ಮಂಗಳೂರಿನಲ್ಲಿ ಯುವಕನೊಬ್ಬನಿಂದ ಪ್ರಸಿದ್ಧ ಕದ್ರಿ ದೇವಸ್ಥಾನದ ಆವರಣಕ್ಕೆ ಬೈಕ್ ನುಗ್ಗಿಸಿ ದಾಂಧಲೆ !

  • ದೇವಸ್ಥಾನದ ಬಾಗಿಲಿಗೆ ಒದ್ದ !

  • ದೇವರ ಮೂರ್ತಿಯ ಕೈಯಲ್ಲಿದ್ದ ಖಡ್ಗ ತೆಗೆದ !

ಮಂಗಳೂರು – ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್ಧ ದೇಗುಲಗಳಲ್ಲೊಂದಾದ ಪುಣ್ಯ ಕ್ಷೇತ್ರ ಕದ್ರಿ ಮಂಜುನಾಥ್ ದೇವಸ್ಥಾನದ ಆವರಣಕ್ಕೆ ಖಾಸಗಿ ಆಸ್ಪತ್ರೆಯ ಭದ್ರತಾ ಸಿಬ್ಬಂದಿ ಸುಧಾಕರ ಆಚಾರ್ಯ ಎಂಬುವರು ದ್ವಿಚಕ್ರ ವಾಹನದೊಂದಿಗೆ ನುಗ್ಗಿ ಸಂಚಲನ ಮೂಡಿಸಿದ್ದಾನೆ. ಇಲ್ಲಿ ಬಾಗಿಲನ್ನು ಒದ್ದಿದ್ದಾನೆ ಈ ಬಗ್ಗೆ ಅರ್ಚಕರು ಪ್ರಶ್ನಿಸಿದಾಗ ಅವರ ಮೇಲೆಯೂ ಹಲ್ಲೆ ಮಾಡಲು ಯತ್ನಿಸಿದ್ದಾನೆ. ಅಷ್ಟೇ ಅಲ್ಲ ದೇವರ ಮೂರ್ತಿಯ ಕೈಯಿಂದ ಖಡ್ಗ ತೆಗೆದು ಗೊಂಧಲ ಸೃಷ್ಟಿಸಿದ. ಈ ವೇಳೆ ದೇವಸ್ಥಾನದಲ್ಲಿದ್ದ ಭಕ್ತರು ಆತನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.