Saliva Mixed Sugarcane Juice Served: ಮುಸ್ಲಿಂ ಅಂಗಡಿಯವನಿಂದ ಕಬ್ಬಿನ ಜ್ಯೂಸ್ ನಲ್ಲಿ ಉಗುಳು ಮಿಶ್ರಣ !

ಹಿಂದೂ ದಂಪತಿಗಳು ಪ್ರತಿಭಟಿಸಿದ್ದರಿಂದ, ಅವರೊಂದಿಗೆ ಅಸಭ್ಯವಾಗಿ ವರ್ತಿಸಿದ !

ನೊಯ್ಡಾ (ಉತ್ತರ ಪ್ರದೇಶ) – ಉತ್ತರ ಪ್ರದೇಶದ ಗೌತಮ್ ಬುದ್ಧ ನಗರ ಜಿಲ್ಲೆಯ ನೋಯ್ಡಾ ಸೆಕ್ಟರ್ 121 ರಲ್ಲಿ ‘ಕ್ಲಿಯೊ ಕೌಂಟಿ ಸೊಸೈಟಿ’ ಬಳಿ ಕಬ್ಬಿನ ರಸವನ್ನು ಮಾರಾಟ ಮಾಡುತ್ತಿದ್ದ ಮುಸ್ಲಿಂ ಅಂಗಡಿಯವನು ಕಬ್ಬಿನ ರಸದೊಂದಿಗೆ ಉಗುಳನ್ನು ಬೆರೆಸಿ ಹಿಂದೂ ದಂಪತಿಗಳಿಗೆ ಕುಡಿಯಲು ಕೊಟ್ಟನು. ಹಿಂದೂ ದಂಪತಿಗಳು ಪ್ರತಿಭಟಿಸಿದಾಗ, ಮುಸ್ಲಿಂ ಅಂಗಡಿಯವನು ಮತ್ತು ಅವನ ಮುಸ್ಲಿಂ ಸಹಚರನು ಹಿಂದೂ ದಂಪತಿಗಳೊಂದಿಗೆ ಅನುಚಿತವಾಗಿ ವರ್ತಿಸಿದರು. ಇದಾದ ನಂತರ ಸುತ್ತಮುತ್ತಲಿನ ಜನ ಜಮಾಯಿಸಿದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರು ದಾಖಲಿಸಿಕೊಂಡ ಪೊಲೀಸರು ಆರೋಪಿಗಳಾದ ಸಾಹೇಬ್ ಆಲಂ ಮತ್ತು ಜಮ್ಶೆದ್ ಖಾನ್ ಅವರನ್ನು ಬಂಧಿಸಿದ್ದಾರೆ.

ಸೆಕ್ಟರ್ 121ರಲ್ಲಿನ ‘ಕ್ಲಿಯೊ ಕೌಂಟಿ ಸೊಸೈಟಿ’ಯಲ್ಲಿ ವಾಸವಿದ್ದ ಕ್ಷಿತಿಜ ಭಾಟಿಯಾ ಇವರು ಶನಿವಾರ ಸಂಜೆ ಪತ್ನಿಯೊಂದಿಗೆ ಗೇಟ್‌ ಸಂಖ್ಯೆ 1 ರ ಹೊರಗೆ ಕಬ್ಬಿನ ಜ್ಯೂಸ್ ಕುಡಿಯಲು ಆರೋಪಿಗಳ ಅಂಗಡಿಗೆ ತೆರಳಿದ್ದರು. ಅವರು ಎರಡು ಲೋಟ ಕಬ್ಬಿನ ರಸ ಕೇಳಿದರು. ಕಬ್ಬಿನ ಜ್ಯೂಸ್ ಮಾಡುವಾಗ ಅಂಗಡಿಯವನು ಗ್ಲಾಸಿಗೆ ಮೂರ್ನಾಲ್ಕು ಬಾರಿ ಉಗುಳುವುದನ್ನು ನೋಡಿದನು. ಅಂಗಡಿಯವನ ಈ ಕೃತ್ಯವನ್ನು ಭಾಟಿಯಾ ದಂಪತಿ ಪ್ರತಿಭಟಿಸಿದರು. ಅಂಗಡಿಯವನು ಮತ್ತು ಅವನ ಸಹೋದ್ಯೋಗಿ ಅವನನ್ನು ನಿಂದಿಸಲು ಪ್ರಾರಂಭಿಸಿದರು. ಜನರ ಗುಂಪನ್ನು ನೋಡಿದ ಇಬ್ಬರೂ ಆರೋಪಿಗಳು ಅಂಗಡಿಯನ್ನು ಬಿಟ್ಟು ಓಡಿಹೋದರು.

ಘಟನೆಯ ವಿರುದ್ಧ ಭಾಟಿಯಾ ದಂಪತಿಗಳು ಪೊಲೀಸರಿಗೆ ದೂರು ನೀಡಿದ್ದಾರೆ. ಈ ಘಟನೆ ತನ್ನ ಧರ್ಮ ಮತ್ತು ಸ್ವಭಾವದ ದೃಷ್ಟಿಯಿಂದ ಸೂಕ್ತವಲ್ಲ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ. ಈ ಪ್ರಕರಣದಲ್ಲಿ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

ಸಂಪಾದಕೀಯ ನಿಲುವು

ಈಗ ಜನರು ಅಂತಹ ಅಂಗಡಿಗಳನ್ನು ಬಹಿಷ್ಕರಿಸಿದರೆ ಆಶ್ಚರ್ಯಪಡಬೇಡಿ !