ವೈಶ್ವಿಕ ಹಿಂದು ರಾಷ್ಟ್ರ ಮಹೋತ್ಸವದ ಏಳನೇ ದಿನ (೩೦ ಜೂನ್)
ಬೋಧಪ್ರದ ಸತ್ರ – ಹಿಂದುತ್ವದ ರಕ್ಷಣೆ

ವಿದ್ಯಾಧಿರಾಜ ಸಭಾಂಗಣ – ಸನಾತನ ಸಂಸ್ಥೆಯ ಸಂಸ್ಥಾಪಕರಾದ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ದೂರದೃಷ್ಟಿಯಿಂದ ವಿಚಾರ ಮಾಡುತ್ತಾರೆ. ಭಾರತದಲ್ಲಿ ಹಿಂದೂ ರಾಷ್ಟ್ರವನ್ನು ಸ್ಥಾಪಿಸಿ ಸಂಪೂರ್ಣ ಜಗತ್ತನ್ನು ಕಲ್ಯಾಣಕಾರಿ ಹಿಂದೂ ರಾಷ್ಟ್ರದವರೆಗೆ ಕೊಂಡೊಯ್ಯುವುದು ಅವರ ಧ್ಯೇಯವಾಗಿದೆ. ಇದಕ್ಕಾಗಿ ‘ಶತ್ರುಬೋಧ’ ಮತ್ತು ‘ಇತಿಹಾಸದ ಅಭಿಮಾನ’ವಿರುವುದು ಅನಿವಾರ್ಯವಾಗಿದೆ, ಎಂಬ ಹೇಳಿಕೆಯನ್ನು ಮುಂಬಯಿಯ ಅಯೋಧ್ಯಾ ಫೌಂಡೇಶನ್ನ ಸಂಸ್ಥಾಪಕಿ ಮೀನಾಕ್ಷಿ ಶರಣ ಇವರು ನೀಡಿದರು. ಅವರು ವೈಶ್ವಿಕ ಹಿಂದೂ ರಾಷ್ಟ್ರ ಅಧಿವೇಶನದ ೩೦ ಜೂನ್ ಅಂದರೆ ಕೊನೆಯ ದಿನದ ಸತ್ರದಲ್ಲಿ ‘ವರ್ಷ ೧೯೪೭ ರಂತಹ ಪರಿಸ್ಥಿತಿ ನಿರ್ಮಾಣವಾದರೆ ಮಹಿಳೆಯರ ಮತ್ತು ಹಿಂದೂಗಳ ಕರ್ತವ್ಯ !’ ಈ ಕುರಿತು ಮಾತನಾಡುತ್ತಿದ್ದರು. ಅವರು ಮಾತನ್ನು ಮುಂದುವರೆಸುತ್ತಾ, “ಭಾರತದಲ್ಲಿ ‘ಲವ್ ಜಿಹಾದ್’, ‘ಗೋಹತ್ಯೆ’ ನಡೆಯುತ್ತಿದ್ದರೂ ಆ ಬಗ್ಗೆ ಹಿಂದೂಗಳು ಸ್ಪಂದಿಸುವುದಿಲ್ಲ. ಭಾರತದಲ್ಲಿ ಪ್ರತಿವರ್ಷ ೩ ಕೋಟಿ ಗೋವುಗಳ ಹತ್ಯೆಯಾಗುತ್ತದೆ; ಆದರೆ ಹಿಂದೂಗಳು ಈ ಕುರಿತು ಸಾಮೂಹಿಕವಾಗಿ ಧ್ವನಿ ಎತ್ತುವುದಿಲ್ಲ. ಬಹುಸಂಖ್ಯಾತ ಯುವವರ್ಗದವರಿಗೆ ಇದರೊಂದಿಗೆ ಯಾವುದೇ ಕೊಡ-ಕೊಳ್ಳುವಿಕೆ ಇಲ್ಲ. ಇದರ ಕಾರಣ ಅವರಿಗೆ ಧರ್ಮಬೋಧ ಮತ್ತು ಶತ್ರುಬೋಧ ಇಲ್ಲ. ಹಿಂದು ಸಮಾಜವೂ ಧರ್ಮರಹಿತವಾಗಿದೆ. ಹಿಂದೂಗಳು ತಮ್ಮ ಪ್ರಾಚೀನ ಇತಿಹಾಸದ ಬಗ್ಗೆ ಹೆಮ್ಮೆಪಡುವುದಿಲ್ಲ. ತಮ್ಮ ಸಂತರ ಅವಮಾನವಾದರೂ ಹಿಂದೂಗಳು ಬಾಯಿಮುಚ್ಚಿಕೊಂಡಿದ್ದಾರೆ. ಹಿಂದೂಗಳು ಕೇವಲ ಹಣ ಮತ್ತು ಕಾಮ ಇವುಗಳಲ್ಲಿ ಸಿಲುಕಿದ್ದಾರೆ. ಭಾರತದ ಕೆಲವು ಭಾಗಗಳಲ್ಲಿ ಹಿಂದೂಗಳ ಜನಸಂಖ್ಯೆ ವೇಗದಿಂದ ಕಡಿಮೆಯಾಗುತ್ತಿದೆ. ವಿಭಜನೆಯ ನಂತರ ಪಾಕಿಸ್ತಾನದಲ್ಲಿ ೫೦ ಲಕ್ಷ ಹಿಂದೂಗಳನ್ನು ಕೊಲ್ಲಲಾಯಿತು. ಅಲ್ಲಿನ ಹಿಂದೂಗಳು ೧ ಸಾವಿರದ ೪೦೦ ಕೋಟಿ ರೂಪಾಯಿಗಳ ಆಸ್ತಿ-ಪಾಸ್ತಿಯನ್ನು ಬಿಡಬೇಕಾಯಿತು. ಇನ್ನೊಂದೆಡೆ ಮಾತ್ರ ಪಾಕಿಸ್ತಾನದ ನಿರ್ಮಿತಿಯ ನಂತರ ಭಾರತದಲ್ಲಿ ಇನ್ನೂ ೧೩-೧೪ ಪಾಕಿಸ್ತಾನಗಳಾಗುವ ಮಾರ್ಗದಲ್ಲಿವೆ. ಭಾರತ ಮತ್ತೊಮ್ಮೆ ವಿಭಜನೆಯ ಅಂಚಿನಲ್ಲಿದೆ. ತಮ್ಮ ಸಂಸ್ಕೃತಿಯ ಬಗೆಗಿನ ಹಿಂದೂಗಳಲ್ಲಿನ ಶ್ರದ್ಧೆ ಹೆಚ್ಚಾಗಬೇಕೆಂದು, ನಾವು ದೇವಸ್ಥಾನಗಳಲ್ಲಿ ದೀಪಗಳನ್ನು ಬೆಳಗಿಸುವ ಯೋಜನೆಯನ್ನು ಆರಂಭಿಸಿದ್ದೇವೆ. ದುರ್ಲಕ್ಷಿತ ದೇವಸ್ಥಾನಗಳಲ್ಲಿ ದೇವತೆಗಳ ಪೂಜೆಯನ್ನು ಮಾಡಿ ನಾವು ದೀಪವನ್ನು ಬೆಳಗಿಸುತ್ತೇವೆ. ಹಿಮಾಚಲ ಪ್ರದೇಶ ರಾಜ್ಯದಿಂದ ನಾವು ಈ ಯೋಜನೆಯನ್ನು ಆರಂಭಿಸಿದ್ದೇವೆ”, ಎಂದು ಹೇಳಿದರು.
ಮಹಿಳೆಯ ಎದೆಗೆ ಸ್ಪರ್ಶಿಸುವುದು ಅತ್ಯಾಚಾರದ ಪ್ರಯತ್ನವಲ್ಲ! – ಉಚ್ಚ ನ್ಯಾಯಾಲಯ : Attempt to Rape
ಅಮರಕಂಟಕ (ಮಧ್ಯಪ್ರದೇಶ)ಇಲ್ಲಿನ ನರ್ಮದಾ ಉಗಮ ದೇವಸ್ಥಾನದ ಚಿನ್ನ ಮತ್ತು ಬೆಳ್ಳಿ ನಾಪತ್ತೆ! : Amarkantak Temple Donation Scam
ಬೆಂಗಳೂರಿನಲ್ಲಿ ದೇಶದ ಮೊದಲ ‘ಎಐ’ ವಿಶ್ವವಿದ್ಯಾಲಯ ಆರಂಭ ! : Karnataka AI University
ಆಗಸ್ಟ್ ೯ ರ ಒಳಗಾಗಿಯೇ ಶ್ರೀಕೃಷ್ಣ ಮಂದಿರದ ನಿರ್ಮಾಣದ ದಿನಾಂಕವನ್ನು ಘೋಷಿಸಿದರೆ, ಕರಸೇವೆಯ ಅಗತ್ಯವೇ ಇರುವುದಿಲ್ಲ ! – ಕಾಳಿ ಸೇನಾ : Kali Sena
ಗುಜರಾತ್ ನ ಪ್ರಸಿದ್ಧ ಶಕ್ತಿಪೀಠ ಅಂಬಾಜಿ ದೇವಸ್ಥಾನದಲ್ಲೂ ನೋಟು ಎಣಿಕೆಯ ಸಮಯದಲ್ಲಿ ೨ ತಿಂಗಳ ಹಿಂದೆ ಕಳ್ಳತನ ನಡೆದಿರುವುದು ಬಹಿರಂಗ ! : Ambaji Temple Donation Theft
ಸಮಾಜವಾದಿ ಪಕ್ಷದ ಅಧಿಕಾರಾವಧಿಯಲ್ಲಿ ‘ವಕ್ಫ್ ಮಂಡಳಿ’ಯ ಶತಕೋಟಿ ರೂಪಾಯಿಗಳ ಹಗರಣ! – ಮೌಲಾನಾ ಶಹಾಬುದ್ದೀನ ರಿಜ್ವಿ ಬರೇಲವಿ