|

ನವ ದೆಹಲಿ – ರಾಜಧಾನಿ ದೆಹಲಿಯಲ್ಲಿನ ಸಂಗಮ ವಿಹಾರ ಪರಿಸರದಲ್ಲಿ ಕೆಲವು ದಿನಗಳ ಹಿಂದೆ ಮಾರುಕಟ್ಟೆಯಲ್ಲಿ ನಡೆದಿರುವ ಹತ್ಯೆಯ ವಿಡಿಯೋ ಈಗ ಎಲ್ಲಾ ಕಡೆ ವೈರಲ್ ಆಗಿದೆ. ಈ ವಿಡಿಯೋದಲ್ಲಿ ಕೆಲವು ಹುಡುಗರು ನೀರಿನ ಟ್ಯಾಂಕರ್ ಮೇಲೆ ಕಲ್ಲು ತೂರಾಟ ನಡೆಸುತ್ತಿರುವುದು ಕಾಣುತ್ತಿದೆ. ಕೊನೆಗೆ ಟ್ಯಾಂಕರಿನ ಚಾಲಕ ತನ್ನನ್ನು ರಕ್ಷಿಸುವ ಭರದಲ್ಲಿ ಟ್ಯಾಂಕರ್ ಚಲಿಸುತ್ತಿರುವಾಗ ಓರ್ವ ಯುವಕನು ಅದರ ಕೆಳಗೆ ಸಿಕ್ಕಿರುವುದು ಕಾಣುತ್ತಿದೆ. ಬಳಿಕ ಚಾಲಕ ಕೆಲವು ಅಂತರದಲ್ಲಿ ಟ್ಯಾಂಕರ್ ಬಿಟ್ಟು ಜೀವ ರಕ್ಷಿಸುವುದಕ್ಕಾಗಿ ಘಟನಸ್ಥಳದಿಂದ ಓಡಿ ಹೋಗುತ್ತಿರುವುದು ವಿಡಿಯೋದಲ್ಲಿ ಕಾಣುತ್ತಿದೆ.
ಟ್ಯಾಂಕರ್ ಗುದ್ದಿರುವುದರಿಂದ ಗಂಭೀರವಾಗಿ ಗಾಯಗೊಂಡಿರುವ ಯುವಕನಿಗೆ ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ಸಾವನ್ನಪ್ಪಿದ್ದಾನೆ. ಈ ವಿಡಿಯೋ ಜುಲೈ ೩ ರದ್ದಾಗಿದ್ದೂ ಮಳೆಯಿಂದ ಪ್ರತಿವರ್ಷದಂತೆ ದೆಹಲಿಯಲ್ಲಿನ ಸಂಗಮ ವಿಹಾರ ಸಹಿತ ಇತರ ಪ್ರದೇಶದಲ್ಲಿ ನೀರು ಸಂಗ್ರಹವಾಗಿರುವುದು ಕಂಡುಬಂದಿದೆ. ಈ ಸಮಯದಲ್ಲಿ ಈ ಪರಿಸರದಲ್ಲಿ ರತಿಯ ಮಾರ್ಗದಲ್ಲಿ ನೀರಿನ ಒಂದು ಟ್ಯಾಂಕರ್ ವೇಗವಾಗಿ ಹೋಗಿದೆ. ಅಲ್ಲಿದ್ದ ೧೮ ವರ್ಷದ ಆರಿಫ ಖಾನ್ ಅಲಿಯಾಸ್ ವಿಶು, ೧೮ ವರ್ಷದ ಶಕಿಲ್ ಮತ್ತು ಇತರರು ರಸ್ತೆಯಲ್ಲಿನ ನೀರು ಸಿಡಿದಿದ್ದರಿಂದ ಆಕ್ರೋಶಗೊಂಡಿರುವ ಯುವಕರು ಟ್ಯಾಂಕರನ್ನು ನಿಲ್ಲಿಸಿ ಅವನ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಆ ಸಮಯದಲ್ಲಿ ತನ್ನ ಜೀವನ ಉಳಿಸಿಕೊಳ್ಳುವ ಭರದಲ್ಲಿ ಚಾಲಕ ಸಪನಸಿಂಹ ಇವನು ಟ್ಯಾಂಕರ್ ಮುಂದೆ ನಡೆಸಿದ್ದಾನೆ, ಆದರೆ ಟ್ಯಾಂಕರ್ ಕೆಳಗೆ ಸದ್ದಾಮ ಎಂಬ ಯುವಕ ಸಿಕ್ಕಿಕೊಂಡಿದ್ದಾನೆ. ಆದ್ದರಿಂದ ಅವನಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡುವ ಸಮಯದಲ್ಲಿ ಸಾವು ಸಂಭವಿಸಿದೆ. ಸ್ಥಳಿಯ ಪೊಲೀಸ ಠಾಣೆಯು ಟ್ಯಾಂಕರನ್ನು ವಶಕ್ಕೆ ಪಡೆದಿದ್ದು ಈ ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.
ಸಂಪಾದಕೀಯ ನಿಲುವುದೇಶದಲ್ಲಿ ಅಲ್ಪಸಂಖ್ಯಾತರಿವವರು ಅಪರಾಧದಲ್ಲಿ ಮಾತ್ರ ಬಹುಸಂಖ್ಯಾತರು ! |
ಶ್ರೀರಾಮ ಮಂದಿರದ ದೇಣಿಗೆ ಕಳ್ಳತನ ಪ್ರಕರಣದಲ್ಲಿ ದೊಡ್ಡ ವ್ಯಕ್ತಿಗಳನ್ನು ಹೊರಗಿಡಲಾಗಿದೆ !
‘ಮ್ಯೂಸಿಕ್ ಕಾನ್ಸರ್ಟ್’ಗಳಲ್ಲಿ ಇನ್ನು ಮುಂದೆ ಮದ್ಯಪಾನಕ್ಕೆ ಅನುಮತಿಯಿಲ್ಲ ! – ಯೋಗೇಶ ಕದಮ್, ಗೃಹ ರಾಜ್ಯಸಚಿವರು
ವೈದಿಕ ಕಾಲದಲ್ಲಿ ಮಹಿಳೆಯರಿಗೆ ಗೌರವ ಸಿಗುತ್ತಿತ್ತು ಎಂದು ಹೇಳುತ್ತಾ ಮನುಸ್ಮೃತಿಯ ಶ್ಲೋಕದ ಉಲ್ಲೇಖ!
‘ ಮಹಾತ್ಮ ಫುಲೆ ವಾಡಾ’ ಆವರಣದಲ್ಲಿ ವಟಪೂಜೆ ನಿಷೇಧ ವಾಪಸ್!
ದೇಶದ 3 ರಾಜ್ಯಗಳಲ್ಲಿ ಲವ್ ಜಿಹಾದ್ನ 4 ಘಟನೆಗಳು ಬೆಳಕಿಗೆ!
ಮಧ್ಯಪ್ರದೇಶದ ಬಡನಗರದಲ್ಲಿ ಕ್ರೇನ್ ಮೂಲಕ ಕಾರನ್ನು ಎತ್ತಿ ಉದ್ದೇಶಪೂರ್ವಕವಾಗಿ ಸ್ಫೋಟಿಸಲಾಯಿತು ! : Ujjain Muharram