ಪಾಕಿಸ್ತಾನದ ಪ್ರವಾಸದಲ್ಲಿರುವ ಅಝರ್ಬೈಜಾನ್ನ ವಿದೇಶಾಂಗ ಸಚಿವ ಜೆಹುನ್ ಬಾಯರಾಮೊವ ಇವರ ಹೇಳಿಕೆ

ಇಸ್ಲಾಮಾಬಾದ್ (ಪಾಕಿಸ್ತಾನ) – ಅಝರ್ಬೈಜಾನ್ ಕಾಶ್ಮೀರ ಸಮಸ್ಯೆಯ ಶಾಂತಿಯುತ ಪರಿಹಾರವನ್ನು ಬೆಂಬಲಿಸುತ್ತದೆ. ಕಾಶ್ಮೀರದ ಸಮಸ್ಯೆಯನ್ನು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ನಿರ್ಣಯಗಳಿಗೆ ಅನುಗುಣವಾಗಿ ಪರಿಹರಿಸಲಾಗುತ್ತದೆಯೆಂದು ನಮಗೆ ವಿಶ್ವಾಸವಿದೆಯೆಂದು ಅಝರ್ಬೈಜಾನ್ನ ವಿದೇಶಾಂಗ ಸಚಿವ ಜೆಹುನ್ ಬಾಯರಾಮೊವ ಇವರು ಮಂಡಿಸಿದರು. ಅವರು 2 ದಿನಗಳ ಕಾಲ ಪಾಕಿಸ್ತಾನದ ಪ್ರವಾಸದಲ್ಲಿದ್ದಾರೆ. ಅವರು ಪಾಕಿಸ್ತಾನದ ಉಪಪ್ರಧಾನಿ ಮತ್ತು ವಿದೇಶಾಂಗ ಸಚಿವ ಇಶಾಕ ದಾರ ಅವರೊಂದಿಗೆ ಪತ್ರಿಕಾಗೋಷ್ಠಿ ನಡೆಸಿದರು. ಈ ಸಮಯದಲ್ಲಿ ಅವರು ಕಾಶ್ಮೀರ ವಿಷಯದಲ್ಲಿ ಪಾಕಿಸ್ತಾನವನ್ನು ಬೆಂಬಲಿಸಿದರು.
ಭಾರತವು ಅರ್ಮೇನಿಯಾವನ್ನು ಬೆಂಬಲಿಸಿದಕ್ಕೆ ಅಝರಬೈಜಾನ್ ಅಸಮಾಧಾನ !
ಅಝರ್ಬೈಜಾನ್ ಭಾರತದ ಮೇಲೆ ಅಸಮಾಧಾನ ಹೊಂದುವ ಕಾರಣ ಅಝರ್ಬೈಜಾನ್ನ ಶತ್ರುವಾಗಿರುವ ಅರ್ಮೇನಿಯಾಗೆ ಭಾರತ ಬೆಂಬಲ ನೀಡಿದೆ. ಅಝರರ್ಬೈಜಾನ ಮತ್ತು ಅರ್ಮೇನಿಯಾ ಈ ಎರಡೂ ದೇಶಗಳ ನಡುವೆ ನಾಗೋರ್ನೋ-ಕಾರಾಬಾಖ ಹೆಸರಿನ ಪ್ರದೇಶದ ಬಗ್ಗೆ ವಿವಾದ ನಡೆಯುತ್ತಿದೆ. ಅವರ ನಡುವೆ ಹಲವು ಬಾರಿ ಯುದ್ಧಗಳು ನಡೆದಿವೆ. ಅರ್ಮೇನಿಯಾ ಭಾರತದಿಂದ ಅನೇಕ ಶಸ್ತ್ರಾಸ್ತ್ರಗಳನ್ನು ಖರೀದಿಸಿದೆ. ಈ ಸಂದರ್ಭದಲ್ಲಿ ಭಾರತ ಮತ್ತು ಅರ್ಮೇನಿಯಾ ನಡುವೆ ಅಂದಾಜು 6 ಸಾವಿರ ಕೋಟಿ ಮೌಲ್ಯದ ಒಪ್ಪಂದಕ್ಕೆ ಸಹಿ ಹಾಕಲಾಯಿತು. ಈ ರಕ್ಷಣಾ ಒಪ್ಪಂದದ ಬಗ್ಗೆ ಅಝರರ್ಬೈಜಾನ್ ತನ್ನ ಅಸಮಾಧಾನವನ್ನು ವ್ಯಕ್ತಪಡಿಸಿತ್ತು.
ಸಂಪಾದಕೀಯ ನಿಲುವುಕಾಶ್ಮೀರವು ಭಾರತದ ಅವಿಭಾಜ್ಯ ಅಂಗವಾಗಿದೆ, ಆದ್ದರಿಂದ ಇದರ ಬಗ್ಗೆ ಬೇರೆ ಯಾರೂ ಏನೂ ಹೇಳುವ ಅಗತ್ಯವಿಲ್ಲ, ಎಂದು ಭಾರತವು ಅಜೆರ್ಬೈಜಾನ್ ವಿದೇಶಾಂಗ ಸಚಿವರಿಗೆ ದೃಢವಾಗಿ ಹೇಳಬೇಕು ! |
ಜರ್ಮನಿ: ‘ಎಲ್ಜಿಬಿಟಿಕ್ಯೂ’ ಸಮುದಾಯದ ಮೆರವಣಿಗೆಗೆ ವ್ಯಾನ್ ನಿಂದ ಡಿಕ್ಕಿ ಹೊಡೆದ ಜಿಹಾದಿ – ಓರ್ವ ವ್ಯಕ್ತಿ ಸಾವು, ೧೬ ಮಂದಿಗೆ ಗಾಯ
‘ಪೇಟ್ರಿಯಾಟ್ ಇಂಟರ್ಸೆಪ್ಟರ್’ ಕ್ಷಿಪಣಿಗಳ ಕೊರತೆ; ಇರಾನ್ ಮೇಲಿನ ಬೃಹತ್ ದಾಳಿಯನ್ನು ತಡೆದ ಟ್ರಂಪ್
ಪಾಕಿಸ್ತಾನ: ಹಸಿವಿನ ದರದಲ್ಲಿ ಶೇಕಡಾ ೩೭% ರಷ್ಟು ಏರಿಕೆ ! – ವಿಶ್ವಸಂಸ್ಥೆ
ನೇಪಾಳದಿಂದ ಭಾರತೀಯ ಕರೆನ್ಸಿ ಮೇಲಿನ ನಿಷೇಧ ಹಿಂಪಡೆ
ಅಮೆರಿಕದ ಬೇಹುಗಾರಿಕೆ ಸಂಸ್ಥೆಯ ಮಾಜಿ ಅಧಿಕಾರಿಯ ಬಾಂಗ್ಲಾದೇಶದ ರಹಸ್ಯ ಭೇಟಿಯಿಂದ ಚರ್ಚೆಗೆ ವೇಗ
‘ಪ್ರಸ್ತುತ ಕೇಂದ್ರ ಸರಕಾರವು ಪಾಕಿಸ್ತಾನವನ್ನು ಅನುಸರಿಸುತ್ತಿದೆಯಂತೆ !’