕಾಂಗ್ರೆಸ್ಸಿಗನ ಪುತ್ರನ ಮೇಲೆ ದಾಳಿ ನಡೆದಿತ್ತು !

ಹಿಂದುಳಿದ ಜಾತಿ ಜನಾಂಗದ ಸಂಘಟನೆಯ ಅಧ್ಯಕ್ಷ ರಾಜೇಶ್ ಸೋಲಂಕಿ

ಜುನಾಗಡ್ (ಗುಜರಾತ್) – ಭಾಜಪದ ಶಾಸಕ ಗೀತಾಬಾ ಜಡೇಜಾ ಇವರ ಮಗನು ಇಲ್ಲಿಯ ಕಾಂಗ್ರೆಸ್ಸಿನ ಹಿಂದುಳಿದ ಜಾತಿ ಜನಾಂಗದ ಸಂಘಟನೆಯ ಅಧ್ಯಕ್ಷ ರಾಜೇಶ್ ಸೋಲಂಕಿ ಇವರ ಮಗನ ಮೇಲೆ ದಾಳಿ ಮಾಡಿದ್ದನು. ಒಂದು ವೇಳೆ ಜಡೇಜಾ ಇವರು ರಾಜೀನಾಮೆ ನೀಡದಿದ್ದರೆ, ನನ್ನ ಸಂಪೂರ್ಣ ಕುಟುಂಬ ಮತ್ತು ದಲಿತ ಸಮುದಾಯದ ೧೫೦ ಜನರು ಇಸ್ಲಾಂ ಸ್ವೀಕರಿಸುವರು, ಎಂದು ಸೋಲಂಕಿ ಇವರು ಬೆದರಿಕೆ ನೀಡಿದ್ದಾರೆ.

ಶಾಸಕ ಜಡೇಜಾ ಇವರ ಮಗ ಜ್ಯೋತಿರಾದಿತ್ಯ ಸಿಂಹ ಅಲಿಯಾಸ್ ಗಣೇಶ್ ಮತ್ತು ಇತರ ೧೦ ಜನರು ಸೋಲಂಕಿ ಇವರ ಮಗ ಸಂಜಯ ಮೇಲೆ ದಾಳಿ ನಡೆಸಿರುವುದರಿಂದ ಅವರನ್ನು ಮೊದಲೇ ಬಂಧಿಸಲಾಗಿದೆ. ದಾಳಿಯ ಘಟನೆ ಮೇ ೩೦ ರಂದು ನಡೆದಿದೆ ಎಂದು ಹೇಳಲಾಗಿದೆ. ಹೊಡೆದಾಟದ ಘಟನೆಯಲ್ಲಿ ಶಾಸಕ ಜಡೇಜಾ ಇವರ ಕೈವಾಡ ಕೂಡ ಇರುವುದೆಂದು ಸೋಲಂಕಿ ಇವರು ಆರೋಪಿಸಿದ್ದಾರೆ. ‘ಆಗಸ್ಟ್ ೧೫ ರ ವರೆಗೆ ಸರಕಾರ ಮತ್ತು ಭಾಜಪ ಇವರಿಗೆ ಸಮಯ ನೀಡಲಾಗಿದ್ದು ನಮ್ಮ ಮಾತು ಕೇಳದಿದ್ದರೆ ನಾವು ಇಸ್ಲಾಂ ಧರ್ಮಕ್ಕೆ ಮತಾಂತರಗೊಳ್ಳುವೆವು ಎಂದು ಸೋಲಂಕಿ ಇವರು ಹೇಳಿದ್ದಾರೆ.

ಸಂಪಾದಕೀಯ ನಿಲುವು

ಹಿಂಸಾಚಾರದ ಪ್ರಕರಣದಲ್ಲಿ ಯೋಗ್ಯಕ್ರಮ ಜರುಗಬೇಕು; ಆದರೆ, ಬೇಡಿಕೆ ಪೂರ್ಣವಾಗದಿದ್ದರೆ, ಮತಾಂತರ ಗೊಳ್ಳುವುದು !, ಹೀಗೆ ಆಗಬಾರದು ! ಇಂತಹವರಿಗೆ ಹಿಂದೂ ಧರ್ಮದ ಮಹತ್ವ ತಿಳಿದಿಲ್ಲ ಎಂದು ಕಾಣುತ್ತದೆ !