ಮತದಾನದ ಕಾರ್ಯದಲ್ಲಿ ಇರುವ ೨೫ ಸಿಬ್ಬಂದಿಗಳ ಸಾವು

ನವ ದೆಹಲಿ – ಕಳೆದ ೪ ದಿನದಲ್ಲಿ ಉಷ್ಣತೆ ಮತ್ತು ಉಷ್ಣಘಾತದಿಂದ ೭ ರಾಜ್ಯಗಳಲ್ಲಿನ ೩೨೦ ಕ್ಕಿಂತಲೂ ಹೆಚ್ಚಿನ ಜನರು ಸಾವನ್ನಪ್ಪಿದ್ದಾರೆ. ಇದರಲ್ಲಿ ಮತದಾನ ಪ್ರಕ್ರಿಯೆಯಲ್ಲಿ ಕಾರ್ಯನಿರತ ೨೫ ಸಿಬ್ಬಂದಿಗಳು ಒಂದೇ ದಿನದಲ್ಲಿ ಶಾಖದಿಂದ ಸಾವನ್ನಪ್ಪಿದ್ದಾರೆ.
೧. ಉತ್ತರಪ್ರದೇಶದಲ್ಲಿ ಕಳೆದ ೩ ದಿನದಲ್ಲಿ ೧೦೦ ಜನರು ಉಷ್ಣತೆಯಿಂದ ಸಾವನ್ನಪ್ಪಿದ್ದಾರೆ. ಬಿಹಾರದಲ್ಲಿ ಕಳೆದ ೨ ದಿನದಲ್ಲಿ ೬೩ ಜನರು ಸಾವನ್ನಪ್ಪಿದ್ದಾರೆ. ರಾಜಸ್ಥಾನದಲ್ಲಿ ೬೦, ಜಾರ್ಖಂಡದಲ್ಲಿ ೩೭, ಒಡಿಸ್ಸಾದಲ್ಲಿ ೧೮, ಮಧ್ಯಪ್ರದೇಶದಲ್ಲಿ ೨ ಮತ್ತು ದೆಹಲಿಯಲ್ಲಿ ಕಳೆದ ೪ ದಿನದಲ್ಲಿ ಒಬ್ಬರು ಸಾವನ್ನಪ್ಪಿದ್ದಾರೆ.
೨. ಜಾರ್ಖಂಡದಲ್ಲಿ ೧ ಸಾವಿರದ ೩೨೬ ಜನರು ಉಷ್ಣತೆಯ ಪರಿಣಾಮದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅನೇಕ ಸ್ಥಳಗಳಲ್ಲಿ ಉಷ್ಣತೆಯಿಂದಾಗಿ ವಾರ್ಡಿನಲ್ಲಿ ಜಾಗಗಳು ಖಾಲಿ ಇಲ್ಲ.
೩. ವಾರಣಾಸಿಯ ಮಣಿಕರ್ಣಿಕ ಘಾಟದಲ್ಲಿ ಪ್ರತಿದಿನ ಅಂತ್ಯ ಸಂಸ್ಕಾರಕ್ಕಾಗಿ ೫ ಪಟ್ಟು ಹೆಚ್ಚಿನ ಶವಗಳು ಬರುತ್ತವೆ. ಮಹಾಸ್ಮಶಾನ ಸೇವಾ ಸಮಿತಿಯ ಕಾರ್ಯದರ್ಶಿ ಬಿಹಾರಿಲಾಲ ಗುಪ್ತ ಇವರು, ”ಕಳೆದ ೨ ದಿನದಿಂದ ಹೆಚ್ಚಿರುವ ಉಷ್ಣತೆಯಿಂದ ಒತ್ತಡ ಹೆಚ್ಚಾಗಿದೆ.” ಎಂದು ಹೇಳಿದರು. ಡೋಮ ರಾಜ ಓಂ ಚೌದರಿ ಇವರು, ಕೊರೊನಾ ಮಹಾಮಾರಿಯ ನಂತರ ಮೊದಲ ಬಾರಿ ಅಂತ ಸಂಸ್ಕಾರಕ್ಕಾಗಿ ಇಷ್ಟೊಂದು ಜಂಗುಳಿ ಹೆಚ್ಚಾಗಿದೆ ಎಂದು ಹೇಳಿದರು.
೪. ಅಯೋಧ್ಯೆಯಲ್ಲಿ ಕಳೆದ ೫ ದಿನಗಳಲ್ಲಿ ೨೧ ಅಪರಿಚಿತ ಶವಗಳು ದೊರೆತಿವೆ. ಉಷ್ಣತೆಯಿಂದ ಅವರು ಸಾವನ್ನಪ್ಪಿದ್ದಾರೆ ಎಂದು ತಿಳಿದಿದೆ.
ಇಬ್ಬರು ಸ್ವಂತ ಹಿಂದೂ ಸಹೋದರಿಯರಿಗೆ ಕಿರುಕುಳ ನೀಡಿ ತಲೆಮರೆಸಿಕೊಂಡಿರುವ ಆರೋಪಿಯ ವಿರುದ್ಧ ಪ್ರಕರಣ ದಾಖಲು !
ಹಿಂದೂಗಳು ಕರೆ ನೀಡಿದ್ದ ‘ಭಟ್ಕಳ ಬಂದ್’ಗೆ ಉತ್ತಮ ಪ್ರತಿಕ್ರಿಯೆ: ಪ್ರತಿಭಟನಾ ಮೆರವಣಿಗೆಯಲ್ಲಿ ಸಾವಿರಾರು ಹಿಂದೂಗಳ ಭಾಗಿ!
ಯಾವುದೇ ಕಾರಣಕ್ಕೂ ನನಗೆ ನನ್ನ (ಹಿಂದೂ) ಧರ್ಮವನ್ನು ಬಿಡಲು ಸಾಧ್ಯವಿಲ್ಲ!
‘ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ’ ವಿರುದ್ಧ ಆರೋಪ ನಿರ್ಧರಿಸಲು ನ್ಯಾಯಾಲಯದ ಆದೇಶ
ಭಾರತದ ಗಡಿಯಲ್ಲಿ ಚೀನಾ ನಿರ್ಮಿತ ಕ್ಯಾಮೆರಾಗಳ ಅಳವಡಿಸಿದ ನೇಪಾಳ!
ಬಾಂಗ್ಲಾದೇಶಿ ವಲಸಿಗರ ಕೇಂದ್ರವಾಗಿರುವ ಮುಂಬಯಿ: ೧,೫೦೦ ಕ್ಕೂ ಹೆಚ್ಚು ಅಕ್ರಮ ವಲಸಿಗರ ಅಡ್ಡೆ!