‘Son of Hamas’ Mosab Hassan Yousef : ನಾವು ಇಸ್ಲಾಂ ವಿರುದ್ಧ ಹೋರಾಡದಿದ್ದರೆ, ಜಗತ್ತಿಗೆ ಅಪಾಯ ! – ಮೊಸಾಬ್ ಹಸನ್ ಯೂಸೆಫ್

ಹಮಾಸ್ ಸಂಸ್ಥಾಪಕನ ಪುತ್ರನಿಂದ ಮಹತ್ವದ ಹೇಳಿಕೆ; ಇಸ್ರೇಲ್ ಗೆ ಬೆಂಬಲ !

ಮೊಸಾಬ್ ಹಸನ್ ಯೂಸೆಫ್

ಟೆಲ್ ಅವಿವ್ (ಇಸ್ರೇಲ್) – ಜಿಹಾದಿ ಭಯೋತ್ಪಾದಕ ಸಂಘಟನೆ ಹಮಾಸ್‌ನ ಸಹ ಸಂಸ್ಥಾಪಕ ಶೇಖ್ ಹಸನ್ ಯೂಸೆಫ್ ಅವರ ಪುತ್ರ ಮೊಸಾಬ್ ಹಸನ್ ಯೂಸೆಫ್ ಅವರು ‘ಹಮಾಸ್ ಹೇಗೆ ಭಯೋತ್ಪಾದನೆಯನ್ನು ಹಬ್ಬಿಸುತ್ತದೆ ?’ ಈ ಬಗ್ಗೆ ಬಹಿರಂಗ ಪಡಿಸಿ ಮಹತ್ವಪೂರ್ಣ ಹೇಳಿಕೆ ನೀಡಿದ್ದಾರೆ. ಪ್ಯಾಲೆಸ್ತೀನ್ ಇಸ್ರೇಲ್ ನ ವಿನಾಶದ ಮೇಲೆ ಅವಲಂಬಿತವಾಗಿದೆ’ ಎಂದು ‘ಗ್ರೀನ್ ಪ್ರಿನ್ಸ್’ ಎಂದೇ ಖ್ಯಾತರಾಗಿರುವ ಮೊಸಾಬ್ ಹೇಳಿದ್ದಾರೆ. ಪ್ಯಾಲೆಸ್ಟೈನ್‌ಗೆ ಯಾವುದೇ ವ್ಯಾಖ್ಯಾನವಿದ್ದರೆ, ಅದರ ಅರ್ಥ ‘ಇಸ್ರೇಲ್‌ನ ನಾಶ’ ಎಂದಾಗುತ್ತದೆ. ‘ಜೆರುಸಲೆಂ ಪೋಸ್ಟ’ ಈ ಕಾರ್ಯಕ್ರದಲ್ಲಿ ಆತ ಮಾತನಾಡುತ್ತಿದ್ದ. “ಒಂದು ವೇಳೆ ನಾವು ಇಸ್ಲಾಂ ವಿರುದ್ಧ ಹೋರಾಡದಿದ್ದರೆ, ಜಗತ್ತಿಗೆ ಅಪಾಯವಿದೆ. ನಾವು ಎಚ್ಚೆತ್ತುಕೊಳ್ಳಬೇಕು ಮತ್ತು ನಾವು ಈ ಅಸ್ತಿತ್ವದ ಅಪಾಯವನ್ನು ನಿರ್ಲಕ್ಷಿಸಿದರೆ ಅಥವಾ ನಿರಾಕರಿಸಿದರೆ, ನಾವು ಅದನ್ನು ಎದುರಿಸಬೇಕಾಗುತ್ತದೆ’, ಎಂದು ಆತ ಈ ಸಮಯದಲ್ಲಿ ಹೇಳಿದ.

1. ಮೊಸಾಬ್ ಮಾತು ಮುಂದುವರೆಸಿ, ಪ್ಯಾಲೆಸ್ತೀನ್ ಎಂದರೇನು ? ಇದು ಜನಾಂಗೀಯ ಗುಂಪೇ ? ಒಂದು ಧರ್ಮವೇ ? ನಿರ್ದಿಷ್ಟ ಭಾಷೆ ಇದೆಯೇ ? ಅವರ ಬಳಿ (ಪ್ಯಾಲೆಸ್ತೀನ್) ಧರ್ಮಗ್ರಂಥ ಇದೆಯೇ ? ಇದು ರಾಷ್ಟ್ರವೇ ? ಇದು ಒಂದು ದೇಶವಾಗಿತ್ತೇ ? ಇವುಗಳಲ್ಲಿ ಯಾವುದೂ ಇಲ್ಲದಿದ್ದರೆ, ಪ್ಯಾಲೆಸ್ತೀನ್ ಎಂದರೇನು ? ಪ್ಯಾಲೆಸ್ಟೈನ್ ಉದ್ದೇಶವೇನು ? ಎಂದು ನಾನು ನಿಮಗೆ ಕೇಳುತ್ತಿದ್ದೇನೆ ಎಂದು ಹೇಳಿದ.

2. ಮೊಸಾಬ್ ಪ್ರಕಾರ, ‘ಪ್ಯಾಲೆಸ್ತೀನ್ ಅಥಾರಿಟಿ’ ಹಮಾಸ್‌ಗಿಂತ ದೊಡ್ಡ ಅಪಾಯವಾಗಿದೆ. ‘ಪ್ಯಾಲೆಸ್ಟೀನಿಯನ್ ಲಿಬರೇಶನ್ ಆರ್ಗನೈಸೇಶನ್’ನ ಎಲ್ಲಾ ಜಾಗತಿಕ ಅರಾಜಕತೆಗಳನ್ನು ‘ಪಿಎ’ ನಿರ್ವಹಿಸುತ್ತದೆ. PA ಹಮಾಸ್ ಅಥವಾ ‘ಮುಸ್ಲಿಂ ಬ್ರದರ್‌ಹುಡ್’ ನಿಂದ ಹುಟ್ಟಿಕೊಂಡ ಯಾವುದೇ ಇತರ ಗುಂಪಿನಿಂದ ಬರುವ ಅದೇ ಭಯೋತ್ಪಾದನೆಯಿಂದ ಬಂದಿದೆ.

3. ಈ ಕಾರ್ಯಕ್ರಮದಲ್ಲಿ, ಮೊಸಾಬ್ ಸುಮಾರು 14 ಶತಮಾನಗಳ ಮುಸ್ಲಿಮರ ಕೈಯಲ್ಲಿ ಯಹೂದಿಗಳ ಹತ್ಯಾಕಾಂಡದ ಇತಿಹಾಸವನ್ನು ವಿವರಿಸಿದ. ಯಹೂದಿ ಜನರು ಅದನ್ನು ಸ್ವೀಕರಿಸಲು ನಿರಾಕರಿಸಿದರು ಎಂದು ಅವರು ಟೀಕಿಸಿದ. ಆತ, “ಯಹೂದಿಗಳು ಈ ಸತ್ಯವನ್ನು ಒಪ್ಪಿಕೊಂಡರೆ, ಅವರು ಬಹುಸಂಖ್ಯಾತ ಮುಸ್ಲಿಮರನ್ನು ಎದುರಿಸಬೇಕಾಗುತ್ತದೆ” ಎಂದು ಆತ ಹೇಳಿದ. ಇದೀಗ ಇಸ್ರೇಲ್ ವಿರುದ್ಧ ಎಷ್ಟು ಅಪಪ್ರಚಾರವಿದೆ ಎಂದರೆ ಜನರು ದಿನಕ್ಕೆ ಸಾವಿರಾರು ಬಾರಿ ಅದನ್ನು ನೋಡಿದಾಗ ಅವರು ಅದನ್ನು ನಂಬಲು ಪ್ರಾರಂಭಿಸುತ್ತಾರೆ.

ಮೊಸಾಬ್ ಇತಿಹಾಸ

ಮೊಸಾಬ್ ಮಾಜಿ ಪ್ಯಾಲೆಸ್ತೀನ್ ಭಯೋತ್ಪಾದಕನಾಗಿದ್ದ. 1997 ನಂತರ ಆತ ಇಸ್ರೇಲ್‌ಗೆ ತೆರಳಿ 2007 ರಲ್ಲಿ ಅಮೇರಿಕಾಗೆ ತೆರಳುವವರೆಗೂ ಇಸ್ರೇಲಿ ಭದ್ರತಾ ಗುಂಪು ‘ಶಿನ್ ಬೆಟ್‌’ಗೆ ಗೂಢಚಾರರಾಗಿ ಕೆಲಸ ಮಾಡಿದ.

ಸಂಪಾದಕೀಯ ನಿಲುವು

ಹಮಾಸ್ ಸಂಸ್ಥಾಪಕನ ಮಗ ಹಿಂದುತ್ವನಿಷ್ಠನಾಗಿರದೇ ಮುಸ್ಲಿಂ ಆಗಿದ್ದಾನೆ ಮತ್ತು ಅವನು ಹಮಾಸ್‌ನ ಮಾಜಿ ಭಯೋತ್ಪಾದಕ ಕೂಡ ಆಗಿದ್ದ. ಅವನು ಇದನ್ನು ಹೇಳುತ್ತಿದ್ದಾನೆ. ಈ ಬಗ್ಗೆ ಭಾರತದಲ್ಲಿ ಮಾತ್ರವಲ್ಲ, ವಿಶ್ವದ ಸೆಕ್ಯುಲರ್‌ವಾದಿಗಳು, ಪ್ರಗತಿ (ಅಧೊಗತಿ)ಪರರು ಮತ್ತು ಇಸ್ಲಾಂ ಪ್ರೇಮಿಗಳು ಎಂದಿಗೂ ನಂಬುವುದಿಲ್ಲ ಎಂಬುದು ಅಷ್ಟೇ ಸತ್ಯ !