|

ಚಂಡೀಗಢ್ (ಹರಿಯಾಣ) – ಹರಿಯಾಣಾದ ‘ಡೇರಾ ಸಚ್ಚಾ ಸೌದಾ’ ಸಂಪ್ರದಾಯದ ಮುಖ್ಯಸ್ಥ ಬಾಬಾ ಗುರ್ಮೀತ್ ರಾಮ್ ರಹೀಮ್ ಅವರನ್ನು ಪಂಜಾಬ್ ಮತ್ತು ಹರಿಯಾಣ ಉಚ್ಚ ನ್ಯಾಯಾಲಯವು ಒಂದು ಕೊಲೆ ಪ್ರಕರಣದಲ್ಲಿ ದೋಷಮುಕ್ತಗೊಳಿಸಿದೆ. 22 ವರ್ಷಗಳ ಹಿಂದೆ ಸಂಪ್ರದಾಯದ ಮಾಜಿ ವ್ಯವಸ್ಥಾಪಕ ರಣಜೀತರ ಹತ್ಯೆಯ ಪ್ರಕರಣದಲ್ಲಿ ಒಟ್ಟು ಐವರನ್ನು ನಿರಪರಾಧಿಗಳೆಂದು ಉಚ್ಚನ್ಯಾಯಾಲಯವು ಘೋಷಿಸಿದೆ. ಇದರಿಂದ ಉಚ್ಚ ನ್ಯಾಯಾಲಯವು ಸಿಬಿಐ ನ್ಯಾಯಾಲಯದ ನಿರ್ಣಯವನ್ನು ರದ್ದುಗೊಳಿಸಿದೆ.
ಯಾವ ಪ್ರಕರಣ ?
ಜುಲೈ 10, 2002 ರಂದು, ಕುರುಕ್ಷೇತ್ರದ ನಿವಾಸಿ ರಣಜೀತ್ ಸಿಂಗನನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ಹರಿಯಾಣದ ಸಿರಸಾದಲ್ಲಿ ಸಂಪ್ರದಾಯದ ಪ್ರಧಾನ ಕಚೇರಿಯಲ್ಲಿ ಬಾಬಾ ಗುರ್ಮೀತ್ ರಾಮ್ ರಹೀಮ್ ಮಹಿಳೆಯರನ್ನು ಲೈಂಗಿಕವಾಗಿ ಶೋಷಿಸುತ್ತಿದ್ದ ಮಾಹಿತಿಯುಳ್ಳ ಮಾನಹಾನಿಕರ ಪತ್ರಗಳನ್ನು ರಣಜಿತ್ ಸಿಂಗ್ ಎಲ್ಲೆಡೆ ಹಂಚುತ್ತಿದ್ದನು ಎಂದು ಸಂಪ್ರದಾಯದ ಆಡಳಿತಕ್ಕೆ ಅನುಮಾನವಿತ್ತು. ಅದಕ್ಕಾಗಿಯೇ ಅವನನ್ನು ಹತ್ಯೆ ಮಾಡಲಾಗಿದೆ ಎಂದು ಹೇಳಲಾಗುತ್ತಿತ್ತು. 2003ರ ಜನವರಿಯಲ್ಲಿ ಈ ಪ್ರಕರಣವನ್ನು ಸಿಬಿಐಗೆ ವಹಿಸಲಾಗಿತ್ತು. ಅಕ್ಟೋಬರ್ 2021 ರಲ್ಲಿ ಐದು ಜನರು ತಪ್ಪಿತಸ್ಥರೆಂದು ಸಾಬೀತಾಗಿತ್ತು. ಈಗ ಉಚ್ಚ ನ್ಯಾಯಾಲಯವು ಎಲ್ಲ 5 ಆರೋಪಿಗಳನ್ನು ನಿರಪರಾಧಿಗಳೆಂದು ಘೋಷಿಸಿದೆ.
ಈ ಪತ್ರವನ್ನು ಅಂದಿನ ಪ್ರಧಾನಮಂತ್ರಿ ಅಟಲ್ ಬಿಹಾರಿ ವಾಜಪೇಯಿ ಅವರಿಗೂ ಕಳುಹಿಸಲಾಗಿತ್ತು. ಇದಾದ ನಂತರ ಸಿರಸಾ ಪತ್ರಕರ್ತ ರಾಮಚಂದ್ರ ಛತ್ರಪತಿಯವರು ತಮ್ಮ ಸುದ್ದಿಪತ್ರಿಕೆಯಲ್ಲಿ ಆ ಪತ್ರವನ್ನು ಪ್ರಕಟಿಸಿದರು. ಇದರಿಂದ ನವೆಂಬರ್ 21, 2002ರಂದು ಪತ್ರಕರ್ತ ಛತ್ರಪತಿಯವರನ್ನು ಹತ್ಯೆ ಮಾಡಲಾಗಿತ್ತು. ಛತ್ರಪತಿಯ ಹತ್ಯೆಯ ಪ್ರಕರಣದಲ್ಲಿ ರಾಮ್ ರಹೀಮ್ ಜೀವಾವಧಿ ಕಾರಾಗೃಹ ಶಿಕ್ಷೆಯನ್ನು ಅನುಭವಿಸುತ್ತಿದ್ದಾನೆ.
FIR Against Kunal Kamra : ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಹಾಸ್ಯ ಕಲಾವಿದ ಕುಣಾಲ ಕಮ್ರಾ ವಿರುದ್ಧ ದೂರು ದಾಖಲು!
Fake Currency Racket : ಜಾಲದಿಂದ ನಕಲಿ ಭಾರತೀಯ ಕರೆನ್ಸಿ ನೋಟುಗಳ ಮುದ್ರಣ ಪತ್ತೆ!
Kerala HC on Waqf : ಕೇರಳ ಹೈಕೋರ್ಟ್ನಿಂದ ರಾಜ್ಯ ವಕ್ಫ್ ಮಂಡಳಿಗೆ ನೀತಿ ನಿರ್ಧಾರಗಳನ್ನು ತೆಗೆದುಕೊಳ್ಳದಂತೆ ತಡೆ
ಬದರಿನಾಥ ದೇವಸ್ಥಾನದ ದೇಣಿಗೆ ಹಣ ಕಳ್ಳತನ ಪ್ರಕರಣ; ದೇವಸ್ಥಾನದ ಮಾಜಿ ಅಧಿಕಾರಿಯ ಬಂಧನ : Badrinath Temple Arrest
‘ಹಿಂದಿ ಮತ್ತು ಉರ್ದು ಭಾರತದ ಭಾಷೆಗಳು, ಆದರೆ ಸಂಸ್ಕೃತ ಹೊರಗಿನಿಂದ ಬಂದಿದೆಯಂತೆ!’ : Congress MP Mohammad Javed
ಮಾಫಿಯಾಗಳನ್ನು ನರಕಕ್ಕೆ ಅಥವಾ ಜೈಲಿಗೆ ಕಳುಹಿಸುತ್ತೇನೆ ! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ : CM Yogi Adityanath