ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವ ವಿಶೇಷ : ಹಿಂದು ಸಂಸ್ಕೃತಿ ಮತ್ತು ಹಿಂದೂ ಪ್ರತೀಕಗಳನ್ನು ರಕ್ಷಿಸುವ ಕಾರ್ಯ

ಹಿಂದ್ ರಕ್ಷಕ ಸಂಘಟನೆಯ ಕಾರ್ಯಕರ್ತರು ರಾಷ್ಟ್ರ, ಧರ್ಮ ಮತ್ತು ಸಂಸ್ಕೃತಿಯ ರಕ್ಷಕರಾಗಿದ್ದಾರೆ. ಸಂಘಟನೆಯ ವತಿಯಿಂದ ವರ್ಷದಾದ್ಯಂತ ಮುಖ್ಯವಾಗಿ ೩ ಉಪಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ. ಹೋಳಿಯಲ್ಲಿನ ಅಯೋಗ್ಯ ಆಚರಣೆಗಳನ್ನು ತಡೆಗಟ್ಟಲು ಕುಟುಂಬದೊಂದಿಗೆ ಆ ದಿನ ರಾಧಾ-ಕೃಷ್ಣ ಫಾಗ್ (ಸಾಂಪ್ರದಾಯಿಕ ನೃತ್ಯ) ಮೆರವಣಿಗೆ ನಡೆಸುವುದು, ಮಹಾಪುರುಷರ ಮಾಹಿತಿ ಇರುವ ೩ ಲಕ್ಷ ಪಠ್ಯಪುಸ್ತಕಗಳನ್ನು ೬೦ ಸಾವಿರ ವಿದ್ಯಾಥಿಗಳಿಗೆ ವಿತರಣೆ ಮಾಡುವುದು ಮತ್ತು ಅಯೋಗ್ಯ ಆಚರಣೆಗಳನ್ನು ತಡೆಗಟ್ಟಲು ಸಾಂಪ್ರದಾಯಿಕ ಉಡುಪುಗಳಲ್ಲಿ ಧಾರ್ಮಿಕ ಗೀತೆಗಳಿಗನುಸಾರ ಆಡಲಾಗುವ ಗರಬಾವನ್ನು(ಗರಬಾ ನೃತ್ಯ) ಆಯೋಜಿಸುವುದು. ಈಗ ಮಾಲವಾಂಚಲ(ರಾಜಸ್ಥಾನ) ದಲ್ಲಿ ೫೦೦ ಕ್ಕಿಂತ ಹೆಚ್ಚು ರಾಧಾ-ಕೃಷ್ಣ ಫಾಗ (ಸಾಂಪ್ರದಾಯಿಕ ನೃತ್ಯ) ಮೆರವಣಿಗೆಗಳಲ್ಲಿ(ಯಾತ್ರೆಗಳಲ್ಲಿ) ೨೫ ಸಾವಿರಕ್ಕಿಂತ ಹೆಚ್ಚು ಹಿಂದೂಗಳು ಭಾಗವಹಿಸುತ್ತಾರೆ; ಆದರೆ ಈ ಯಾತ್ರೆಯನ್ನು ಆರಂಭಿಸಲು ಆಗಿನ ಕಾಂಗ್ರೇಸ್ ಸರಕಾರದ ವಿರುದ್ಧ ಬಹಳ ಹೋರಾಡಬೇಕಾಯಿತು. ಮಾಲವಾಂಚಲನಲ್ಲಿನ ಒಂದು ವನವಾಸಿ ಭಾಗದಲ್ಲಿ ಬಡತನ ಮತ್ತು ನೀರಿನ ಅಭಾವದಿಂದಾಗಿ ದೊಡ್ಡ ಪ್ರಮಾಣದಲ್ಲಿ ಮತಾಂತರ ನಡೆದಿತ್ತು. ಅಲ್ಲಿನ ೧ ಸಾವಿರದ ೨೩೨ ಊರುಗಳಲ್ಲಿ ಶಿವಾಲಯಗಳ ಸ್ಥಾಪನೆ ಮಾಡಿ, ಹಾಗೆಯೇ ನೀರಿನ ದೊಡ್ಡ ಕುಂಡಗಳನ್ನು ಕಟ್ಟಿ ಸಂಘಟನೆ ಮತಾಂತರವನ್ನು ತಡೆಗಟ್ಟುವಲ್ಲಿ ಯಶಸ್ವಿಯಾಯಿತು. ದೇವತೆಗಳನ್ನು ಅವಮಾನಿಸುವ ಹಿಂದೂದ್ವೇಷಿ ಹಾಸ್ಯಕಲಾವಿದ ಮುನ್ನವರ ಫಾರುಕಿ ವಿರುದ್ಧವೂ ನಾವು ನಿಲುವು ತಳೆದಿದ್ದೇವೆ.
Making the youth protectors of Rashtra, Dharma, and Sanskruti is our main objective ! – @aklavyagaur President, Hind Rakshak Sangathan, Indore, Madhya Pradesh
Vaishvik Hindu Rashtra Mahotsav 2024 I Goa
🚩Hind Rakshak Sangathan is involved in protecting the sanctity of our… pic.twitter.com/ReaOTcA83q
— Sanatan Prabhat (@SanatanPrabhat) June 25, 2024
ಮಹಾರಾಷ್ಟ್ರ : ಅಕೋಲಾ ಮಹಾನಗರ ಪಾಲಿಕೆಯ ಸ್ಥಾಯಿ ಸಮಿತಿ ಸಭಾಂಗಣಕ್ಕೆ ನೀಡಲಾದ ‘ಟಿಪ್ಪು ಸುಲ್ತಾನ್’ ಹೆಸರು ಅಕ್ರಮ!
ಮಹಾರಾಷ್ಟ್ರ : ದೇವಸ್ಥಾನ ಭೂಮಿಗೆ ಸಂಬಂಧಿಸಿದಂತೆ ಸರಕಾರಿ ದೇವಸ್ಥಾನ ಸಮಿತಿಯ ಮೊದಲ ಸಭೆ ಮುಕ್ತಾಯ!
ಕಳೆದ 24 ಗಂಟೆಗಳಲ್ಲಿ ಲವ್ ಜಿಹಾದ್ನ 4 ಮತ್ತು ಮತಾಂತರದ 2 ಘಟನೆಗಳು ಬೆಳಕಿಗೆ! : Love Jihad
ಹಸುವನ್ನು ರಾಷ್ಟ್ರಮಾತೆ ಎಂದು ಘೋಷಿಸಿ! – ಪೂ. ಕಿಶೋರ್ಶಾಸ್ತ್ರಿ ದವೆ : Declare Cow Mother of Nation
೬೦೦ ಮಿಲಿಯನ್ ಲೀಟರ್ ಕೊಳಚೆ ನೀರನ್ನು ನೇರವಾಗಿ ನದಿಗೆ ಬಿಡುತ್ತಿರುವುದರಿಂದ ಪುಣೆ ನಗರದ ನದಿಗಳು ಮಾಲಿನ್ಯದ ಸುಳಿಗೆ!
ಉತ್ತರ ಪ್ರದೇಶ : ಭಗವಾನ್ ಹನುಮಂತನ ಮೂರ್ತಿ ಧ್ವಂಸ ಪ್ರಕರಣದಲ್ಲಿ ಅಸದ್ ವಿರುದ್ಧ ಆರೋಪ