ಮೊಹಾಲಿ (ಪಂಜಾಬ) : ಚಿತ್ರೀಕರಣದ ವೇಳೆ ಶ್ರೀ ಗುರು ಗ್ರಂಥ ಸಾಹಿಬ (ಸಿಖ್ಖರ ಪವಿತ್ರ ಗ್ರಂಥ) ಅಪಮಾನವಾಗಿದೆಯೆಂದು ನಿಹಂಗ ಸಿಖ್ಖರಿಂದ ವಿಧ್ವಂಸ

ಸಿಬ್ಬಂದಿಗಳಿಗೆ ಥಳಿತ

ಮೊಹಾಲಿ (ಪಂಜಾಬ) – ‘ಉಡಿಯಾನ’ ಎಂಬ ಧಾರಾವಾಹಿಯ ಚಿತ್ರೀಕರಣದ ವೇಳೆ ನಿಹಂಗ ಸಿಖ್ಖರು ಆಕ್ರಮಣ ಮಾಡಿ ತೆರೆಮರೆಯನ್ನು(ಬ್ಯಾಕ್ ಸ್ಟೇಜ್) ಧ್ವಂಸಗೊಳಿಸಿದರು ಮತ್ತು ನಿರ್ಮಾಣ ಸಿಬ್ಬಂದಿಯನ್ನು ಥಳಿಸಿದರು. ಘಟನೆಯ ನಂತರ ಆಗಮಿಸಿದ ಪೊಲೀಸರು ದಾಳಿಕೋರರನ್ನು ಪೊಲೀಸ್ ಠಾಣೆಗೆ ಕರೆದೊಯ್ದರು. ಚಿತ್ರೀಕರಣಕ್ಕಾಗಿ ನಿರ್ಮಿಸಿದ್ದ ಗುರುದ್ವಾರದ ಪ್ರತಿಕೃತಿಯನ್ನು ವಿರೋಧಿಸಿದ ನಿಹಂಗ ಸಿಖ್ಖರು ಇಂತಹ ಪ್ರತಿಕೃತಿಯಿಂದಾಗಿ ಶ್ರೀ ಗುರು ಗ್ರಂಥ ಸಾಹಿಬ್‌ಗೆ ಅವಮಾನ ಮಾಡಿದಂತಾಗುತ್ತದೆ ಎಂದು ಆರೋಪಿಸಿದರು.

1. ಸಿಖ್ ಸಂಪ್ರದಾಯದ ಪ್ರಕಾರ ವಿವಾಹದ ದೃಶ್ಯಗಳನ್ನು ಚಿತ್ರೀಕರಣ ಮಾಡುವುದಕ್ಕಾಗಿ ಒಂದು ಗುರುದ್ವಾರವನ್ನು ನಿರ್ಮಾಣ ಮಾಡಲಾಗಿತ್ತು ಹಾಗೂ ಮೂವರು ಗ್ರಂಥಿಗಳನ್ನು( ಗುರುದ್ವಾರದಲ್ಲಿನ ಪೂಜಾರಿ) ಕರೆಸಲಾಗಿತ್ತು; ಆದರೆ ನಿಹಂಗ ಸಿಖ್ಖರು ಹಠಾತ್ ಆಗಿ ಬಂದು ಧ್ವಂಸ ಮಾಡಿದರು ಮತ್ತು ಅಲ್ಲಿದ್ದವರನ್ನು ಥಳಿಸಿದರು.

2. ಪೊಲೀಸರು ಈ ಪ್ರಕರಣದ ಸರಿಯಾಗಿ ತನಿಖೆ ಮಾಡದಿದ್ದರೆ ನಾವು ಈ ವಿಷಯವನ್ನು ನಮ್ಮ ಕೈಗೆ ತೆಗೆದುಕೊಳ್ಳುತ್ತೇವೆ ಎಂದು ನಿಹಂಗ ಸಿಖ್ಖರು ಬೆದರಿಕೆ ಹಾಕಿದ್ದಾರೆ. ನಾವು ಸಂಪೂರ್ಣ ತೆರೆಮರೆಯ(ಬ್ಯಾಕಸ್ಟೇಜ) ವಿಡಿಯೋ ಮಾಡಿದ್ದೇವೆ. ಗ್ರಂಥಿಗಳಿಗೆ ತಲಾ ಒಂದು ಸಾವಿರ ರೂಪಾಯಿ ಕೊಟ್ಟು ಇಲ್ಲಿಗೆ ಕರೆತರಲಾಗಿದೆ. ಎಲ್ಲಕ್ಕಿಂತ ಬೇಸರದ ವಿಷಯವೆಂದರೆ ಸಿಖ್ಖರ ಕಣ್ಣೆದುರಿಗೇ ಅವರ ಗುರುಗಳಿಗೆ ಅಪಮಾನವಾಗುತ್ತಿತ್ತು ಎಂದು ನಿಹಂಗ ಸಿಖ್ಖರು ಪೊಲೀಸರಿಗೆ ತಿಳಿಸಿದರು.

3. ಈ ಘಟನೆಯ ಮಾಹಿತಿ ಸಿಕ್ಕ ಕೂಡಲೇ, ಪಂಜಾಬಿ ನಟ ಜರ್ನೆಲ್ ಸಿಂಗ್ ಸ್ಥಳಕ್ಕೆ ತಲುಪಿದರು. ಅವರು ಮಾತನಾಡಿ, ನಾನು ಸ್ವತಃ ಸಿಖ್ಖನಾಗಿದ್ದೇನೆ. ಇಲ್ಲಿ ಸಿಖ್ಖರ ಭಾವನೆಗೆ ಧಕ್ಕೆಯಾಗಿದೆ. ಧಾರಾವಾಹಿಯಲ್ಲಿ ಸಿಖ್ ಯುವಕರ ವಿವಾಹ ತೋರಿಸುವುದು ಯಾವುದೇ ಸಮಾಜಕ್ಕೆ ಒಳ್ಳೆಯ ಕಾರ್ಯವಾಗಿದೆ. ಅದಕ್ಕಾಗಿ ಒಂದು ವಿಧಾನ ಅಥವಾ ಮಾರ್ಗ ಇರಬೇಕು. ‘ಶಿರೋಮಣಿ ಪ್ರಬಂಧಕ್ ಸಮಿತಿ’ ಧಾರಾವಾಹಿಯಲ್ಲಿ ಶ್ರೀ ಗುರು ಗ್ರಂಥ ಸಾಹಿಬ್ ಪ್ರತಿಯನ್ನು ತೆಗೆದುಕೊಂಡು ಹೋಗುವ ಬಗ್ಗೆ ನಿಯಮಗಳನ್ನು ರಚಿಸಬೇಕು ಎಂದು ಹೇಳಿದರು.

ಸಂಪಾದಕೀಯ ನಿಲುವು

  • ನಿಹಂಗ ಸಿಖ್ಖರಿಂದ ನಿರಂತರವಾಗಿ ಕಾನೂನು ಕೈಗೆತ್ತಿಕೊಳ್ಳುತ್ತಿರುವ ಘಟನೆ ನಡೆಯುತ್ತಿರುವುದರಿಂದ ಅದರೆಡೆಗೆ ಈಗ ಗಂಭೀರತೆಯಿಂದ ನೋಡಿ, ಇಂತಹವರನ್ನು ಶಸ್ತ್ರ ಹೊಂದುವ ಅನುಮತಿಯನ್ನು ನಿರಾಕರಿಸಬೇಕು ಎಂದು ಸಾರ್ವಜನಿಕರು ಮನವಿ ಮಾಡಬೇಕಾಗಿದೆ !
  • ಮುಸಲ್ಮಾನರಂತೆ, ಸಿಖ್ಖರು ತಮ್ಮ ಧರ್ಮಕ್ಕೆ ಅಪಮಾನವಾದಾಗ ಕಾನೂನನ್ನು ಕೈಗೆತ್ತಿಕೊಳ್ಳುತ್ತಾರೆ ಮತ್ತು ಯಾರೂ ಅವರನ್ನು ವಿರೋಧಿಸುವುದಿಲ್ಲ; ಆದರೆ, ಹಿಂದುತ್ವನಿಷ್ಠರು ಕಾನೂನು ಮಾರ್ಗದ ಮೂಲಕ ಪ್ರತಿಭಟಿಸಿದರೂ, ಅಭಿವ್ಯಕ್ತಿ ಸ್ವಾತಂತ್ರ್ಯದ ಪಾಠ ಮಾಡಲಾಗುತ್ತದೆ.