Hindu Youth Beaten: ಗೆಳೆಯನ ಮದುವೆಯಲ್ಲಿ ಶ್ರೀರಾಮ ಮಂದಿರದ ಹಾಡಿಗೆ ಹಿಂದೂ ಯುವಕ ಕುಣಿದಿದ್ದರಿಂದ ಮುಸ್ಲಿಮರಿಂದ ಥಳಿತ !

ಕಲ್ಬುರ್ಗಿಯಲ್ಲಿನ ಘಟನೆ

ಕಲ್ಬುರ್ಗಿ – ಇಲ್ಲಿ ಹಿಂದೂ ಯುವಕನೊಬ್ಬ ತನ್ನ ಸ್ನೇಹಿತನ ಮದುವೆಯಲ್ಲಿ ಶ್ರೀರಾಮ ಮಂದಿರದ ಹಾಡಿಗೆ ಕುಣಿದಿದ್ದ. ಇದರಿಂದ ಸಿಟ್ಟಿಗೆದ್ದ 5-6 ಮತಾಂಧ ಮುಸ್ಲಿಂ ಯುವಕರು ಆತನ ಮೇಲೆ ಹಲ್ಲೆ ನಡೆಸಿ ಅಮಾನುಷವಾಗಿ ಥಳಿಸಿದ್ದಾರೆ. ಜಿಲ್ಲೆಯ ಇಟಗಾ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಜುಲೈ 1 ರಂದು ಭೀಮಾಶಂಕರ್ ಎಂಬ ಹಿಂದೂ ಯುವಕ ‘ಅಗರ್ ಛುವಾ ತೋ ಮಂದಿರ್ ಕೋ, ತೇರಿ ಔಕತ್ ದಿಖಾ ದೇಂಗೆ’ ಈ ಹಾಡು ಹಾಕಿ ನೃತ್ಯ ಮಾಡಿದ್ದನು.

ಸ್ಥಳೀಯ ಪ್ರಸಾರ ಮಾಧ್ಯಮಗಳ ಪ್ರಕಾರ, ಜುಲೈ 2 ರಂದು ಬೆಳಿಗ್ಗೆ 5-6 ಮುಸಲ್ಮಾನ ಯುವಕರು ನೃತ್ಯ ಮಾಡಿದ ಭೀಮಾಶಂಕರ್ ಮನೆಗೆ ನುಗ್ಗಿ ಅವನನ್ನು ಅಮಾನುಷವಾಗಿ ಥಳಿಸಿದ್ದಾರೆ. ಖಾನ್ ಪಾಶಾ, ಖಾಜಾಪಾಶಾ, ಮಶಾಕ್ ಪಟೇಲ್, ಫಿರೋಜ್, ಕಾಸಿಮ್, ಮದಾರ್ ಮತ್ತು ನಯೀಮ್ ಹೀಗೆ ಈ ಆಕ್ರಮಣಕಾರರ ಹೆಸರುಗಳಿವೆ. ಈ ದಾಳಿಯಿಂದ ಭೀಮಾಶಂಕರ ಅವರ ಕುಟುಂಬ ಭಯಗೊಂಡಿದ್ದು, ಪ್ರಾಣಕ್ಕೆ ಅಪಾಯವಿದೆ ಎಂದು ಹೇಳಿದ್ದಾರೆ. ಆಕ್ರಮಣ ಮಾಡಿದ ಕೆಲ ಯುವಕರು ಕೂಡ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಭೀಮಾಶಂಕರನ ತಾಯಿ ನೀಡಿದ ದೂರಿನ ಮೇರೆಗೆ ಅಪರಾಧ ಪ್ರಕರಣ ದಾಖಲಾಗಿದೆ.

ಈ ಹಿಂದೆಯೂ ಇಂತಹ ಘಟನೆಗಳು ಬೆಳಕಿಗೆ ಬಂದಿವೆ. ಕೆಲ ದಿನಗಳ ಹಿಂದೆ ಕೋಲಾರ ನಗರದ ಅರಹಳ್ಳಿ ಗೇಟ್ ಬಳಿ ಹಿಂದೂ-ಮುಸ್ಲಿಂರ ನಡುವೆ ಘರ್ಷಣೆ ನಡೆದಿತ್ತು. ನಾಡಪ್ರಭು ಕೆಂಪೇಗೌಡರ 515 ನೇ ಜಯಂತಿ ನಿಮಿತ್ತ ಮಸೀದಿ ಎದುರು ಡಿಜೆ ಹಾಕಿದ್ದರಿಂದ ವಿವಾದ ಉಂಟಾಗಿತ್ತು.

ಸಂಪಾದಕೀಯ ನಿಲುವು

ಅಭಿವ್ಯಕ್ತಿ ಸ್ವಾತಂತ್ರ್ಯದ ಬಗ್ಗೆ ಮಾತನಾಡುವವರು ಇಂತಹ ಘಟನೆಗಳಲ್ಲಿ ಆಕ್ರಮಣಕಾರಿ ಮುಸಲ್ಮಾನರ ವಿರುದ್ಧವಾಗಿ ಏಕೆ ಧ್ವನಿ ಎತ್ತುವುದಿಲ್ಲ?