ಹಿಂದೂ ರಾಷ್ಟ್ರದ ಕಾರ್ಯವನ್ನು ತಡೆಯಲು ‘ಹಿಂದೂ ಭಯೋತ್ಪಾದನೆಯ’ ಸಂಚು ರೂಪಿಸುವ ಪ್ರಯತ್ನ ! – ಅಭಯ ವರ್ತಕ, ಧರ್ಮಪ್ರಚಾರಕರು, ಸನಾತನ ಸಂಸ್ಥೆ

ವೈಶ್ವಿಕ ಹಿಂದೂ ರಾಷ್ಟ್ರ ಉತ್ಸವ – ಎರಡನೇ ದಿನ (ಜೂನ್ 25): ಅನುಭವ ಕಥನ ಮತ್ತು ಉಪಾಸನೆಯ ಮಹತ್ವ

ಸಂಝೌತಾ ಎಕ್ಸ್‌ಪ್ರೆಸ್ ಬಾಂಬ್ ಸ್ಫೋಟ, ಅಜ್ಮೀರ್ ಬಾಂಬ್ ಬ್ಲಾಸ್ಟ್, ಮಾಲೆಗಾಂವ್ ಸ್ಫೋಟ ಪ್ರಕರಣ ಅಥವಾ ಡಾ. ದಾಭೋಲ್ಕರ್ ಹತ್ಯೆ ಮತ್ತು ಕಾ. ಪನ್ಸಾರೆ ಹತ್ಯೆ ಪ್ರಕರಣವಿರಲಿ, ವಿವಿಧ ಪ್ರಕರಣಗಳಲ್ಲಿ ಅಮಾಯಕ ಹಿಂದೂಗಳನ್ನು ಬಂಧಿಸಲಾಯಿತು; ಆದರೆ ಅವರ ವಿರುದ್ಧ ಯಾವುದೇ ಸಾಕ್ಷ್ಯ ಸಿಕ್ಕಿಲ್ಲ. ಆದರೆ ಅವರ ಜೀವನ ಹಾಳಾಯಿತು. ಹಿಂದೂ ಸಂಘಟನೆಗಳ ಕಾರ್ಯಕರ್ತರನ್ನು ಜೈಲಿಗೆ ಹಾಕುವುದು ಮತ್ತು ಈ ಬಗ್ಗೆ ‘ಹಿಂದೂ ಭಯೋತ್ಪಾದನೆ’ ಎಂಬ ಸುಳ್ಳು ಕಥೆಯನ್ನು ಕಟ್ಟಿ ಅವರ ಮಾನಹಾನಿ ಮಾಡುವುದು, ಇದು ಹಿಂದೂ ವಿರೋಧಿ ಶಕ್ತಿಗಳ ಪಿತೂರಿಯಾಗಿತ್ತು. ಇದರಿಂದ ಹಿಂದೂ ರಾಷ್ಟ್ರದ ಕಾರ್ಯವನ್ನು ನಿಲ್ಲಿಸಲು ಅವರು ಬಯಸಿದ್ದರು, ಎಂದು ಸನಾತನ ಸಂಸ್ಥೆಯ ಧರ್ಮಪ್ರಚಾರಕ ಶ್ರೀ. ಅಭಯ ವರ್ತಕ ಅವರು ‘ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವ’ದಲ್ಲಿ ಹೇಳಿದರು,

ತಮ್ಮ ಮಾತನ್ನು ಮುಂದುವರೆಸಿ, “ಡಾ. ದಾಭೋಲ್ಕರ್ ಹತ್ಯೆ ಮತ್ತು ಕಾ. ಪನ್ಸಾರೆ ಹತ್ಯೆ ಪ್ರಕರಣಗಳಲ್ಲಿ 25ಕ್ಕೂ ಹೆಚ್ಚು ಅಮಾಯಕ ಹಿಂದೂ ಕಾರ್ಯಕರ್ತರು ಇನ್ನೂ ಜೈಲಿನಲ್ಲಿದ್ದಾರೆ. ಅವರು ಯಾವುದೇ ಸಂಘಟನೆಗೆ ಸೇರಿದವರಾಗಿದ್ದರೂ, ‘ಹಿಂದೂ ಭಯೋತ್ಪಾದನೆ’ಯ ಕಥೆಯನ್ನು ಸಿದ್ಧಪಡಿಸಲು ಅವರು ಹಿಂದೂಗಳೇ ಆಗಿದ್ದಾರೆ. ಅಂತಹ ಹಿಂದುತ್ವನಿಷ್ಠರ ಹಿಂದೆ ನಮ್ಮ ಭಾವನೆಗಳು ಯಾವಾಗಲೂ ಇರಬೇಕು ಮತ್ತು ಅವರನ್ನು ಬಿಡಿಸುವುದು ಪ್ರತಿಯೊಂದು ಹಿಂದೂ ಸಂಘಟನೆಗೆ ತನ್ನ ಕರ್ತವ್ಯ ಎಂದು ಅನಿಸಬೇಕು. ಇಂದು ಸುದ್ದಿ ವಾಹಿನಿಗಳು ಹಿಂದೂ ಸಂಘಟನೆಗಳ ಪರವಾಗಿಲ್ಲ. ಹಾಗಾಗಿ ಹಿಂದುತ್ವನಿಷ್ಠರ ಮೇಲೆ ಸುಳ್ಳು ಕಥೆಗಳಿಗೆ ಸತ್ಯದ ಆಧಾರದ ಮೇಲೆ ಎದುರಿಸಬೇಕಾಗಿದೆ. ಅದಕ್ಕಾಗಿ ನಮ್ಮ ‘ಇಕೋಸಿಸ್ಟಮ್’ಯನ್ನು ಬಲಪಡಿಸುವುದು ಅಗತ್ಯ. ನಮ್ಮ ಮಾರ್ಗ ಧರ್ಮದ ಕಡೆಯಾಗಿದೆ. ಆದ್ದರಿಂದ ನಮಗೆ ತೊಂದರೆ ಕೊಡಲು ಪ್ರಯತ್ನಿಸಬಹುದು; ಆದರೆ ಅವರು ನಮ್ಮನ್ನು ನಾಶಮಾಡಲು ಸಾಧ್ಯವಿಲ್ಲ. ಧರ್ಮದ ಮಾರ್ಗದಲ್ಲಿ ನಡೆಯುತ್ತಿರುವುದರಿಂದ ಯಾರೂ ನಮಗೆ ಹಾನಿ ಮಾಡಲಾರರು. ಈ ಹೋರಾಟದಲ್ಲಿ ನಾವು ಗೆಲ್ಲುತ್ತೇವೆ ಮತ್ತು ಹಿಂದೂ ರಾಷ್ಟ್ರವು ಖಂಡಿತವಾಗಿಯೂ ಸ್ಥಾಪನೆಯಾಗುತ್ತದೆ.” ಎಂದು ಹೇಳಿದರು.